ಈ ನಾಲ್ಕು ಅಕ್ಷರದ ಹೆಸರಿನ ಜನರ ಮೇಲೆ ಕುಬೇರನ ಆಶೀರ್ವಾದ ಸದಾ ಇರುತ್ತೆ

First Published Jul 7, 2023, 5:21 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಸರಿನ ಮೊದಲ ಅಕ್ಷರದಿಂದ ಆ ವ್ಯಕ್ತಿಯ ಸ್ವಭಾವ, ಭವಿಷ್ಯ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು. ರಾಶಿಚಕ್ರದ ಪ್ರಕಾರ ವ್ಯಕ್ತಿ ಹೆಸರನ್ನು ಇಟ್ಟುಕೊಂಡರೆ, ನೇಮ್ ಅಸ್ಟ್ರಾಲಜಿಯ ಪ್ರಕಾರ ಮುನ್ಸೂಚನೆಗಳು ಬಹಳ ನಿಖರವಾಗಿರುತ್ತವೆ. ನೇಮ್ ಅಸ್ಟ್ರಾಲಜಿಯ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ .

ಹಿಂದೂ ಧರ್ಮದಲ್ಲಿ, ಕುಬೇರನನ್ನು(Kuber) ಸಂಪತ್ತಿನ ದೇವರು ಎಂದು ಹೇಳಲಾಗುತ್ತೆ. ಯಾರು ಕುಬೇರನಿಂದ ಆಶೀರ್ವದಿಸಲ್ಪಡುತ್ತಾರೋ ಅವರು ಅದೃಷ್ಟವಂತರು ಎಂದು ನಂಬಲಾಗಿದೆ. ಆತ ಜೀವನದಲ್ಲಿ ಸಾಕಷ್ಟು ಹಣ ಗಳಿಸುತ್ತಾನೆ. ಅಂತಹ 4 ಅಕ್ಷರಗಳ ಬಗ್ಗೆ ಇಲ್ಲಿ ತಿಳಿಯೋಣ, ಅಂತವರು ಕುಬೇರನ ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಈ ಜನರು ಅದೃಷ್ಟವಂತರು(Lucky)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂಗ್ಲಿಷ್ ನ A ಅಕ್ಷರದಿಂದ ಪ್ರಾರಂಭವಾಗುವ ಜನರು ತುಂಬಾ ಅದೃಷ್ಟವಂತರು. ಅವರು ತಮ್ಮ ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸೋದಿಲ್ಲ. ಸಂಪತ್ತಿನ ದೇವತೆಯಾದ ಕುಬೇರನ ದಯೆ ಅವರ ಮೇಲೆ ಸದಾ ಇರುತ್ತೆ. 

Latest Videos


ಇಂಗ್ಲಿಷ್ ನ A ಅಕ್ಷರದಿಂದ ಪ್ರಾರಂಭವಾಗುವ ಜನರು ಯಾವುದೇ ಕೆಲಸವನ್ನು ಮಾಡಲು ನಿರ್ಧರಿಸಿದ ನಂತರ, ಅವರು ಅದನ್ನು ಪೂರ್ಣಗೊಳಿಸದೆ ಇರಲಾರರು. ಈ ಜನರು ಬುದ್ಧಿವಂತರು(Intelligent) ಮತ್ತು ಕಠಿಣ ಪರಿಶ್ರಮಿಗಳು. ಈ ವಿಶೇಷತೆಯಿಂದಾಗಿ, ಈ ಜನರು ಜೀವನದಲ್ಲಿ ಸಾಕಷ್ಟು ಹಣ ಸಂಪಾದಿಸುತ್ತಾರೆ.

ಇವರಿಗೆ ಸೌಲಭ್ಯಗಳ ಕೊರತೆ ಇರೋದಿಲ್ಲ.
ಇಂಗ್ಲಿಷ್ ನ B ಅಕ್ಷರದಿಂದ ಹೆಸರು ಪ್ರಾರಂಭವಾಗೋ ಜನರು ಕಠಿಣ ಪರಿಶ್ರಮದ ಜೊತೆಗೆ ಬುದ್ಧಿವಂತರು. ಅವರು ಪ್ರಾರಂಭಿಸಿದ ಯಾವುದೇ ಕೆಲಸದಲ್ಲಿ ಅವರು ಯಶಸ್ವಿಯಾಗುತ್ತಾರೆ(Success). 

B ಅಕ್ಷರದಿಂದ ಹೆಸರು ಪ್ರಾರಂಭವಾಗೋ ಜನರು ಎಂದಿಗೂ ಯಾರನ್ನೂ ಅವಲಂಬಿಸೋದಿಲ್ಲ. ತಮ್ಮದೇ ಆದ ಹಣೆ ಬರಹವನ್ನು ರೂಪಿಸುವುದರಲ್ಲಿ ನಂಬಿಕೆ ಇತ್ತಿರುತ್ತಾರೆ. ಅಂತಹ ಜನರು ಜೀವನದಲ್ಲಿ ಸಾಕಷ್ಟು ಸಂಪತ್ತನ್ನು(Wealth) ಗಳಿಸುತ್ತಾರೆ. ಈ ಕಾರಣದಿಂದಾಗಿ ಅವರ ಜೀವನದಲ್ಲಿ ಎಂದಿಗೂ ಸೌಕರ್ಯಗಳ ಕೊರತೆಯಿರೋದಿಲ್ಲ.

ಈ ಜನರಿಗೆ ಸಂಪತ್ತಿನ ಕೊರತೆ ಇರೋದಿಲ್ಲ
K  ಅಕ್ಷರದಿಂದ ಪ್ರಾರಂಭವಾಗುವ ಜನರ ಜೀವನದಲ್ಲಿ ಸಂಪತ್ತಿನ ಕೊರತೆ ಎಂದಿಗೂ ಇರಲ್ಲ. ಈ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು(Money) ಸಂಪಾದಿಸುತ್ತಾರೆ. ಇದರಿಂದಾಗಿ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತೆ. 
 

ಸಂಪತ್ತಿನ ದೇವರಾದ ಕುಬೇರನಿಗೆ K  ಅಕ್ಷರದಿಂದ ಪ್ರಾರಂಭವಾಗುವ ಜನರ ಮೇಲೆ ವಿಶೇಷ ಅನುಗ್ರಹವಿದೆ. ಅಂತಹ ಜನರು ಹಠಮಾರಿಯಾದರು, ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು.

ಈ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ.
N ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ತುಂಬಾ ಸಂತೋಷದ ಜನರು. ಈ ಜನರು ತಮ್ಮ ಜೀವನದಲ್ಲಿ ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಇವರ  ಕಠಿಣ ಪರಿಶ್ರಮದಿಂದಾಗಿ, ಇವರು ಐಷಾರಾಮಿ ಜೀವನವನ್ನು ನಡೆಸುವಲ್ಲಿ ಯಶಸ್ವಿಯಾಗುತ್ತಾರೆ. ಭಗವಾನ್ ಕುಬೇರನ ವಿಶೇಷ ಕೃಪೆಯಿಂದಾಗಿ, ಇವರ ಜೀವನವು ಯಾವಾಗಲೂ ಸೌಕರ್ಯಗಳು ಮತ್ತು ಅನುಕೂಲಗಳಿಂದ ತುಂಬಿರುತ್ತೆ.
 

click me!