ಈ ಔಷಧೀಯ ಸಸ್ಯದಿಂದ ಚಳಿಗಾಲದ ಅನಾರೋಗ್ಯವನ್ನು ದೂರ ಮಾಡಿ

First Published Nov 3, 2020, 4:24 PM IST

ಚಳಿಗಾಲ ಆರಂಭವಾದರೆ ಸಾಕು ಆ ಶುಷ್ಕ ವಾತಾವರಣದಿಂದಾಗಿ ಸಾಲು ಸಾಲು ಸಮಸ್ಯೆಗಳು ಹತ್ತಿರ ಸುಳಿಯುತ್ತವೆ. ಇಂತಹ ಸಮಯದಲ್ಲಿ ಪದೆ ಪದೇ ಔಷಧಿ ತೆಗೆದುಕೊಳ್ಳಲು ಏನೋ ಒಂಥರಾ ಭಯ. ಮಕ್ಕಳಿಗೆ ಶೀತ, ಕೆಮ್ಮಿನಂತಹ ಸಮಸ್ಯೆ ಕಾಣಿಸಿಕೊಂಡರೆ ಮತ್ತಷ್ಟು ಭಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ ದೊಡ್ಡ ಪತ್ರೆ ಸೊಪ್ಪು. ಇದರಲ್ಲಿರುವ ಔಷಧೀಯ ಗುಣ ಚಳಿಗಾಲದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ. 

