ಮುಂಬೈ ವಿವಿ ಆಹ್ವಾನ ರದ್ದತಿಗೆ 'ವಿಶ್ವಗುರು' ಕಾರಣ: ನಟ ನಾಸಿರುದ್ದೀನ್‌ ಶಾ ಕಿಡಿ

Published : Feb 05, 2026, 10:28 PM IST

ಹಿರಿಯ ನಟ ನಾಸಿರುದ್ದೀನ್‌ ಶಾ ಅವರನ್ನು ಮುಂಬೈ ವಿಶ್ವವಿದ್ಯಾಲಯವು ತನ್ನ ಜಷನ್‌-ಎ-ಉರ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಕೊನೆಯ ಕ್ಷಣದಲ್ಲಿ ನಿರಾಕರಿಸಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ, ತಾನು 'ವಿಶ್ವಗುರು'ವನ್ನು ಟೀಕಿಸಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

PREV
14
ಜಷನ್‌-ಎ-ಉರ್ದು ಕಾರ್ಯಕ್ರಮ

ಮುಂಬೈ ವಿಶ್ವವಿದ್ಯಾಲಯವು ತನ್ನ ಜಷನ್‌-ಎ-ಉರ್ದು ಕಾರ್ಯಕ್ರಮಕ್ಕೆ ಹಿರಿಯ ನಟ ನಾಸಿರುದ್ದೀನ್‌ ಶಾ ಅವರನ್ನು ಆಹ್ವಾನಿಸಿ, ಕೊನೆಯ ಕ್ಷಣದಲ್ಲಿ ಆಹ್ವಾನ ನಿರಾಕರಿಸಿದೆ. ಇದಕ್ಕೆ ನಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ನಾನು ‘ವಿಶ್ವಗುರು’ವನ್ನು ಟೀಕಿಸುವುದೇ ಕಾರಣ ಎಂದು ಪ್ರಧಾನಿ ಮೋದಿ ಹೆಸರು ಹೇಳದೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

24
ಆಹ್ವಾನ ಬಂದಿತ್ತು

ಈ ಕುರಿತು ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ನಟ ನಾಸೀರ್ ಅ‍ವರು, ‘ವಿವಿಯ ಉರ್ದು ವಿಭಾಗ ಫೆ.1ರಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ನನಗೆ ವಿದ್ಯಾರ್ಥಿಗಳ ಜತೆಗೆ ಬೆರೆಯುವುದು ಇಷ್ಟ ಎಂದು ಹೇಳಿಕೊಂಡಿದ್ದಾರೆ.

34
ನಾಸಿರುದ್ದೀನ್‌ ಶಾ ಅಸಮಾಧಾನ

ಆದರೆ, ಜ.31ರ ರಾತ್ರಿ ನನಗೆ ಕರೆ ಮಾಡಿ ಆಹ್ವಾನ ನಿರಾಕರಿಸಲಾಯಿತು. ಬಳಿಕ ನಾನೇ ಕಾರ್ಯಕ್ರಮದಿಂದ ದೂರವುಳಿದೆ ಎಂದು ಹೇಳಲಾಯಿತು’ ಎಂದು ನಟ ಹಿರಿಯ ನಟ ನಾಸಿರುದ್ದೀನ್‌ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

44
ಟೀಕಿಸಿದ್ದಕ್ಕಾಗಿಯೇ ವಿವಿ ಆಹ್ವಾನ ನಿರಾಕರಣೆ

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ಶಾ, ‘ಸ್ವಯಂಘೋಷಿತ ವಿಶ್ವಗುರುವನ್ನು ನಾನು ಯಾವತ್ತೂ ಹೊಗಳಿಲ್ಲ, ಬದಲಾಗಿ ಟೀಕಿಸಿದವನು. ಕಳೆದ 10 ವರ್ಷಗಳಲ್ಲಿ ಅವರು ಮಾಡಿದ ಯಾವುದೇ ಕೆಲಸ ನನಗೆ ಮೆಚ್ಚುಗೆಯಾಗಿಲ್ಲ’ ಎಂದಿದ್ದಾರೆ. ಈ ಮೂಲಕ ತಾನು ಮೋದಿಯವರನ್ನು ಟೀಕಿಸಿದ್ದಕ್ಕಾಗಿಯೇ ವಿವಿ ಆಹ್ವಾನ ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories