'ಪಾಕಿಸ್ತಾನದೊಂದಿಗೆ ಸಿಂಧು ನೀರನ್ನು ಹಂಚಿಕೊಳ್ಳುವ ಒಪ್ಪಂದ ಸ್ಥಗಿತವಾಗಿರುವ ಕಾರಣ, 1987 ಶುರುವಾಗಿ 2007ರಲ್ಲಿ ಪಾಕ್ ನಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ತುಬುಲ್ ಯೋಜನೆಗೆ ಮರುಜೀವ ತುಂಬಬೇಕು' ಎಂದು ಒಮರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಯೋಜನೆಯಡಿ, ಜಮ್ಮುವಿನ ಬಂಡೀಪೊರಾ ಜಿಲ್ಲೆಯ ವುಲಾರ್ ಕೆರೆಗೆ ಝೇಲಂ ನದಿಯ ನೀರು ಹರಿಬಿಟ್ಟರೆ, ಅದರಿಂದ ಸಂಚಾರ ಹಾಗೂ ವಿದ್ಯುತ್ ಉತ್ಪಾದನೆಗೆ ಸಹಾಯವಾಗುತ್ತದೆ ಎಂಬುದು ಅವರ ಇಂಗಿತವಾಗಿತ್ತು.