ಈ ಮಧ್ಯೆ, ಅಣ್ಣಾಮಲೈ ಅವರ ಈ ಹೇಳಿಕೆಯ ಆಡಿಯೊ ಮಾಹಿತಿಯನ್ನು ದೆಹಲಿಯ ಬಿಜೆಪಿ ನಾಯಕರಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಣ್ಣಾಮಲೈ ಅವರ ಈ ಮಾತುಗಳನ್ನು ಕೇಳಿ ಅಮಿತ್ ಶಾ ತೀವ್ರ ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಅಣ್ಣಾಮಲೈ ಬಿಜೆಪಿ ತೊರೆಯುತ್ತಾರಾ? ತೊರೆದ್ರೆ ಯಾವ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆಗಳು ತಮಿಳುನಾಡು ರಾಜಕಾರಣದಲ್ಲಿ ಆರಂಭಗೊಂಡಿವೆ.