ಚಳಿಗಾಲ ಶುರುವಾಯಿತೆಂದರೆ ಆರೋಗ್ಯ ಸಮಸ್ಯೆ ಗಳು ಪ್ರಾರಂಭವಾಗುತ್ತದೆ . ಅದರಲ್ಲಿ ಸರ್ವೆ ಸಾಮಾನ್ಯ ವಾಗಿ ಶೀತ, ನೆಗಡಿ ,ಕೆಮ್ಮು ಶುರುವಾಗುತ್ತದೆ. ಆರಂಭದಲ್ಲೇ ಇದನ್ನು ಗುಣ ಪಡಿಸಲು ಔಷಧಿ ಗುಣವಿರುವ ದೊಡ್ಡಪತ್ರೆ ಸಹಾಯ ಮಾಡುತ್ತದೆ .
undefined
ಇದನ್ನು ಸಾಂಬಾರ ಬಳ್ಳಿ , ಕರ್ಪುರವಳ್ಳಿ ಅಂತಲೂ ಕರೆಯುತ್ತಾರೆ . ಇದರ ಎಲೆಯು ದಪ್ಪಗಿದ್ದು ಹೃದಯದ ಆಕಾರ ದಲ್ಲಿದ್ದು , ಒಂದು ರೀತಿಯ ಒಗರು ಮತ್ತು ಪರಿಮಳದಿಂದಿದೆ .ಇದರ ವೈಜಾನಿಕ ಹೆಸರು ಪ್ಲೆಕ್ಟ್ರಾತುಸ್ ಅಂಬೋಯಿನಿಕಸ್. ಇದರ ಮೂಲ ಪಶ್ಚಿಮ ಹಾಗೂ ದಕ್ಷಿಣ ಆಫ್ರಿಕಾ , ಭಾರತ ಅಂತಲೂ ಹೇಳುತ್ತಾರೆ .
undefined
ಇದನ್ನು ಮನೆ ಮದ್ದಾಗಿ ಆಡುಗೆಯಲ್ಲಿ ಬಳಸುತ್ತಾರೆ ಇದನ್ನು ಬೇರೇ ಬೇರೇ ಪ್ರಾಂತ್ಯಗಳಲ್ಲಿ ಬೇರೇ ಬೇರೇ ಹೆಸರು ಗಳಿಂದ ಕರೆಯುತ್ತಾರೆ . ಕ್ಯೂಬನ್ ಒರಿಗ್ಯಾನೋ , ಮೆಕ್ಸಿಕನ್ ಮಿಂಟ್ , ಇಂಡಿಯನ್ ಬೋರಾಗೆ , ಸ್ಪ್ಯಾನಿಷ್ ಥಂಯ್ಮ್ ಪಣೀಕೋರಾಕ್ ಅಂತಲೂ ಕರೆಯುತ್ತಾರೆ .
undefined
ನೀರಿನ ಅಂಶ ಹೆಚ್ಚು ಇರುವ ಈ ಗಿಡವನ್ನು ಮನೆಯ ಒಳಗೆ ಅಥವಾ ಹೊರಗೆ ಕುಂಡಗಳಲ್ಲಿ ಬೆಳೆಸಬಹುದು . ಇದಕ್ಕೆ ಹೆಚ್ಚು ನೀರಿನ ಹಾಗೂ ಬೆಳಕಿನ ಅವಶ್ಯಕತೆ ಇಲ್ಲ . ಇದನ್ನು ನಮ್ಮ ಆಹಾರದಲ್ಲಿ ಬಳಸುತ್ತಿದ್ದರೆ ಆರೋಗ್ಯ ವರ್ದಿಸುತ್ತದೆ .
undefined
ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಇಳಿಯುತ್ತದೆ. ಮಗುವಿನ ಆರೋಗ್ಯವೂ ಉತ್ತಮವಾಗಿರುತ್ತದೆ.
undefined
ದೊಡ್ಡಪತ್ರೆ ಎಲೆಯಿಂದ ತಂಬುಳ್ಳಿ , ಚಟ್ನಿ ,ಬಜ್ಜಿ ,ಸಾರು , ಕಾಷಾಯ ಮಾಡಿ ಸೇವಿಸಬಹುದು. ಶೀತ, ನೆಗಡಿ ,ಕೆಮ್ಮು, ಕಫ ಇದ್ದರೆ ಇದರ ರಸ ಬಳಸುತ್ತಾರೆ .
undefined
ತುರಿಕೆ, ಕಜ್ಜಿ ಅಥವಾ ಬೆವರುಸಾಲೆ ಬಿದ್ದಾಗ ಆ ಜಾಗಕ್ಕೆ ಹಸಿಯಾಗಿ ಸಾಂಬ್ರಾಣಿ ಎಲೆಗಳನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.ಚರ್ಮದ ತುರಿಕೆಗೆ ದೊಡ್ಡಪತ್ರೆ ರಸ ಹಚ್ಚಿದರೆ ಗುಣವಾಗುತ್ತದೆ . ಇಂತಹ ಔಷಧೀಯ ಗುಣವಿರುವ ಗಿಡ ಮೂಲಿಕೆಗಳು ನಮ್ಮ ಮನೆಗಳಲ್ಲಿ ಬೆಳೆಸಿ ಉಪಯೋಗಿಸಿ ಆರೋಗ್ಯ ಕಾಪಾಡಿ ಕೊಳ್ಳಿ .
undefined
ಶುಂಠಿ, ಕಾಳುಮೆಣಸು ,ದೊಡ್ಡಪತ್ರೆ ,ಬೆಲ್ಲ ಇವೆಲ್ಲವನ್ನು ನೀರಿನ ಜೊತೆ ಬೆರೆಸಿ ಕುದಿಸಿ ಕಷಾಯ ಮಾಡಿ ಕುಡಿದರೆ ಕೆಮ್ಮು ಗಂಟಲು ಕೆರೆತ ಗುಣವಾಗುತ್ತದೆ.
undefined
ಚಿಕ್ಕಮಕ್ಕಳಿಗೆ ಶೀತ ಕಫ ವಾದರೆ ದೊಡ್ಡಪತ್ರೆಯ ಒಂದುಚಮಚ ರಸದ ಜೊತೆ ಜೇನು ತುಪ್ಪ ಬೆರೆಸಿಕೊಟ್ಟರೆ ವಾಸಿಯಾಗುತ್ತದೆ .
undefined
ಒಂದು ವಾರದವರೆಗೆ ದೊಡ್ಡಪತ್ರೆ ಎಲೆಯ ರಸವನ್ನು ಸೇವಿಸುವುದರಿಂದ ಹಳದಿ ರೋಗ ನಿವಾರಣೆಯಗುತ್ತದೆ.
undefined
click me!