ವಿಷ್ಣುವಿನ ಪಾದವನ್ನು ಲಕ್ಷ್ಮಿ ಸದಾ ಒತ್ತುತ್ತಿರುವುದೇಕೆ?

First Published Jan 5, 2023, 4:40 PM IST

ದೇವರ ಬಗ್ಗೆ ಹೆಚ್ಚು ತಿಳಿಯಲು ಬಯಸುವವರಾಗಿದ್ದೀರಾ ನೀವು? ಹಾಗಿದ್ರೆ ಇಲ್ಲಿ ಲಕ್ಷ್ಮೀ ಮಾತೆ ವಿಷ್ಣುವಿನ ಪಾದದ ಬಳಿ ಯಾಕೆ ಕುಳಿತುಕೊಳ್ಳುತ್ತಾಳೆ ಎಂಬುದು ಸೇರಿ ಭಗವಾನ್ ವಿಷ್ಣು ಹಾಗೂ ಲಕ್ಷ್ಮಿ ಮಾತೆಗೆ ಸಂಬಂಧಿಸಿದ ಕೆಲವು ರಹಸ್ಯ ವಿಚಾರಗಳ ಬಗ್ಗೆ ಇಲ್ಲಿ ತಿಳಿಯಿರಿ.  
 

ವೈವಾಹಿಕ ಜೀವನದಲ್ಲಿ (Married life)ಸಂತೋಷ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತೆ. ಎಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆಯೋ, ಅಲ್ಲಿ ತಾಯಿ ಲಕ್ಷ್ಮಿಯೂ ವಾಸಿಸುತ್ತಾಳೆ, ಆದ್ದರಿಂದ ಭಗವಾನ್ ವಿಷ್ಣು ಹಾಗೂ ಲಕ್ಷ್ಮಿ ಮಾತೆಗೆ ಸಂಬಂಧಿಸಿದ ಈ ರಹಸ್ಯ ತಿಳಿಯಲು ಮುಂದೆ ಓದಿ.

ಭಗವಾನ್ ವಿಷ್ಣುವಿನ(Lord Vishnu) ಹಾಸಿಗೆಯ ಹೆಸರು ಕೌಮೋದಕಿ. ಅದನ್ನು ವಿಷ್ಣು ಕೆಳಗಿನ ಬಲಗೈಯಿಂದ ಹಿಡಿದಿದ್ದಾನೆ. ಕೌಮೋದಕಿಯು ವಿಷ್ಣುವಿನ ದೈವಿಕ ಶಕ್ತಿ, ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಸಂಕೇತಿಸುತ್ತೆ.

ಮಾತೆ ಲಕ್ಷ್ಮಿಯನ್ನು(Goddess Lakshmi) ಪೂಜಿಸುವುದು ಅಥವಾ ಗುರುವಾರ ಅಥವಾ ಹುಣ್ಣಿಮೆಯಂದು ಉಪವಾಸ ಮಾಡೋದು ತುಂಬಾ ಶುಭವೆಂದು ಪರಿಗಣಿಸಲಾಗುತ್ತೆ. ದೇವಿಯ ಮಹಿಮೆಯನ್ನು ವಿವರಿಸುವ 'ಪಾಂಚಾಲಿ' ಎಂಬ ಮಂತ್ರ ಸರಣಿಯನ್ನು ಈ ದಿನದಂದು ಮಹಿಳೆಯರು ಹಾಡುತ್ತಾರೆ.

ಲಕ್ಷ್ಮಿಯನ್ನು ಪ್ರತಿದಿನ ಪೂಜಿಸಲಾಗುತ್ತೆ, ಆದರೆ ದೀಪಾವಳಿಯ ದಿನ ವಿಶೇಷ ಗಮನವನ್ನು ನೀಡಲಾಗುತ್ತೆ. ಲಕ್ಷ್ಮಿ ದೇವಿಯ ಪೂಜಾ ಸಮಾರಂಭಗಳಲ್ಲಿ ಜನರು ಆಹಾರ ಮತ್ತು ಸಿಹಿತಿಂಡಿಗಳನ್ನು(Sweets) ಅರ್ಪಿಸುತ್ತಾರೆ,  108 ಹೆಸರುಗಳನ್ನು ಪಠಿಸುತ್ತಾರೆ, ಪ್ರಾರ್ಥನೆ ಮತ್ತು ಭಕ್ತಿಗೀತೆಗಳನ್ನು ಹಾಡಲಾಗುತ್ತೆ.

