ವಿಟಮಿನ್ ಆಗರವಾಗಿರುವ ಸೀತಾಫಲವನ್ನು ಸೇವಸಿದರೇನು ಫಲ?

Suvarna News   | Asianet News
Published : Apr 12, 2021, 06:37 PM IST

ಸೀತಾಫಲಗಳು ವಿಟಮಿನ್ ಸಿ ಯಂತಹ ಆ್ಯಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ, ಇದು ನಮ್ಮ ದೇಹದಲ್ಲಿ ಮುಕ್ತ radicleಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿ ಪೊಟ್ಯಾಷಿಯಮ್ ಮತ್ತು ಮೆಗ್ನಿಷಿಯಮ್ ಕೂಡ ಅಧಿಕವಾಗಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಹೃದಯವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೀತಾಫಲದಲ್ಲಿ ವಿಟಮಿನ್ ಎ ಇದೆ, ಇದು ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣು ಕಣ್ಣುಗಳಿಗೆ ಉತ್ತಮ. ಮತ್ತು ಅಜೀರ್ಣ ಸಮಸ್ಯೆಗೂ ಮದ್ದು. ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ, ಏಕೆಂದರೆ ತಾಮ್ರದ ಅಂಶ ಮಲಬದ್ಧತೆಯನ್ನು ಗುಣಪಡಿಸಲು ಸಹಕರಿಸುತ್ತದೆ. ಅತಿಸಾರ ಮತ್ತು ಭೇದಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

PREV
110
ವಿಟಮಿನ್ ಆಗರವಾಗಿರುವ ಸೀತಾಫಲವನ್ನು ಸೇವಸಿದರೇನು ಫಲ?

ಸೀತಾಫಲ ಹಣ್ಣನ್ನು ಹೆಚ್ಚಿನ ಜನ ಇಷ್ಟ ಪಟ್ಟು ತಿನ್ನುತ್ತಾರೆ. ಮೃದುವಾದ ತುಂಬಾ ರುಚಿಕರವಾದ ಹಣ್ಣು ಇದಾಗಿದೆ. ಇದರಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ. ಕೇವಲ ಹಣ್ಣು ಮಾತ್ರವಲ್ಲ, ಅದರ ಬೀಜ, ಎಲೆ, ತೊಗಟೆ ಎಲ್ಲವೂ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ಪುಟ್ಟ ಮಾಹಿತಿ..

ಸೀತಾಫಲ ಹಣ್ಣನ್ನು ಹೆಚ್ಚಿನ ಜನ ಇಷ್ಟ ಪಟ್ಟು ತಿನ್ನುತ್ತಾರೆ. ಮೃದುವಾದ ತುಂಬಾ ರುಚಿಕರವಾದ ಹಣ್ಣು ಇದಾಗಿದೆ. ಇದರಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ. ಕೇವಲ ಹಣ್ಣು ಮಾತ್ರವಲ್ಲ, ಅದರ ಬೀಜ, ಎಲೆ, ತೊಗಟೆ ಎಲ್ಲವೂ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ಪುಟ್ಟ ಮಾಹಿತಿ..

210

ಹೊಟ್ಟೆ ಉರಿ ಸಮಸ್ಯೆ ಕಂಡು ಬಂದರೆ ಸೀತಾಫಲ ಜೂಸ್ ಸೇವಿಸಿದರೊಳಿತು. ಸೀತಾಫಲದ ಗಿಡದ ತೊಗಟೆಯನ್ನು ಜಜ್ಜಿ ಆ ರಸವನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ, ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.

ಹೊಟ್ಟೆ ಉರಿ ಸಮಸ್ಯೆ ಕಂಡು ಬಂದರೆ ಸೀತಾಫಲ ಜೂಸ್ ಸೇವಿಸಿದರೊಳಿತು. ಸೀತಾಫಲದ ಗಿಡದ ತೊಗಟೆಯನ್ನು ಜಜ್ಜಿ ಆ ರಸವನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ, ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.

