ಒಂದು ಸಂದರ್ಶನದಲ್ಲಿ ಮಹೇಶ್ ಬಾಬು ಮಾತನಾಡುತ್ತಾ, ಸಿನಿಮಾ ಚೆನ್ನಾಗಿದ್ರೆ ಪ್ರೇಕ್ಷಕರಿಂದ ಬೆಂಬಲ ಸಿಗುತ್ತದೆ. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅವರೇ ಆ ಸಿನಿಮಾನ ಬೇಗ ಮುಗಿಸಿಬಿಡ್ತಾರೆ. ಈ ಎರಡಕ್ಕೂ ಸಿದ್ಧರಾಗಿರಬೇಕು. ಬ್ರಹ್ಮೋತ್ಸವಂ ತರಹದ ಸಿನಿಮಾಗಳನ್ನು ಮಾಡಿದರೆ ನನ್ನ ಅಭಿಮಾನಿಗಳಿಗೆ ನಾನು ಉತ್ತರ ಕೊಡೋಕೆ ಆಗಲ್ಲ. ಯಾಕಂದ್ರೆ ಅದು ಸಂಪೂರ್ಣವಾಗಿ ಕೌಟುಂಬಿಕ ಚಿತ್ರ. ಅದರಲ್ಲಿ ಏನೂ ಸರಿಯಾಗಿ ವರ್ಕೌಟ್ ಆಗಲಿಲ್ಲ ಎಂದು ಮಹೇಶ್ ಬಾಬು ಹೇಳಿದ್ದಾರೆ.