ಇಂಗ್ಲೆಂಡ್ನಲ್ಲಿ ನಡೆದ ಪೋಲೋ ಪಂದ್ಯಾವಳಿಯ ವೇಳೆ ಉದ್ಯಮಿ ಸಂಜಯ್ ಕಪೂರ್ ಅವರು ಹೃದಯಾಘಾತವಾಗಿ ಮೃತಪಟ್ಟಿದ್ದು, ಉದ್ಯಮ ಕ್ಷೇತ್ರ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ಶಾಕಿಂಗ್ ಸುದ್ದಿಯಾಗಿದೆ. ಇದೀಗ ಅವರು ಅಮೆರಿಕದ ಪೌರತ್ವ ಪಡೆದಿರುವುದರಿಂದ ಅಂತ್ಯಕ್ರಿಯೆಗಳು ವಿಳಂಬವಾಗಬಹುದು ಎನ್ನಲಾಗಿದೆ. ಏಕೆಂದರೆ ಅವರ ಅಂತ್ಯಕ್ರಿಯೆಯನ್ನು ತಾಯಿನಾಡದ ಭಾರತದಲ್ಲಿ ಮಾಡಲು ಕುಟುಂಬ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ. ಇಂಟರ್ನೆಟ್ ದಾಖಲಾಗಿರುವ ಕೆಲವು ಮಾಹಿತಿಗಳ ಪ್ರಕಾರ, ಪ್ರಜ್ಞೆ ತಪ್ಪುವ ಮೊದಲು ಅವರು "ನಾನು ಏನನ್ನೋ ನುಂಗಿದ್ದೇನೆ" ಎಂದು ಹೇಳಿದ್ದು, ಆಕಸ್ಮಿಕವಾಗಿ ಜೇನುನೊಣವನ್ನು ನುಂಗಿರುವ ಶಂಕೆ ವ್ಯಕ್ತವಾಗಿದೆ. ಇದೇ ಅವರು ಹೃದಯಾಘಾತಕ್ಕೀಡಾಗುವ ಅಸಾಮಾನ್ಯ ಕಾರಣವಾಗಿರಬಹುದು ಎನ್ನಲಾಗಿದೆ.