310

ಸೀತಾಫಲದ ಎಲೆಗಳನ್ನು ಚೆನ್ನಾಗಿ ರುಬ್ಬಿ ಕುರು, ಕಜ್ಜಿಗಳಿಗೆ ಹಚ್ಚಿದರೆ ಬೇಗನೆ ಕಡಿಮೆಯಾಗುತ್ತದೆ.ಈ ಕಷಾಯ ಸೇವಿಸಿದರೆ ಮಹಿಳೆಯರ ಋತುಸ್ರಾವದ ಸಮಸ್ಯೆಯೂ ನಿವಾರಣೆಯಾಗುತ್ತದೆ. 

ಸೀತಾಫಲದ ಎಲೆಗಳನ್ನು ಚೆನ್ನಾಗಿ ರುಬ್ಬಿ ಕುರು, ಕಜ್ಜಿಗಳಿಗೆ ಹಚ್ಚಿದರೆ ಬೇಗನೆ ಕಡಿಮೆಯಾಗುತ್ತದೆ.ಈ ಕಷಾಯ ಸೇವಿಸಿದರೆ ಮಹಿಳೆಯರ ಋತುಸ್ರಾವದ ಸಮಸ್ಯೆಯೂ ನಿವಾರಣೆಯಾಗುತ್ತದೆ. 

410

ಸೀತಾಫಲ ಸೇವಿಸುತ್ತಿದ್ದರೆ ಹಿಮೋಗ್ಲೋಬಿನ್ ಕಣಗಳು ಹೆಚ್ಚುತ್ತದೆ. ನಿರಂತರವಾಗಿ ಈ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ಹಲ್ಲು ಮತ್ತು ದವಡೆ ಸಮಸ್ಯೆ ನಿವಾರಣೆಯಾಗುತ್ತದೆ. 

ಸೀತಾಫಲ ಸೇವಿಸುತ್ತಿದ್ದರೆ ಹಿಮೋಗ್ಲೋಬಿನ್ ಕಣಗಳು ಹೆಚ್ಚುತ್ತದೆ. ನಿರಂತರವಾಗಿ ಈ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ಹಲ್ಲು ಮತ್ತು ದವಡೆ ಸಮಸ್ಯೆ ನಿವಾರಣೆಯಾಗುತ್ತದೆ. 

510

ಸೀತಾಫಲದ ಎಲೆ ಒಣಗಿಸಿ ಬಾಣಲೆಯಲ್ಲಿ ಹಾಕಿ ಅದನ್ನು ಚೆನ್ನಾಗಿ ಹುರಿಯಿರಿ. ನಂತರ ಪುಡಿಮಾಡಿಕೊಂಡು ತೆಂಗಿನೆಣ್ಣೆಯಲ್ಲಿ ಕಲಸಿ ಹುಣ್ಣಿಗೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ.

ಸೀತಾಫಲದ ಎಲೆ ಒಣಗಿಸಿ ಬಾಣಲೆಯಲ್ಲಿ ಹಾಕಿ ಅದನ್ನು ಚೆನ್ನಾಗಿ ಹುರಿಯಿರಿ. ನಂತರ ಪುಡಿಮಾಡಿಕೊಂಡು ತೆಂಗಿನೆಣ್ಣೆಯಲ್ಲಿ ಕಲಸಿ ಹುಣ್ಣಿಗೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ.

610

ಸೀತಾಫಲದ ತೊಗಟೆ ಕಷಾಯ ಮಾಡಿ ಕುಡಿದರೆ ಬೇಧಿ, ಆಮಶಂಕೆಗೆ ಮದ್ದು. ಹಣ್ಣಿನ ಸಿಪ್ಪೆಯಿಂದ ಕಷಾಯ ತಯಾರಿಸಿ ಸೇವಿಸಿದರೆ ಮೂತ್ರ ಸಮಸ್ಯೆಗೆ ರಾಮಬಾಣ.

