'ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ' ಭಟ್ಟರ ಸಾಲು

Published : Oct 29, 2021, 11:39 PM ISTUpdated : Oct 29, 2021, 11:46 PM IST

ಬೆಂಗಳೂರು( ಅ. 29) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ.  ಎಲ್ಲ ವರ್ಗದ ಜನರು ಸರಳ ಜೀವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

PREV
111
'ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ' ಭಟ್ಟರ ಸಾಲು

ಪುನೀತ್  ರಾಜ್ ಕುಮಾರ್ ಅವರ ಬಾಲ್ಯದ ಪೋಟೋ ಶೇರ್ ಮಾಡಿಕೊಂಡಿರುವ ನಟಿ ರಚಿತಾ ರಾಮ್ ಹೃದಯ ಒಡೆದು ಚೂರು ಚೂರಾಗಿದೆ ಎಂದಿದ್ದಾರೆ. 

211

ಬಹುಭಾಷಾ ನಟಿ ಪ್ರಿಯಾ ವಾರಿಯರ್ ಪುನೀತ್ ಅವರ ಪೋಟೋ ಶೇರ್ ಮಾಡಿಕೊಂಡು ಅಂತಿಮ ನಮನ ಸಲ್ಲಿಸಿದ್ದಾರೆ. ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

311
Puneeth Rajkumar

ಯು ಟರ್ನ್ ಮೂಲಕ ಹೆಸರು ಮಾಡಿದ ನಟಿ, ಬಹುಭಾಷಾ ತಾರೆ  ಶ್ರದ್ಧಾ ಶ್ರೀನಾಥ್ ಪುನೀತ್ ಅವರೊಂದಿಗಿನ ಪೋಟೋ ಹಂಚಿಕೊಂಡು ಬಾಂಧವ್ಯ ಸ್ಮರಿಸಿದ್ದಾರೆ.

411

ಗೋಲ್ಡನ್ ಸ್ಟಾರ್ ಗಣೇಶ್ ಅಪ್ಪುವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.  ಮಿಸ್ ಯು ಅಪ್ಪು ಸರ್ ಎಂದು ಬರೆದಿದ್ದಾರೆ.  ಪುನೀತ್ ರಾಜ್ ಕುಮಾರ್ ನಿಧನವೇ ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟ ಮಾಡಿದೆ.

511

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ.  ಎಲ್ಲ ವರ್ಗದ ಜನರು ಸರಳ ಜೀವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

611

ನಿರೂಪಕ ಅಕುಲ್ ಬಾಲಾಜಿ ಅಪ್ಪುವನ್ನು ತಾವೇ ಎತ್ತಿಕೊಂಡ ಪೋಟೋ ಹಂಚಿಕೊಂಡಿದ್ದಾರೆ.  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದೃಶ್ಯದ ಪೋಟೋ.

711

ಧಾರಾವಾಹಿಯಲ್ಲಿ ಕಾಣಿಸಿಕೊಂಡು ನಂತರ ನಿರೂಪಕಿಯಾಗಿ ಹೆಸರು ಮಾಡಿರುವ ಅನುಪಮಾ ಗೌಡ ಪುನೀತ್ ಜತೆ ಇರುವ  ಪೋಟೋ ಹಂಚಿಕೊಂಡಿದ್ದಾರೆ.

811

ರಾಬರ್ಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಆಶಾ ಭಟ್ ಪುನೀತ್ ಅವರ ಪೋಟೋ ಶೇರ್ ಮಾಡಿಕೊಂಡು ನಿಮ್ಮನ್ನು ಕಳೆದುಕೊಂಡ ವಿಚಾರ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

911
Puneeth Rajkumar

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಎದುರಾಗಿದ್ದ ಸಂದರ್ಭ ಶೇರ್ ಮಾಡಿಕೊಂಡಿದ್ದಾರೆ.

1011

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮೇಘನಾ ಪತಿ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಚಿತ್ರರಂಗ ಅಗಲಿದ್ದರು. ಈಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದ ದೂರವಾಗಿದ್ದಾರೆ. ಮೇಘನಾ   ಇಬ್ಬರಿಗೂ ವಂದನೆ ಸಲ್ಲಿಸಿದ್ದಾರೆ.

1111
Puneeth Rajkumar

ನಿರ್ದೇಶಕ ಯೋಗರಾಜ್ ಭಟ್  ಸಾಲುಗಳ ಮೂಲಕ ಅಪ್ಪುವಿಗೆ ಅಂತಿಮ ನಮನ ಸಲ್ಲಿಸಿ ಬಾಂಧವ್ಯ ಸ್ಮರಿಸಿದ್ದಾರೆ.  ಜೊತೆಗಿರದ ಜೀವ ಎಂದೆಂದಿಗೂ ಜೀವಂತ.. ನಿಮ್ಮನ್ನು ಕೊನೆಯ ಬಾರಿ ಇವತ್ತು ಬಳಿನಿಂತು ನೋಡಿ, ಭುಜ ಮುಟ್ಟಿದಾ ನನಗೆ ಅನ್ನಿಸಿದ್ದು ಇಷ್ಟೆ.. ಸಾವಲ್ಲ ಇದು ನಿಮ್ಮ ಹುಟ್ಟು.. ದೇಹ ಹೋಗಬಹುದು ಸ್ನೇಹ ಹೋದೀತೆ? ಸತತವಾಗಿ ಈ ನಾಡಿಗೆ ನಿತ್ಯ ನೂತನವಾಗಿ ನೆನಪಾಗುತ್ತ ಇನ್ನಷ್ಟು ನಳನಳಿಸುವ ಕನ್ನಡ ಚೈತನ್ಯವಾಗಿ ಶಾಶ್ವತವಾಗಿ ಬಾಳುತ್ತೀರಿ ನೀವು...  ಕುಟುಂಬಕ್ಕೆ ಸಕಲ ಕನ್ನಡಿಗರ ಶ್ರೀರಕ್ಷೆ ಇದೆ. ಆಪ್ತನಾಗಿ..ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ... ಇವು ಯೋಗರಾಜ್ ಭಟ್ ಅವರ ಸಾಲುಗಳು
 

Read more Photos on
click me!

Recommended Stories