‘ಜಾಂಬೊಯ್ ಟುರ್ರೋಯ್ ಅಂತ ಒಂದೆರಡು ಅಸಂಗತ ಶಬ್ದಗಳನ್ನಷ್ಟೇ ಹೇಳುತ್ತಿದ್ದವನು ನಮ್ಮೂರ ಹುಚ್ಚ ಅಲೀಮ. ಅವನ ಈ ಸೌಂಡ್ ಬಂದ ಕೂಡಲೇ ಮಕ್ಕಳೆಲ್ಲ ಅವನ ಬಳಿ ಓಡುತ್ತಿದ್ದೆವು. ನಮ್ಮ ಸಿನಿಮಾದ ತುರ್ರಾ ಹಾಡು ಹುಟ್ಟಿಗೂ ಅವನೇ ಕಾರಣ. ಪ್ರತಿಯೊಬ್ಬರೊಳಗಿನ ಹುಚ್ಚನಿಗೆ ಈ ಹಾಡು ಅರ್ಪಣೆ’.
26
ಹೀಗಂದದ್ದು ನಿರ್ದೇಶಕ ಯೋಗರಾಜ ಭಟ್. ಅವರ ನಿರ್ದೇಶನದ ‘ಮನದ ಕಡಲು’ ಚಿತ್ರದ ‘ತುರ್ರಾ’ ಹಾಡಿನ ಬಿಡುಗಡೆ ವೇಳೆ ಈ ಹಾಡು ಹುಟ್ಟಿದ ಬಗೆಯನ್ನು ಯೋಗರಾಜ್ ಭಟ್ ತೆರೆದಿಟ್ಟರು.
36
ಆಷಾಢದ ಒಂದು ದಿನ ವಾಕಿಂಗ್ ಮಾಡುತ್ತಿರುವಾಗ ಸಂಗೀತ ನಿರ್ದೇಶಕ ಹರಿಕೃಷ್ಣ ಈ ಟ್ಯೂನ್ ಕೇಳಿಸಿದರು. ಬೀಸಿ ಬರ್ತಿದ್ದ ಗಾಳಿ ಜೊತೆಗೆ ಅವರು ಹಾಡುತ್ತಿದ್ದ ರೀತಿ ಬಹಳ ಸೊಗಸಾಗಿತ್ತು.
46
ಇದಕ್ಕೆ ಆ ಕ್ಷಣಕ್ಕೆ ತೋಚಿದ ಲಿರಿಕ್ಸ್ ಸೇರಿಸಿದೆ. ಅದನ್ನು ನಿರ್ಮಾಪಕ ಕೃಷ್ಣಪ್ಪರಿಗೆ ತೋರಿಸಿದೆ. ಅವರಿಗೆ ಆ ಅನರ್ಥ ಲಿರಿಕ್ಸೇ ಇಷ್ಟವಾಯ್ತು. ಅದೇ ಅಂತಿಮವೂ ಆಯಿತು. ಸದ್ಯ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ ಎಂದರು.
56
ನಿರ್ಮಾಪಕ ಇ ಕೃಷ್ಣಪ್ಪ, ‘ಭಟ್ಟರು ಹಾಡಿನ ಈ ಅರ್ಥರಹಿತ ಸಾಹಿತ್ಯ ವರ್ಕೌಟ್ ಆಗುತ್ತೋ ಇಲ್ವೋ ಅಂತ ಇನ್ನೊಂದು ಲಿರಿಕ್ಸ್ ರೆಡಿ ಮಾಡ್ಕೊಂಡು ಒಂದೂವರೆ ತಿಂಗಳು ಒದ್ದಾಡಿದರು. ನಾನು ಇದನ್ನೇ ಫೈನಲ್ ಮಾಡಿ ಅಂದೆ. ಈ ಹಾಡು ಆಮೇಲೆ ಎಲ್ಲರಿಗೂ ಇಷ್ಟ ಆಯ್ತು’ ಎಂದರು.
66
ನಾಯಕ ಸುಮುಖ, ‘ಶೂಟಿಂಗ್ ವೇಳೆ ಭಟ್ಟರು ಈ ಹಾಡಲ್ಲಿ ಬಂದಿರುವ ರೀತಿ ವಿಚಿತ್ರ ಉದ್ಗಾರ ಹೊಮ್ಮಿಸುತ್ತಿದ್ದರು. ಶುರುವಲ್ಲಿ ಏನೇನೂ ಅರ್ಥ ಆಗುತ್ತಿರಲಿಲ್ಲ. ಈಗೀಗ ಅವುಗಳೆಲ್ಲ ನನ್ನ ಹುಚ್ಚುತನಕ್ಕೂ ಬಳಕೆ ಆಗುತ್ತವೆ. ಈ ಹಾಡೂ ಟ್ರೆಂಡಿಂಗ್ ಆಗುವ ವಿಶ್ವಾಸ ಇದೆ’ ಎಂದರು. ನಾಯಕಿ ರಾಶಿಕಾ, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ತಂಡದವರು ಹಾಜರಿದ್ದರು. ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್ ಯೂಟ್ಯೂಬ್ನಲ್ಲಿ ಈ ಹಾಡು ಕೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.