ವದಂತಿಗಳು ಹಬ್ಬಿದ್ಯಾಕೆ?
ಪಾಕಿಸ್ತಾನದ ಕಿರಾನಾ ಬೆಟ್ಟ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ ನಂತರ, ಈ ಪ್ರದೇಶದ ಮೇಲೆ ಭಾರತ ದಾಳಿ ನಡೆಸಿದೆಯೇ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮ ಚರ್ಚೆಯಾದವು. ಅಲ್ಲದೇ, ಫ್ಲೈಟ್ ರಾಡಾರ್ನಲ್ಲಿ ಅಮೆರಿಕ ಮತ್ತು ಈಜಿಪ್ಟ್ ಸೇನೆಗೆ ಸೇರಿದ ವಿಮಾನಗಳು ತಿರುಗಾಡಿದ ದೃಶ್ಯಗಳು ಈ ಪಿತೂರಿಗಳನ್ನು ಮತ್ತಷ್ಟು ಗಂಭೀರವಾಗಿ ಮಾಡಿದೆ. ಈ ಬಗ್ಗೆ ಏರ್ ಮಾರ್ಷಲ್ ಭಾರ್ತಿ ಹೇಳಿದಂತೆ, ಭಾರತದ ಸೈನ್ಯವು ಪಾಕಿಸ್ತಾನದ ಸೇನೆ ಮೇಲೆ ದಾಳಿ ಮಾಡಿಲ್ಲ. ನಾವು ಕೇವಲ ಭಯೋತ್ಪಾದಕರನ್ನು ಮತ್ತು ಅವರನ್ನು ಬೆಂಬಲಿಸುವ ಜಾಗವನ್ನು ಮಾತ್ರವೇ ಗುರಿಯಾಗಿಸಿದ್ದೇವೆ ಎಂದಿದ್ದಾರೆ. ಒಟ್ಟು 9 ಭಯೋತ್ಪಾದಕ ತಾಣಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದ್ದವು. ಭಾರತದ ದಾಳಿಗೆ ಪಾಕ್ ನ ವಾಯುನೆಲೆಗಳಾದ ಸರ್ಗೋಧಾ, ರಹೀಮ್ ಯಾರ್ ಖಾನ್, ಚಕ್ಲಾಲಾ, ಸುಕ್ಕೂರ್, ಭೋಲಾರಿ, ಜಾಕೋಬಾಬಾದ್ (ವಾಯುನೆಲೆಗಳು) ಜೊತೆಗೆ ಪಸ್ರೂರ್, ಚುನಿಯನ್, ಆರಿಫ್ವಾಲಾ (ರಾಡಾರ್ ಕೇಂದ್ರಗಳು) ಮತ್ತು ಹಲವು ಪ್ರದೇಶಗಳು ತೀವ್ರ ಹಾನಿಗೆ ಗುರಿಯಾಗಿದೆ.