ಕೊರೋನಾ ಬಂದ ನಂತರ ಜನರು ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಂಡಿದ್ದಾರೆ.
undefined
ಕೊರೋನಾ ಬರುವುದಕ್ಕೂ ಮುನ್ನ ನೈಸರ್ಗಿಕವಾಗಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳೋ ಬಗ್ಗೆ ನಾವೆಂದೂ ಯೋಚಿಸಿಯೇ ಇರಲಿಲ್ಲ.
undefined
ಆದರೆ ಕೊರೋನಾ ಅಟ್ಟಹಾಸ ಯಾವಾಗ ಆರಂಭವಾಯ್ತೋ ಆಗಿನಿಂದ ಮನೆಯಲ್ಲೇ ನೈಸರ್ಗಿಕ ಕಷಾಯಗಳನ್ನು ಮಾಡುವ ಕೆಲಸವೂ ಶುರುವಾಯ್ತು.
undefined
ತುಳಸಿ, ಕರಿಮೆಣಸು, ಅರಶಿನ, ಜೇನು ಹೀಗೆ ನೈಸರ್ಗಿಕವಾಗಿ ಸಿಗೋ ವಸ್ತುಗಳ ಕಷಾಯದ ಮೊರೆ ಹೋದ್ರು ಜನ.
undefined
ಬಹಳಷ್ಟು ಜನ ಕಾಫಿ, ಟೀ ಬಿಟ್ಟು ದಿನದಲ್ಲಿ ನಾಲ್ಕೈದು ಬಾರಿ ಕಷಾಯ ಕುಡಿಯೋಕೆ ಶುರು ಮಾಡಿದ್ರು.
undefined
ಅತ್ಯಧಿಕ ಪ್ರಮಾಣದಲ್ಲಿ ಸೇವಿಸದ್ರೆ ಆರೋಗ್ಯಕರ ವಸ್ತುಗಳ ಅಪಾಯಕಾರಿ ಅನ್ನುವುದನ್ನು ಇನ್ನೂ ಬಹಳಷ್ಟು ಜನರು ತಿಳಿದುಕೊಂಡಿಲ್ಲ.
undefined
ತಪ್ಪಾದ ರೀತಿಯಲ್ಲಿ ಕಷಾಯ ಕುಡಿಯುವುದರ ತೊಂದರೆ: ಯಾವುದೇ ಆದರೂ ಅತಿಯಾದರೆ ತೊಂದರೆಯೇ.
undefined
ಹೆಚ್ಚು ಕುಡಿದಷ್ಟು, ಆಯುರ್ವೇದಿಕ್ ಗಿಡ ಮೂಲಿಕೆ ಹೆಚ್ಚು ಕುದಿಸಿದಷ್ಟು ಫಲ ಹೆಚ್ಚು ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಇದು ಸುಳ್ಳು.
undefined
ಸರಿಯಾದ ರೀತಿಯಲ್ಲಿ ಕಷಾಯ ಕುಡಿಯದಿರೋದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
undefined
ಕಷಾಯ ಕುಡಿಯುವ ರೀತಿ: ಕಷಾಯವನ್ನು ಅತಿಯಾಗಿ ಕುದಿಸಬೇಡಿ. ಕುದಿಸಿದರೆ ಕಷಾಯ ಕಹಿಯಾಗಿ, ಅಸಿಡಿಟಿಗೆ ಕಾರಣವಾಗಬಹುದು.
undefined
ಬೇಗನೆ ಬೇಯಿಸಿ, ಕುದಿಸಿ ತೆಗೆದು ಕುಡಿಯುವುದು ಸರಿಯಾದ ವಿಧಾನ
undefined
ದಿನಕ್ಕೆ ಅರ್ಧ ಕಪ್ ಕಷಾಯವಷ್ಟೇ ಕುಡಿಯಿರಿ: ಮೂರು ನಾಲ್ಕು ಬಾರಿ ಕಷಾಯ ಕುಡಿಯೋದ್ರಿಂದ ಒಂದೇ ದಿನದಲ್ಲಿ ಇಮ್ಯುನಿಟಿ ಹೆಚ್ಚುವುದಿಲ್ಲ. ಅರ್ಧ ಕಪ್ ಕಷಾಯ ಕುಡಿದರೆ ಸಾಕು
undefined