16ನೇ ದಿನದ ಲಕ್ಕುಂಡಿ ಉತ್ಖನನ ವರದಿ: ವೀರಭದ್ರೇಶ್ವರ ದೇವಸ್ಥಾನದ ಐತಿಹಾಸಿಕ ರಹಸ್ಯ!

Published : Feb 04, 2026, 07:17 AM IST

ಗದಗ ಜಿಲ್ಲೆಯ ಲಕ್ಕುಂಡಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತತ್ವ ಇಲಾಖೆಯು ಉತ್ಖನನ ನಡೆಸುತ್ತಿದೆ. ಈ ಹಿಂದೆ ಶಿವಲಿಂಗದ ಪೀಠ, ಪಚ್ಚೆ ಹರಳು ಸೇರಿದಂತೆ ಹಲವು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಈ ಪ್ರದೇಶದ ಐತಿಹಾಸಿಕ ರಹಸ್ಯಗಳನ್ನು ಶೋಧಿಸುವ ಕಾರ್ಯ ಮುಂದುವರೆದಿದೆ.

PREV
14
Lakkundi ಲಕ್ಕುಂಡಿಯ ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನ

ಗದಗ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣವಾದ ಲಕ್ಕುಂಡಿಯ ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತತ್ವ ಇಲಾಖೆಯಿಂದ ನಡೆಯುತ್ತಿರುವ ಉತ್ಖನನ ಕಾರ್ಯವು ಮುಂದುವರೆದಿದೆ.

24
ಉತ್ಖನನ ಪ್ರಕ್ರಿಯೆ

ಕಳೆದ 16 ದಿನಗಳಿಂದ ನಡೆಯುತ್ತಿರುವ ಈ ಉತ್ಖನನ ಪ್ರಕ್ರಿಯೆಯಲ್ಲಿ ಮಂಗಳವಾರ ತಜ್ಞರ ಮಾರ್ಗದರ್ಶನದಲ್ಲಿ ಕಾರ್ಮಿಕರು ದೇವಸ್ಥಾನದ ಸುತ್ತಮುತ್ತಲೂ ವೈಜ್ಞಾನಿಕವಾಗಿ ಮಣ್ಣನ್ನು ಅಗೆದರು. ಆದರೆ, ಯಾವುದೇ ಪ್ರಾಚ್ಯಾವಶೇಷಗಳು ಪತ್ತೆಯಾಗಿಲ್ಲ.

34
ಉತ್ಖನನ ಮುಂದುವರಿಯಲಿದೆ

ಈ ಹಿಂದಿನ ದಿನಗಳಲ್ಲಿ ಪತ್ತೆಯಾದ ಶಿವಲಿಂಗದ ಪೀಠ, ಅತ್ಯಂತ ವಿಶಿಷ್ಟವಾದ ಪಚ್ಚೆ ಹರಳು, ನಾಗರ ಕಲ್ಲು, ಪ್ರಾಚೀನ ಮೂಳೆಗಳು ಹಾಗೂ ವಿವಿಧ ಶಿಲಾಕೃತಿಗಳ ಕುರಿತು ಸಂಶೋಧನೆ ಚುರುಕುಗೊಂಡಿದೆ. ಉತ್ಖನನ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿಗೆ ರಾಜ್ಯ ಸರ್ಕಾರದಿಂದ 2.25 ಕೋಟಿ; 15 ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು?

44
ಐತಿಹಾಸಿಕ ರಹಸ್ಯಗಳು

ಈ ಅವಶೇಷಗಳು ಯಾವ ರಾಜಮನೆತನದ ಕಾಲಕ್ಕೆ ಸೇರಿದವು ಮತ್ತು ಈ ಪ್ರದೇಶದಲ್ಲಿ ದೇವಸ್ಥಾನದ ಸ್ವರೂಪ ಹೇಗಿತ್ತು ಎಂಬ ಬಗ್ಗೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ​ಲಕ್ಕುಂಡಿಯ ಇತಿಹಾಸವನ್ನು ಮರುಶೋಧಿಸುವ ನಿಟ್ಟಿನಲ್ಲಿ ಈ ಉತ್ಖನನವು ಬಹಳ ಮಹತ್ವದ್ದಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಐತಿಹಾಸಿಕ ರಹಸ್ಯಗಳು ಹೊರಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಲಕ್ಕುಂಡಿಗೆ ಆಗಮಿಸಿದ ಇಟಲಿ-ಗ್ರೀಸ್ ಡೆಕ್ಕನ್ ಹೆರಿಟೇಜ್ ಫೌಂಡೇಶನ್: ಯಾಕೆ ಈ ಭೇಟಿ?

Read more Photos on
click me!

Recommended Stories