ನೆಟ್ಟಿಗರ ರಿಯಾಕ್ಷನ್ ಏನು?
ಅಂದು ಕುಂಭಮೇಳದ ಆಧ್ಯಾತ್ಮಿಕ ವಾತಾವರಣದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರುತ್ತಾ ಕ್ಯಾಮೆರಾ ಕಣ್ಣಿಗೆ ಬಿದ್ದು ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮುಗ್ಧ ಹುಡುಗಿ, ಇಂದು ತನ್ನ ಪ್ರೀತಿಗಾಗಿ ಇಷ್ಟೆಲ್ಲಾ ಹೋರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. "ಪ್ರೀತಿಗೆ ಕಣ್ಣಿಲ್ಲ, ಧರ್ಮವಿಲ್ಲ, ಗಡಿಗಳಿಲ್ಲ" ಎನ್ನುವ ಮಾತಿಗೆ ಈ ಜೋಡಿ ಜೀವಂತ ಸಾಕ್ಷಿಯಾಗಿದೆ. ಅಂದು ನೆಟ್ಟಿಗರ ಮೊಬೈಲ್ ಸ್ಕ್ರೀನ್ ಮೇಲೆ ರಾರಾಜಿಸಿದ್ದ ಈ 'ನೀಲಿ ಕಣ್ಣಿನ ಸುಂದರಿ', ಇಂದು ತನ್ನ ನೈಜ ಜೀವನದ ಹೀರೋ ಜೊತೆ ಸೇರಿ ತನ್ನದೇ ಆದ ಬ್ಲಾಕ್ ಬಸ್ಟರ್ ಲವ್ ಸ್ಟೋರಿ ಬರೆಯುತ್ತಿದ್ದಾಳೆ. ಕೇರಳ ಪೊಲೀಸರು ಈ ಜೋಡಿಗೆ ಬೆಂಗಾವಲಾಗಿ ನಿಲ್ಲುತ್ತಾರಾ? ಇವರ ಪ್ರೀತಿಗೆ ಜಯ ಸಿಗುತ್ತಾ? ಕಾದು ನೋಡಬೇಕಿದೆ. ಇದೇನೇ ಇದ್ದರೂ, 'ಕುಂಭಮೇಳ ಟು ಕೇರಳ' ಎನ್ನುವ ಈ ನೈಜ ಪ್ರೇಮಕಥೆ ಬಾಲಿವುಡ್ನ ಯಾವುದೇ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾಗೆ ಕಮ್ಮಿ ಇಲ್ಲ ಬಿಡಿ!
ಸದ್ಯಕ್ಕೆ ಈ ಮೊನಾಲಿಸಾ ಹಾಗೂ ಆಕೆಯ ಪ್ರಿಯಕರ ಪೊಲೀಸ್ ಆಶ್ರಯದಲ್ಲಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಸೃಷಿಯಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಮನೆ, ಊರು ಬಿಟ್ಟು ಬಂದಿರುವ ಈ ಜೋಡಿ ಕೇರಳದ ಥಂಪನೂರು ಪೊಲೀಸ್ ಸ್ಟೇಷನ್ನಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ.