ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಳಿಕ ಐತಿಹಾಸಿಕ ನಿರ್ಧಾರಗಳನ್ನು ತೆಗೆಗುಕೊಳ್ಳಲಾಗಿದೆ. ಇದೀಗ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ಹಬ್ಬದ ರಜೆಯನ್ನು ಕಡಿತಗೊಳಿಸಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.
ಭಾರತದಲ್ಲಿ ಬಕ್ರೀದ್ ಹಬ್ಬದ ತಯಾರಿಗಳು ನಡೆಯುತ್ತಿದೆ. ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾಗ ಬಕ್ರೀದ್ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಆದೇಶ ರದ್ದುಗೊಳಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಇದೀಗ ಬಕ್ರೀದ್ ಹಬ್ಬದ ರಜೆಯನ್ನು ಸೀಮಿತಗೊಳಿಸಿ ಆದೇಶ ಹೊರಡಿಸಿದ್ದಾರೆ
25
ಒಂದು ದಿನಕ್ಕೆ ಕಡಿತಗೊಳಿಸಿದ ಸುವೇಂದು
ಪಶ್ಚಿಮ ಬಂಗಾಳದಲ್ಲಿ ಬಕ್ರೀದ್ ಹಬ್ಬಕ್ಕೆ ಎರಡು ದಿನ ರಜೆ ನೀಡಲಾಗಿತ್ತು.ಆದರೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ಆದೇಶ ರದ್ದುಗೊಳಿಸಿ ಇದೀಗ ಬಕ್ರೀದ್ ಹಬ್ಬದ ರಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಇದೀಗ ಮೇ.28ಕ್ಕೆ ಪಶ್ಚಿಮ ಬಂಗಾಳಲ್ಲಿ ಬಕ್ರಿದ್ ರಜೆ ಘೋಷಿಸಲಾಗಿದೆ.
35
ಮೇ.26 ಹಾಗೂ 27ರ ರಜೆ ರದ್ದು
ದೇಶದಲ್ಲಿ ಬಕ್ರೀದ್ ಹಬ್ಬಕ್ಕೆ ಒಂದು ದಿನ ಮಾತ್ರ ರಜೆ ಇದೆ. ಮಮತಾ ಬ್ಯಾನರ್ಜಿ ಸರ್ಕಾರ ಎರಡು ದಿನಕ್ಕೆ ವಿಸ್ತರಣೆ ಮಾಡಿತ್ತು. ಮೇ.26 ಹಾಗೂ ಮೇ.27ರಂದು ಎರಡು ದಿನ ಇದ್ದ ರಜೆಯನ್ನು ಸುವೇಂದ್ ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಮಾಡಿ, ಕೇವಲ ಮೇ.28ಕ್ಕೆ ಮಾತ್ರ ರಜೆ ಘೋಷಿಸಿದೆ.
ಸುವೇಂದು ಅದಿಕಾರಿ ಬಂಗಾಳದಲ್ಲಿ ಅಧಿಕಾರವಹಿಸಿಕೊಂಡ ಬಳಿಕ ಹಲವು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಪೈಕಿ ಬಕ್ರೀದ್, ಈದ್ ಸೇರಿ ಹಬ್ಬಕ್ಕೆ ಪ್ರಾಣಿ ಬಲಿಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಮಾಡುವಂತಿಲ್ಲ ಅನ್ನೋ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.
55
ಹಬ್ಬದ ರಜೆ ಕಡಿತಕ್ಕೆ ಅಸಮಾಧಾನ
ಬಕ್ರೀದ್ ಹಬ್ಬದ ರಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿದ ನಿರ್ಧಾರಕ್ಕೆ ಕೆಲ ಮುಸ್ಲಿಮ್ ಮುಖಂಡರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಬ್ಬದ ರಜೆ ಕಡಿತ ಉತ್ತಮ ನಿರ್ಧಾರವಲ್ಲ. ಎರಡು ದಿನದ ರಜೆಗೆ ಅವಕಾಶ ನೀಡಬೇಕು ಅನ್ನೋ ಮಾತುಗಳು ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