ದಿಢೀರ್ ಪ್ರತ್ಯಕ್ಷವಾದ ರಾಧಿಕಾ ಕುಮಾರಸ್ವಾಮಿ ಹೇಳದೆ ಉಳಿಸಿದ ವಿಚಾರ!

First Published Jan 6, 2021, 8:45 PM IST

ಬೆಂಗಳೂರು(ಜ.  06)  ವಂಚಕ  ಯುವರಾಜ್ ನಿಂದ  ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪಗಳಿಗೆ ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ.  ಬುಧವಾರದ ಬಹುಪಾಲು ಮಾಧ್ಯ,ಮಗಳನ್ನು ಆಕ್ರಮಿಸಿಕೊಂಡಿದ್ದು ರಾಧಿಕಾ ... ಆದರೂ ಅನೇಕ ಅನುಮಾನಗಳಿಗೆ ತೆರೆ ಬಿದ್ದಿಲ್ಲ.

ರಾಧಿಕಾ ಕುಮಾರಸ್ವಾ,ಮಿ ಅಚ್ಚ ಕನ್ನಡದ ನಾಯಕಿ
undefined
ನಿನಗಾಗಿ ಚಿತ್ರದ ಮೂಲಕ ಜನಮನ ಗೆದ್ದವರು.
undefined
ತವರಿಗೆ ಬಾ ತಂಗಿ ರಾಧಿಕಾ ಅವರಿಗೆ ಮತ್ತೊಂದು ಇಮೇಜ್ ತಂದುಕೊಟ್ಟಿತು..
undefined
ಸ್ವೀಟಿಯಾಗಿ ಕಾಣಿಸಿಕೊಂಡು ಸಿನಿಮಾ ನಿರ್ಮಾಣದಲ್ಲಿಯೂ ಒಂದು ಕೈ ನೋಡಿದರು.
undefined
ಇದೆಲ್ಲದರ ನಡುವೆ ವಂಚಕ ಯುವರಾಜ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಬಂದಿದ್ದಕ್ಕೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡುವ ಕೆಲಸ ಮಾಡಿದರು.
undefined
ನನಗೂ ಮತ್ತು ನನ್ನ ಕುಟುಂಬಕ್ಕೂ ಮತ್ತು ಬಂಧನದಲ್ಲಿರುವ ಯುವರಾಜ್ ಗೂ ವ್ಯವಹಾರಿಕ ಸಂಬಂಧ ಯಾವುದು ಇಲ್ಲ.. ಒಂದು ಸಿನಿಮಾ ನಿರ್ಮಾಣದ ಮಾತುಕತೆ ಮಾತ್ರ ನಡೆದಿತ್ತು ಎಂಬುದು ರಾಧಿಕಾ ಅವರ ಮಾತು.
undefined
ನಾಟ್ಯ ರಾಣಿ ಶಾಂತಲೆ ಚಿತ್ರಕ್ಕಾಗಿ ಯುವರಾಜ್ ಅವರ ಕಡೆಯಿಂದ 75 ಲಕ್ಷ ವರ್ಗಾವಣೆಯಾಗಿದೆ ಎಂದ ರಾಧಿಕಾ. ಅಗ್ರೀಮೆಂಟ್ ಆಗಿತ್ತಾ ಕೇಳಿದರೆ ಇಲ್ಲವೆನ್ನುತ್ತಾರೆ. ಇಷ್ಟೊ ಮೊತ್ತದ ಹಣ ಯಾವುದ ಅಗ್ರೀಮೆಂಟ್ ಇಲ್ಲದೇ ಹೇಗೆ ವರ್ಗಾವಣೆಯಾಯಿತು ಎಂಬುದಕ್ಕೆ ರಾಧಿಕಾ ಬಳಿ ಇಲ್ಲ ಉತ್ತರ.
undefined
ಚಿತ್ರದಲ್ಲಿ ನಟಿಸಲುಮೊದಲ ಕಂತಾಗಿ 15 ಲಕ್ಷ ರೂ. ಯುವರಾಜ್ ಅಕೌಂಟಿನಿಂದ ರಾಧಿಕಾ ಖಾತೆಗೆ ವರ್ಗಾವಣೆಯಾಗಿದೆ. ಇನ್ನುಳಿದ 60 ಲಕ್ಷ ಕೊಟ್ಟವರು ಚಿತ್ರ ನಿರ್ಮಾಪಕರು ಎನ್ನುತ್ತಿದ್ದಾರೆ ಸ್ಯಾಂಡಲ್‌ವುಡ್ ಸ್ವೀಟಿ. ಯಾರು ಆ ಚಿತ್ರ ನಿರ್ಮಾಪಕರುಎಂದು ಕೇಳಿದರೆ ಗೊತ್ತಿಲ್ಲ ಎನ್ನುವ ಉತ್ತರ ಬರುತ್ತಿದೆ ಕುಮಾರಸ್ವಾಮಿ ಅವರ ಪತ್ನಿಯಿಂದ.
undefined
click me!