ಸರ್ದಾರ ವಲ್ಲಭಭಾಯಿ ಪಟೇಲ್ ಎರಡು ಬಾರಿ ಆರ್ಎಸ್ಎಸ್ ಬ್ಯಾನ್ ಮಾಡಿದ್ದರು. ಬಿಜೆಪಿ ಅವರೇ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು 3 ಸಾವಿರ ಕೋಟಿ ರೂ. ಖರ್ಚು ಮಾಡಿ ಸ್ಥಾಪನೆ ಮಾಡಿದ್ದಾರೆ. ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಕಾಂಗ್ರೆಸ್ಸಿಗರು ಮತ್ತು ಗೃಹಸಚಿವರಾಗಿದ್ದವರು ಎಂಬುವುದು ಬಿಜೆಪಿ ಗಮನಕ್ಕಿರಲಿ. ದೇಶ ಪ್ರೇಮ ಅನ್ನೋದು ಪ್ರತಿಯೊಬ್ಬರಲ್ಲಿಯೂ ಇದೆ. ಭಾರತ ದೇಶದಲ್ಲಿದ್ದರೆ ಎಲ್ಲರೂ ದೇಶ ಪ್ರೇಮಿಗಳ. ಹಿಂದೂ, ಸಿಖ್, ಇಸಾಯಿ, ಮುಸ್ಲಿಂ ಎಲ್ಲರೂ ದೇಶ ಪ್ರೇಮಿಗಳು ಎಂದು ಸಂತೋಷ್ ಲಾಡ್ ಹೇಳಿದರು.