ಮನೆಯಲ್ಲಿ ಗಾಳಿ ಬೆಳಕು ಇದ್ರೆ ಹೆಚ್ಚು ತೇವ ಹಿಡಿಯೋದಿಲ್ಲ. ಪ್ರತಿದಿನ ಅರ್ಧ ಗಂಟೆ ಬಾಗಿಲು ತೆಗೆದು ಮನೆಯೊಳಗೆ ಗಾಳಿ ಬರುವ ಹಾಗೆ ಮಾಡಬೇಕು. ಹೀಗೆ ಮಾಡಿದ್ರೆ ಒದ್ದೆ ಇರೋದಿಲ್ಲ. ಗಾಳಿ ಬೆಳಕು ಇದ್ರೆ ಅಡುಗೆ ಮನೆಯಲ್ಲಿನ ತೇವಾಂಶ ಕಡಿಮೆಯಾಗುತ್ತದೆ. ಅಡುಗೆ ಮನೆ ಆಗಾಗ ಕ್ಲೀನ್ ಮಾಡಬೇಕು. ಹೀಗೆ ಮಾಡಿದ್ರೆ ಒದ್ದೆ ಇರೋದಿಲ್ಲ, ತಿಂದಿದ್ದೆಲ್ಲಾ ಅಲ್ಲಲ್ಲಿ ಬಿದ್ದಿರೋದಿಲ್ಲ. ಕೊಳೆ ಇದ್ರೆ ಹಾಳು ಹಿಡಿಯುತ್ತದೆ. ಅಡುಗೆಮನೆಯಲ್ಲಿ ನೀರು ಬಳಕೆ ಹೆಚ್ಚಾಗಿರುತ್ತದೆ. ಹಾಗಾಗಿ ಇಲ್ಲಿ ಸ್ಚಚ್ಛತೆ ಮುಖ್ಯವಾಗುತ್ತದೆ.