ಸೀತಾಫಲದ ತೊಗಟೆ ಕಷಾಯ ಮಾಡಿ ಕುಡಿದರೆ ಬೇಧಿ, ಆಮಶಂಕೆಗೆ ಮದ್ದು. ಹಣ್ಣಿನ ಸಿಪ್ಪೆಯಿಂದ ಕಷಾಯ ತಯಾರಿಸಿ ಸೇವಿಸಿದರೆ ಮೂತ್ರ ಸಮಸ್ಯೆಗೆ ರಾಮಬಾಣ.

710

ಆಯಾಸವು ದೈನಂದಿನ ಜೀವನಶೈಲಿ ಮತ್ತು ರೋಗಗಳು ಸೇರಿ ಹಲವು ಅಂಶಗಳಿಂದ ಉಂಟಾಗಬಹುದು. ಸೀತಾಫಲದ 100 ಗ್ರಾಂ ಸರ್ವಿಂಗ್ 101 ಕಿಲೋ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ಶಿಫಾರಸು ಮಾಡಲಾದ ಆಹಾರ ಭತ್ಯೆಯ ಸುಮಾರು 5% ರಷ್ಟಿದೆ.ಇದರಿಂದ ಆಯಾಸ ಕಡಿಮೆಯಾಗುತ್ತದೆ. 

ಆಯಾಸವು ದೈನಂದಿನ ಜೀವನಶೈಲಿ ಮತ್ತು ರೋಗಗಳು ಸೇರಿ ಹಲವು ಅಂಶಗಳಿಂದ ಉಂಟಾಗಬಹುದು. ಸೀತಾಫಲದ 100 ಗ್ರಾಂ ಸರ್ವಿಂಗ್ 101 ಕಿಲೋ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ಶಿಫಾರಸು ಮಾಡಲಾದ ಆಹಾರ ಭತ್ಯೆಯ ಸುಮಾರು 5% ರಷ್ಟಿದೆ.ಇದರಿಂದ ಆಯಾಸ ಕಡಿಮೆಯಾಗುತ್ತದೆ. 

810

ಸೀತಾಫಲದಲ್ಲಿ ವಿಟಮಿನ್ ಸಿ ಮತ್ತು ರಿಬೋಫ್ಲೇವಿನ್ ಸಮೃದ್ಧ ಮೂಲ, ಇದು ಕಣ್ಣುಗಳನ್ನು ಆರೋಗ್ಯಕರವಾಗಿಡಲು ಕಾರಣವಾದ ಎರಡು ಅತ್ಯಂತ ಅಗತ್ಯ ಪೋಷಕಾಂಶಗಳಾಗಿವೆ. ಜೀವಕೋಶಗಳನ್ನು ಹಾನಿಗೊಳಿಸುವುದರಿಂದ ಮುಕ್ತ radical ವಿರುದ್ಧ ಹೋರಾಡಲು ಇವು ಸಹಕರಿಸುತ್ತದೆ. 

ಸೀತಾಫಲದಲ್ಲಿ ವಿಟಮಿನ್ ಸಿ ಮತ್ತು ರಿಬೋಫ್ಲೇವಿನ್ ಸಮೃದ್ಧ ಮೂಲ, ಇದು ಕಣ್ಣುಗಳನ್ನು ಆರೋಗ್ಯಕರವಾಗಿಡಲು ಕಾರಣವಾದ ಎರಡು ಅತ್ಯಂತ ಅಗತ್ಯ ಪೋಷಕಾಂಶಗಳಾಗಿವೆ. ಜೀವಕೋಶಗಳನ್ನು ಹಾನಿಗೊಳಿಸುವುದರಿಂದ ಮುಕ್ತ radical ವಿರುದ್ಧ ಹೋರಾಡಲು ಇವು ಸಹಕರಿಸುತ್ತದೆ. 

910

ಸೀತಾಫಲದಲ್ಲಿ ಮೆಗ್ನೀಸಿಯಮ್ ಸಮೃದ್ಧ ಮೂಲ. ಇದನ್ನು ಸೇವಿಸಿದಾಗ, ಮೆಗ್ನೀಷಿಯಮ್ ದೇಹದಲ್ಲಿನ ನೀರಿನ ಸಮತೋಲನವನ್ನು ಸಮೀಕರಿಸಲು ಸಹಕರಿಸುತ್ತದೆ. ಆದ್ದರಿಂದ ಕೀಲುಗಳಿಂದ ಆಮ್ಲಗಳನ್ನು ನಿರ್ಮೂಲನೆ ಮಾಡುತ್ತದೆ. ಇದು ಅಂತಿಮವಾಗಿ ಸಂಧಿವಾತ ಮತ್ತು ವಾತದ ಲಕ್ಷಣಗಳನ್ನು ಕಡಿಮೆ ಮಾಡಬಲ್ಲದು.

ಸೀತಾಫಲದಲ್ಲಿ ಮೆಗ್ನೀಸಿಯಮ್ ಸಮೃದ್ಧ ಮೂಲ. ಇದನ್ನು ಸೇವಿಸಿದಾಗ, ಮೆಗ್ನೀಷಿಯಮ್ ದೇಹದಲ್ಲಿನ ನೀರಿನ ಸಮತೋಲನವನ್ನು ಸಮೀಕರಿಸಲು ಸಹಕರಿಸುತ್ತದೆ. ಆದ್ದರಿಂದ ಕೀಲುಗಳಿಂದ ಆಮ್ಲಗಳನ್ನು ನಿರ್ಮೂಲನೆ ಮಾಡುತ್ತದೆ. ಇದು ಅಂತಿಮವಾಗಿ ಸಂಧಿವಾತ ಮತ್ತು ವಾತದ ಲಕ್ಷಣಗಳನ್ನು ಕಡಿಮೆ ಮಾಡಬಲ್ಲದು.

1010

ದೇಹದೊಳಗಿನ ಅಸ್ವಸ್ಥತೆಯಿಂದಾಗಿ ರಕ್ತಹೀನತೆ ಉಂಟಾಗುತ್ತದೆ. ಇದು ದೇಹದಲ್ಲಿ ನಿಯಮಿತ ಪ್ರಮಾಣಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಅಥವಾ ಕೆಂಪು ರಕ್ತ ಕಣಗಳನ್ನು ಹೊಂದಲು ಕಾರಣವಾಗುತ್ತದೆ. ಕೆಂಪು ರಕ್ತ ಕಣಗಳು ದೇಹದ ಸುತ್ತಲೂ ಆಮ್ಲಜನಕವನ್ನು ಸಾಗಿಸಲು ಹಿಮೋಗ್ಲೋಬಿನ್ ಅನ್ನು ಬಳಸುತ್ತವೆ, ಇದು ದೇಹವು ಹಲವಾರು ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ದೇಹದೊಳಗಿನ ಅಸ್ವಸ್ಥತೆಯಿಂದಾಗಿ ರಕ್ತಹೀನತೆ ಉಂಟಾಗುತ್ತದೆ. ಇದು ದೇಹದಲ್ಲಿ ನಿಯಮಿತ ಪ್ರಮಾಣಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಅಥವಾ ಕೆಂಪು ರಕ್ತ ಕಣಗಳನ್ನು ಹೊಂದಲು ಕಾರಣವಾಗುತ್ತದೆ. ಕೆಂಪು ರಕ್ತ ಕಣಗಳು ದೇಹದ ಸುತ್ತಲೂ ಆಮ್ಲಜನಕವನ್ನು ಸಾಗಿಸಲು ಹಿಮೋಗ್ಲೋಬಿನ್ ಅನ್ನು ಬಳಸುತ್ತವೆ, ಇದು ದೇಹವು ಹಲವಾರು ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

click me!

Recommended Stories