ಕುಂಭಮೇಳ (Kumbhamela) ಆರಂಭವಾದಾಗಿನಿಂದ ದೇಶ, ವಿದೇಶದಿಂದ ಭಕ್ತರು ಕುಂಭ ಸ್ನಾನ ಮಾಡಲು ಪ್ರಯಾಗ್ ರಾಜ್ ನತ್ತ ಮುಖ ಮಾಡಿದ್ದಾರೆ. ಸೆಲೆಬ್ರಿಟಿಗಳು ಸಹ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ. ಈ ಹಿಂದೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಪ್ರಯಾಗ್ ರಾಜ್ ಶಾಹಿ ಸ್ನಾನ ಮಾಡಿರುವ ವಿಡಿಯೋಗಳನ್ನು ಶೇರ್ ಮಾಡಿದ್ದರು, ಅಲ್ಲದೇ ನಿರೂಪಕಿ ಅನುಶ್ರೀ, ನಟ ರಾಜ್ ಬಿ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಜೊತೆಯಾಗಿ ಪ್ರಯಾಗ್ ರಾಜ್ ಗೆ ತೆರಳಿದ್ದರು.