ಕೊನೆಗೂ ಈಡೇರಲೇ ಇಲ್ಲ ರಿಷಿ ಕಪೂರ್ ಕಡೇ ಆಸೆ!
First Published Apr 30, 2020, 5:47 PM ISTಒಂದೆಡೆ ದೇಶವೇ ಕೊರೋನಾ ಮಾಹಾಮಾರಿಗೆ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಬಾಲಿವುಡ್ನ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಸಾವು ಮನಸ್ಸಿಗೆ ನೋವು ತಂದಿದೆ. ಅಪರೂಪದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಇರ್ಫಾನ್ಗೆ ಐಷಾರಾಮಿ ಕಾರು ಓಡಿಸುವ ಆಸೆ ಇತ್ತು. ಆದರೆ, ಸಾಯೋ ಮುನ್ನ ಅದು ಈಡೇರಲೇ ಇಲ್ಲ. ಇತ್ತ ರಿಷಿಗೆ ಕಾಶಿ ವಿಶ್ವನಾಥನ ದರ್ಶನ ಮತ್ತು ಆಸ್ತಿ ಘಾಟ್ನಲ್ಲಿ ನಡೆಯುವ ಗಂಗಾರತಿಯಲ್ಲಿ ಪಾಲ್ಗೊಳ್ಳುವ ಇರಾದೆ ಇತ್ತು. ಅದೂ ಹಾಗೇ ಉಳಿಯಿತು. 2019ರಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಶೂಟಿಂಗ್ ವಾರಣಾಸಿಗೆ ಬಂದಿದ್ದ ಮಗ ರಣ್ಬೀರ್ ಕಪೂರ್ ವಿಡಿಯೋ ಕಾಲ್ ಮೂಲಕ ಕಾಶಿ ವಿಶ್ವನಾಥನ ಜೊತೆಗೆ ಗಂಗಾ ಘಾಟ್ ಹಾಗೂ ಆರತಿ ದರ್ಶನವನ್ನು ರಿಷಿಗೆ ಮಾಡಿಸಿದ್ದರಂತೆ!