ಮುಂದುವರಿದು ಮಾತನಾಡಿದ ಅವರು, "ನನಗೆ ಯಾವುದೇ ಅಹಂಕಾರ, ಗರ್ವ ಬಾರದಂತೆ ತಡೆಯಲು ಭಗವಂತನೇ ನಿಮ್ಮ ಮೂಲಕ ನನಗೆ ಈ ಸಂದೇಶವನ್ನು ಕಳುಹಿಸಿದ್ದಾನೆ. ನೀವು ನೀಡಿದ ಈ 10 ರೂಪಾಯಿ ನನಗೆ ಕೇವಲ ಹಣವಲ್ಲ, ಇದು ಸಾಕ್ಷಾತ್ ಭಗವಂತನೇ ನನಗೆ ನೀಡಿದ ಆಶೀರ್ವಾದ" ಎಂದು ಅತ್ಯಂತ ವಿನಮ್ರವಾಗಿ ಉತ್ತರಿಸುತ್ತಾರೆ.
ತಮ್ಮ ಬಳಿ ಕೋಟ್ಯಂತರ ರೂಪಾಯಿ ಸಂಪತ್ತಿದ್ದರೂ, ಆ ಮಹಿಳೆ ನೀಡಿದ ಆ 10 ರೂಪಾಯಿಯನ್ನು ರಜನಿಕಾಂತ್ ಅವರು ತಮ್ಮ ಜೀವನದ ಬಹುದೊಡ್ಡ ಆಶೀರ್ವಾದ ಎಂದು ಭಾವಿಸಿ, ಅದನ್ನು ಕೊನೆಯವರೆಗೂ ತಮ್ಮ ಬಳಿಯೇ ಅತ್ಯಂತ ಜತನದಿಂದ ಕಾಪಾಡಿಕೊಳ್ಳುವುದಾಗಿ ಹೇಳುತ್ತಾರೆ. ಇಂದಿಗೂ ಆ 10 ರೂಪಾಯಿ ರಜನಿಕಾಂತ್ ಅವರ ಬಳಿ ಒಂದು ಪವಿತ್ರ ಸ್ಮರಣಿಕೆಯಾಗಿ ಉಳಿದಿದೆ.
ಈ ಒಂದು ಘಟನೆ ಸಾಕು, ರಜನಿಕಾಂತ್ ಅವರನ್ನು ಜನರು ಕೇವಲ ಅವರ ಸಿನಿಮಾಗಳಿಗಾಗಿ ಮಾತ್ರವಲ್ಲ, ಅವರ ಈ ಸರಳತೆ, ವಿನಯತೆ ಮತ್ತು ಶ್ರೇಷ್ಠ ವ್ಯಕ್ತಿತ್ವಕ್ಕಾಗಿ ಯಾಕೆ ಇಷ್ಟೊಂದು ಆರಾಧಿಸುತ್ತಾರೆ ಎಂದು ಅರ್ಥಮಾಡಿಕೊಳ್ಳಲು. ಎತ್ತರಕ್ಕೆ ಬೆಳೆದಷ್ಟೂ ವಿನಮ್ರವಾಗಿರಬೇಕು ಎಂಬುದಕ್ಕೆ ತಲೈವಾ ರಜನಿಕಾಂತ್ ಅವರೇ ಜೀವಂತ ಉದಾಹರಣೆ.
ಕೃಪೆ: ವಿವಿಧ ವಿಸ್ಮಯ (ಪೇಸ್ಬುಕ್ ಪೇಜ್)