ಫಸ್ಟ್‌ನೈಟ್‌ನಲ್ಲಿ ಐವರು ಗೆಳೆಯರೊಂದಿಗೆ ಎರಗಿದ ಗಂಡ ನವಾಜ್: ಮತ್ತೊಂದು ಲವ್ ಜಿಹಾದ್ ಕೇಸ್!

Published : Apr 05, 2026, 09:34 AM IST

ಯುವತಿಯೊಬ್ಬರನ್ನು ಪ್ರೀತಿಸಿ, ಹೆಸರು ಬದಲಿಸಿಕೊಂಡು ಮದುವೆಯಾದ ನವಾಜ್ ಎಂಬಾತ, ಮೊದಲ ರಾತ್ರಿಯಂದೇ ತನ್ನ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇ*ಪ್ ಮಾಡಿದ್ದಾನೆ. ಬಳಿಕ ಹಣ, ಆಭರಣ ದೋಚಿ, ಬೀಫ್ ತಿನ್ನಲು ಮತ್ತು ಕಲ್ಮಾ ಓದಲು ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

PREV
15
ಲವ್ ಜಿಹಾದ್ ಆರೋಪ

ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ವಿರುದ್ದ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಇದೀಗ ಇಂತಹುವುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮೊದಲ ರಾತ್ರಿ ತನ್ನ ಐವರುಗೆಳೆಯರೊಂದಿಗೆ ನನ್ನ ಮೇಲೆ ಅತ್ಯಾ*ಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನಂತರ ಕೊಲೆ ಬೆದರಿಕೆ ಹಾಕಿದ್ದಾನೆ.

25
ಸ್ನೇಹ-ಪ್ರೀತಿ-ಮದುವೆ-ಅತ್ಯಾ*ಚಾರ

ಹೈದರಾಬಾದ್‌ನ ಕುಕಟ್‌ಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಡಿಗೆಗೆ ಅಂಗಡಿಯೊಂದು ಬೇಕೆಂದು ಯುವತಿಯನ್ನು ನವಾಜ್ ಪರಿಚಯ ಮಾಡಿಕೊಂಡಿದ್ದನು. ನಂತರ ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ನಂತರ ನವದುರ್ಗ ಎಂದು ಹೆಸರು ಬದಲಿಸಿಕೊಂಡು 2025 ಜೂನ್‌ನಲ್ಲಿ ಯುವತಿಯೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾನೆ.

35
ಐವರು ಗೆಳೆಯರೊಂದಿಗೆ ಸೇರಿ ರೇ*

ಮದುವೆಯಾದ ದಿನವೇ ಫಸ್ಟ್‌ನೈಟ್‌ ಮಾಡಿಕೊಳ್ಳಲು ನವಾಜ್ ಪ್ಲಾನ್ ಮಾಡಿಕೊಂಡಿದ್ದನು. ಕೋಣೆಯನ್ನು ಅಲಂಕಾರ ಮಾಡಲು ಆತನ ಗೆಳೆಯರು ಬಂದಿದ್ದರು. ನಾನು ಕೋಣೆಯೊಳಗೆ ಬರುತ್ತಿದ್ದಂತೆ ಗೆಳೆಯರಾದ ಮುನ್ನಾವರ್ ಶಾರುಖ್‌, ಇಸ್ಮೈಲ್, ಇರ್ಫಾನ್ ಮತ್ತು ಸಮೀರ್ ಜೊತೆ ಸೇರಿಕೊಂಡು ನನ್ನ ಮೇಲೆ ಗ್ಯಾಂಗ್ ರೇ*ಪ್ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

45
ಹಣ, ಚಿನ್ನಾಭರಣ

ಅತ್ಯಾ*ಚಾರ ವಿಷಯ ಯಾರಿಗಾದ್ರೂ ಹೇಳಿದ್ರೆ ಕೊ*ಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವೇ ದಿನಗಳ ಬಳಿಕ ನವಾಜ್‌ಗೆ ತಾನು ಮೂರನೇ ಹೆಂಡತಿ ಎಂಬ ವಿಷಯ ತಿಳಿದಿದೆ. ಮದುವೆಗೂ ಮುಂಚೆ ಮತ್ತು ನಂತರವೂ ಸಂತ್ರಸ್ತೆಯಿಂದ ಹಣ, ಚಿನ್ನಾಭರಣ ಪಡೆದುಕೊಂಡಿದ್ದಾನೆ. ಬೇರೆ ಬೇರೆ ಕಾರಣಗಳನ್ನು ನೀಡಿ ನಮ್ಮ ಕುಟುಂಬಸ್ಥರಿಂದಲೂ ಹಣ ಪಡೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಇದನ್ನೂ ಓದಿ: ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

55
ಬೀಫ್ ತಿನ್ನುವಂತೆ ಕಿರುಕುಳ

ಇಷ್ಟಕ್ಕೆ ಸುಮ್ಮನಾಗದ ನವಾಜ್, ಸಂತ್ರಸ್ತೆಯ ಫ್ಲ್ಯಾಟ್ ಮೇಲೆಯೂ ಸಾಲ ಪಡೆದುಕೊಂಡಿದ್ದಾನೆ. ಚಿನ್ನಾಭರಣಗಳನ್ನು ಒತ್ತೆ ಇಟ್ಟು ಹಣ ತೆಗೆದುಕೊಂಡಿದ್ದಾನೆ. ಮದುವೆ ಬಳಿಕಬೀಫ್ ತಿನ್ನುವಂತೆ, ಕಲ್ಮಾ ಓದುವಂತೆ ನನ್ನ ಮೇಲೆ ಒತ್ತಡ ಹಾಕ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories