ಚಿರಂಜೀವಿ, ನಾಗಾರ್ಜುನ, ಬಾಲಕೃಷ್ಣ, ರಜನೀಕಾಂತ್, ಅಮಿತಾಬ್ ಅಂತಹ ದಿಗ್ಗಜ ನಟರ ಜೊತೆ ನಟಿಸಿದ್ರು. 2004 ರಲ್ಲಿ ಅನಿರೀಕ್ಷಿತವಾಗಿ ನಿಧನರಾದರು. ಬಿಜೆಪಿ ಪಕ್ಷ ಸೇರಿದ್ದ ಸೌಂದರ್ಯ, ತಮ್ಮ ಸಹೋದರನ ಜೊತೆ ಚುನಾವಣಾ ಪ್ರಚಾರಕ್ಕೆ ಬೆಂಗಳೂರಿನಿಂದ ಕರೀಂನಗರಕ್ಕೆ ತೆರಳುವಾಗ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ರು.
ನಟ ಮೋಹನ್ ಬಾಬು ಅವರಿಗೆ ಅನುಮತಿ ಕೊಡದಿದ್ರೆ ಸೌಂದರ್ಯ ಸಾಯುತ್ತಿರಲಿಲ್ಲ ಅಂತ ಶಿವಶಂಕರ್ ಸಿನಿಮಾ ನಿರ್ದೇಶಕರು ಹೇಳಿದ್ದಾರೆ. ಸೌಂದರ್ಯ ನಟಿಸಿದ ಕೊನೆಯ ಸಿನಿಮಾ ಶಿವಶಂಕರ್. ಕಾಪುಗಂಟಿ ರಾಜೇಂದ್ರ ಆ ಸಿನಿಮಾ ನಿರ್ದೇಶಕರು. ಶಿವಶಂಕರ್ ಸಿನಿಮಾದಲ್ಲಿ ಮೋಹನ್ ಬಾಬು ನಾಯಕ ನಟ. ಅವರೇ ನಿರ್ಮಾಪಕರು ಕೂಡ. ಶಿವಶಂಕರ್ ಸಿನಿಮಾ ಚಿತ್ರೀಕರಣ ನಡೆಯುವಾಗ ಮೋಹನ್ ಬಾಬು ಯಾರಿಗೂ ರಜೆ ಕೊಡುತ್ತಿರಲಿಲ್ಲ.