ಭಗವಾನ್ ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿಯು ಯಾವಾಗಲೂ ಅವನ ಪಾದಗಳಲ್ಲಿ(Feet) ವಾಸಿಸುತ್ತಾಳೆ ಎಂದು ನಾವು ಕೇಳಿರುವ ವಿಷಯ. ಇದಕ್ಕೆ ಕಾರಣ ಅವರ ಸಹೋದರಿ ಅಲಕ್ಷ್ಮಿ. ಪುರಾಣದ ಪ್ರಕಾರ, ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿ ಎಲ್ಲಿಗೆ ಹೋದರೂ, ಅಲಕ್ಷ್ಮಿ ಸಹ ಅವರೊಂದಿಗೆ ವಾಸಿಸುತ್ತಿದ್ದಳು. ತಾಯಿ ಲಕ್ಷ್ಮಿಗೆ ಯಾವಾಗಲೂ ತನ್ನೊಂದಿಗೆ ಅಲಕ್ಷ್ಮಿ ಇರುವುದು ಇಷ್ಟವಿರಲಿಲ್ಲ. 

ತನ್ನ ಮತ್ತು ವಿಷ್ಣುವಿನ ನಡುವೆ ಯಾರೂ ಬರೋದನ್ನು ತಾಯಿ ಲಕ್ಷ್ಮೀ ಬಯಸುತ್ತಿರಲಿಲ್ಲ, ಆದ್ದರಿಂದ ಅವಳು ಯಾವಾಗಲೂ ಭಗವಾನ್ ವಿಷ್ಣುವಿನ ಪಾದಗಳ ಬಳಿ ಕುಳಿತುಕೊಂಡು ಪಾದವನ್ನು ಒತ್ತುತ್ತಾಳೆ. ಇದರಿಂದ ವಿಷ್ಣುವಿನ ಧ್ಯಾನ (Concentration) ಸದಾ ತನ್ನ ಮೇಲೆಯೆ ಇರುವಂತೆ ನೋಡಿಕೊಳ್ಳುತ್ತಾಳೆ ಎಂದು ನಂಬಲಾಗಿದೆ. 

ಸುದರ್ಶನ ಚಕ್ರವು (Sudarshan chakra) ಭಗವಾನ್ ವಿಷ್ಣುವಿನ ಆಯುಧ. ಸುದರ್ಶನ ಚಕ್ರವನ್ನು ಬ್ರಹ್ಮಾಂಡದ ಅತ್ಯಂತ ಶಕ್ತಿಶಾಲಿ ಆಯುಧ ರೂಪವೆಂದು ಪರಿಗಣಿಸಲಾಗಿದೆ. ಅದನ್ನು ಭಗವಾನ್ ವಿಷ್ಣುವು ಮೇಲಿನ ಬಲಗೈಯಿಂದ ಹಿಡಿದಿದ್ದಾನೆ. 

ಉತ್ತರಾಖಂಡದಲ್ಲಿ, ದೀಪಾವಳಿಯ ರಾತ್ರಿ ದೇವಿಯ ಆರಾಧನೆಯ ನಂತರ ಶಂಖವನ್ನು ನುಡಿಸಲಾಗೋದಿಲ್ಲ. ಏಕೆಂದರೆ ಶಂಖವು (Shankh) ಸಹ ದೇವಿಯಂತೆ ಸಮುದ್ರಕ್ಕೆ ಸಂಪರ್ಕ ಹೊಂದಿದೆ, ಆದ್ದರಿಂದ ಅದಕ್ಕೆ ಒಂದು ದಿನದ ವಿಶ್ರಾಂತಿ ನೀಡಲಾಗುತ್ತೆ.

ಬಂಗಾಳದಲ್ಲಿ, ಶರದೃತುವಿನಲ್ಲಿ ಹುಣ್ಣಿಮೆಯ ಚಂದ್ರನಿದ್ದಾಗ ಲಕ್ಷ್ಮಿಯನ್ನು ಪೂಜಿಸಲಾಗುತ್ತೆ. ಇದನ್ನು ವರ್ಷದ ಅತ್ಯಂತ ಪ್ರಕಾಶಮಾನವಾದ ರಾತ್ರಿ ಎಂದು ಕರೆಯಲಾಗುತ್ತೆ.  ಈ ರಾತ್ರಿ, ಲಕ್ಷ್ಮಿ ದೇವಿಯು ಸಂಪತ್ತಿನ(Wealth) ಮಳೆ ಸುರಿಸುತ್ತಾಳೆ ಮತ್ತು ಬಡತನ, ಕೋಪ ಮತ್ತು ಸೋಮಾರಿತನದ ಕತ್ತಲೆಯನ್ನು ಜೀವನದಿಂದ ತೆಗೆದುಹಾಕುತ್ತಾಳೆ ಎಂದು ನಂಬಲಾಗಿದೆ.
 

click me!