ಜೂನ್ 12ರ ಗುರುವಾರ ಅಹಮದಾಬಾದ್ನಲ್ಲಿ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಈ ದುರಂತ ಅಪಘಾತದಲ್ಲಿ, ಪ್ರಯಾಣಿಕರು, ಸಿಬ್ಬಂದಿ, ಪೈಲಟ್ಗಳು ಮತ್ತು ವಿಮಾನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಜನರು ಸೇರಿದಂತೆ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತ ನಡೆದ ಒಂದು ದಿನದ ಬಳಿಕ ಹೃದಯ ಬಿರಿಯುವಂಥ ವಿಚಾರಗಳು ಬೆಳಕಿಗೆ ಬರಲು ಆರಂಭಿಸಿದೆ. ಅಂತಹ ಒಂದು ಕಥೆ ಗಧಾಡಾ ತಾಲ್ಲೂಕಿನ ಅಡ್ತಾಲಾ ಗ್ರಾಮದ ಒಬ್ಬ ಯುವಕ ಮತ್ತು ಯುವತಿಯದ್ದಾಗಿದೆ.