ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಅರ್ಷ್ದೀಪ್ ಸಿಂಗ್ ಅವರನ್ನು ಹೊರಗಿಟ್ಟಿದ್ದಕ್ಕೆ ಎನ್ನುವುದಕ್ಕೆ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕಾರಣ ನೀಡಿದ್ದಾರೆ. ಟಿ20 ವಿಶ್ವಕಪ್ಗೂ ಮುನ್ನ ಬೇರೆ ಬೇರೆ ಕಾಂಬಿನೇಷನ್ ಪ್ರಯತ್ನಿಸಲು ಈ ನಿರ್ಧಾರ ಎಂದರು.
25
ಅರ್ಷದೀಪ್ ಅನುಭವಿ ಆಟಗಾರ
ಅರ್ಷ್ದೀಪ್ ಸಿಂಗ್ ಅನುಭವಿ ಆಟಗಾರ, ತಂಡದ ಸಂಯೋಜನೆಗಳ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿದೆ. ಅವರು ವಿಶ್ವದರ್ಜೆಯ ಬೌಲರ್, ಪವರ್ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ತಂಡಕ್ಕೆ ಅವರ ಮೌಲ್ಯ ಗೊತ್ತಿದೆ, ಆದರೆ ನಾವು ಬೇರೆ ಕಾಂಬಿನೇಷನ್ ಪ್ರಯತ್ನಿಸುತ್ತಿದ್ದೇವೆ.
35
ತಂಡದ ಆಯ್ಕೆ ಆಟಗಾರರಿಗೂ ಸವಾಲು
ಟಿ20 ವಿಶ್ವಕಪ್ಗೂ ಮುನ್ನ ನಾವು ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸುತ್ತಿದ್ದೇವೆ. ಅವಕಾಶ ಸಿಗದಿದ್ದಾಗ ಆಟಗಾರರು ನಿರಾಶೆಗೊಳ್ಳುವುದು ಸಹಜ. ಆದರೆ, ಅವರನ್ನು ಇನ್ನಷ್ಟು ಶ್ರಮಿಸಲು ಪ್ರೋತ್ಸಾಹಿಸುವುದು ನಮ್ಮ ಗುರಿ.
ಮುಂದಿನ ಟಿ20 ವಿಶ್ವಕಪ್ಗೂ ಮುನ್ನ ಕೆಲವೇ ಪಂದ್ಯಗಳಿವೆ. ಈ ಒತ್ತಡದ ಸಮಯದಲ್ಲಿ ಆಟಗಾರರು ಹೇಗೆ ಆಡುತ್ತಾರೆ ಎಂಬುದನ್ನು ಪರೀಕ್ಷಿಸುತ್ತಿದ್ದೇವೆ. ಆಟಗಾರರ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ, ಪಂದ್ಯ ಗೆಲ್ಲುವುದಷ್ಟೇ ನಮ್ಮ ಗುರಿ ಎಂದರು.
55
ಅರ್ಷದೀಪ್ ಹೊರಗಿಟ್ಟಿದ್ದಕ್ಕೆ ಎದುರಾಗಿತ್ತು ಟೀಕೆ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಭಾರತದ ಸ್ಟಾರ್ ವೇಗಿ ಅರ್ಷ್ದೀಪ್ ಸಿಂಗ್ ಅವರನ್ನು ತಂಡದ ಮ್ಯಾನೇಜ್ಮೆಂಟ್ ಬೆಂಚ್ ಕಾಯಿಸಿತ್ತು. 100ಕ್ಕೂ ಹೆಚ್ಚು ಟಿ20 ವಿಕೆಟ್ ಪಡೆದ ಬೌಲರ್ ಅನ್ನು ಹೊರಗಿಟ್ಟಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದ್ದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.