ಮಾನಸಿಕ, ಶಾರೀರಿಕ ಅರೋಗ್ಯಕ್ಕೆ ತುಳಸಿ ಮಾಲೆ ಎಂಬ ಮದ್ದು

First Published Jun 5, 2021, 5:40 PM IST

ಕುತ್ತಿಗೆಗೆ ತುಳಸಿ ಮಾಲೆ ಧರಿಸುವುದರಿಂದ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಒತ್ತಡ ಕಡಿಮೆ ಮಾಡಲು ಮತ್ತು ಅನೇಕ ರೋಗಗಳಿಂದ ಪಾರಾಗಲು ಇದು ತುಂಬಾ ಸಹಾಯಕ. ಇದರಿಂದ ಇನ್ನಷ್ಟು ಪ್ರಯೋಜನಗಳನ್ನು ಪಡೆಯಬಹುದು. 

ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿದಿನ ತುಳಸಿಗೆ ನೀರು ಅರ್ಪಿಸುವುದು, ಸಂಜೆ ತುಳಸಿ ಗಿಡದ ಕೆಳಗೆ ದೀಪಗಳನ್ನು ಬೆಳಗಿಸುವುದು, ತುಳಸಿ ತಿನ್ನುವುದು ಮತ್ತು ಅದರ ಮಾಲೆ ಧರಿಸುವುದು ಮುಂತಾದ ಅನೇಕ ವಿಷಯಗಳು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ತುಳಸಿಗೆ ಅನೇಕ ಪ್ರಯೋಜನಗಳಿವೆ. ಇಂದು, ತುಳಸಿಗೆ ಸಂಬಂಧಿಸಿದ ಅಂತಹ ಒಂದು ಪ್ರಯೋಜನದ ಬಗ್ಗೆ ತಿಳಿಯೋಣ, ಅದು ವ್ಯಕ್ತಿಯ ಮಾನಸಿಕ ಆರೋಗ್ಯದೊಂದಿಗೆ ಸಂಬಂಧಿಸಿದೆ.
undefined
ತುಳಸಿ ಮಾಲಾ ಧರಿಸಿದರೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಸಾಮಾನ್ಯವಾಗಿ ವಿಷ್ಣು ಮತ್ತು ಕೃಷ್ಣನ ಭಕ್ತರು ತುಳಸಿ ಬೀಜದ ಹೂಮಾಲೆಗಳನ್ನು ಧರಿಸುತ್ತಾರೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ, ಉಪಯೋಗಗಳೇನು?
undefined
ತುಳಸಿಯಲ್ಲಿ 2 ವಿಧತುಳಸಿಯಲ್ಲಿ 2 ವಿಧಗಳಿವೆ - ಶ್ಯಾಮಾ ತುಳಸಿ ಮತ್ತು ರಾಮ ತುಳಸಿ. ಶ್ಯಾಮಾ ತುಳಸಿ ಬೀಜಗಳ ಮಾಲೆ ಧರಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಇದು ಆಧ್ಯಾತ್ಮಿಕ ಜೊತೆಗೆ ಕುಟುಂಬ ಮತ್ತು ವಸ್ತು ಪ್ರಗತಿಗೆ ಕಾರಣವಾಗುತ್ತದೆ. ಇದು ದೇವರ ಬಗ್ಗೆ ಭಕ್ತಿಹೆಚ್ಚಿಸುತ್ತದೆ.
undefined
ಮತ್ತೊಂದೆಡೆ, ರಾಮ ತುಳಸಿಮಾಲೆವನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಸಾತ್ವಿಕ ಭಾವನೆಗಳನ್ನು ಜಾಗೃತಗೊಳಿಸುತ್ತದೆ. ಇದು ಕರ್ತವ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
undefined
ತುಳಸಿ ಮಾಲೆವನ್ನು ಧರಿಸುವುದರಿಂದ ಆಗುವ ಲಾಭಗಳುತುಳಸಿ ಮಾಲೆವನ್ನು ಧರಿಸುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮಶುದ್ಧವಾಗುತ್ತದೆ.ಈ ಮಾಲೆವನ್ನು ಧರಿಸುವುದರಿಂದ ದೇಹವು ಶುದ್ಧವಾಗುತ್ತದೆ, ಚೈತನ್ಯ ಹೆಚ್ಚುತ್ತದೆ. ಜೀರ್ಣಕ್ರಿಯೆ ಶಕ್ತಿ, ಜ್ವರ, ಶೀತ, ತಲೆನೋವು, ಚರ್ಮದ ಸೋಂಕು, ಮೆದುಳಿನ ಕಾಯಿಲೆಮತ್ತು ಗ್ಯಾಸ್ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಇದು ಪರಿಣಾಮಕಾರಿ. ಇದು ಸೋಂಕಿನಿಂದ ಉಂಟಾಗುವ ರೋಗಗಳಿಂದಲೂ ರಕ್ಷಿಸುತ್ತದೆ.
undefined
ತುಳಸಿ ಅದ್ಭುತ ಔಷಧ, ಇದು ರಕ್ತದೊತ್ತಡ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತುಳಸಿ ಧರಿಸುವುದರಿಂದ ದೇಹದಲ್ಲಿ ವಿದ್ಯುತ್ ಹರಿವು ಹೆಚ್ಚಾಗುತ್ತದೆ.
undefined
ಕುತ್ತಿಗೆಗೆ ತುಳಸಿ ಮಾಲೆಧರಿಸುವುದರಿಂದ ವಿದ್ಯುತ್ ತರಂಗಗಳು ಹೊರಸೂಸುತ್ತವೆ, ಅದು ರಕ್ತ ಪರಿಚಲನೆಗೆ ಅಡ್ಡಿಯಾಗಲು ಬಿಡುವುದಿಲ್ಲ. ಇದಲ್ಲದೆ, ತುಳಸಿ ಮಲೇರಿಯಾ ಮತ್ತು ಅನೇಕ ರೀತಿಯ ಜ್ವರಗಳಲ್ಲಿ ಬಹಳ ಪ್ರಯೋಜನಕಾರಿ.
undefined
ತುಳಸಿ ಮಾಲೆಧರಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ. ಕುತ್ತಿಗೆಗೆ ಧರಿಸುವುದರಿಂದ ಅಗತ್ಯವಾದ ಆಕ್ಯುಪ್ರೆಶರ್ ಪಾಯಿಂಟ್ಮೇಲೆ ಒತ್ತಡ ಹೇರುತ್ತದೆ, ಇದು ಮಾನಸಿಕ ಒತ್ತಡದಿಂದ ಮುಕ್ತಿ ದೊರಕಿಸುತ್ತದೆ.
undefined
ಇದು ಮೆಮೊರಿಯನ್ನು ಹೆಚ್ಚಿಸುತ್ತದೆ. ಇದು ಪ್ರತಿ ಜೀವಕ, ನೋವು ನಿವಾರಕ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು.
undefined
ಕಾಮಾಲೆ ಸಮಯದಲ್ಲಿ ತುಳಸಿಮಾಲೆವನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬಿಳಿ ಹತ್ತಿದಾರದಿಂದ ಸುತ್ತಿದ ತುಳಸಿಯ ಕಟ್ಟಿಗೆ ಧರಿಸಿದರೆ ಕಾಮಾಲೆ ರೋಗಬೇಗನೆ ಕೊನೆಗೊಳ್ಳುತ್ತದೆ.
undefined
click me!