ಅಮಿತಾಬ್ ಬಚ್ಚನ್ ಮತ್ತು ರೇಖಾರ ಲವ್ಸ್ಟೋರಿ ಯಾವಾಗಲೂ ಚರ್ಚೆಯಲ್ಲಿರುವ ವಿಷಯ. ಆದ್ದರಿಂದ ಅಮಿತಾಬ್ ಜಯ ಅವರನ್ನು ಮದುವೆಯಾದಾಗನೊಂದರೇಖಾ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಯೋಚಿಸಿದರು.
undefined
ಶೀಘ್ರದಲ್ಲೇ ತನ್ನ ಮಿಸ್ಟರ್ ರೈಟ್ ಅನ್ನು ಕಂಡುಕೊಂಡರು ಎಂದು ಅವರು ಭಾವಿಸಿದ್ದರು.
undefined
'ಹಾಟ್ಲೈನ್' ಕಿಚನ್ವೇರ್ ಉದ್ಯಮಿ ದೆಹಲಿಯ ಮುಖೇಶ್ ಅಗರ್ವಾಲ್ ಎಲ್ಲಾ ಫಂಕ್ಷನ್ ಮತ್ತು ಗಾಲಾ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು.
undefined
ಆಗಿನ ಫ್ಯಾಷನ್ ಡಿಸೈನರ್ ಬಿನಾ ರಮಣಿ ಎಂಬ ಫ್ರೆಂಡ್ ಮೂಲಕ ರೇಖಾ ಮತ್ತು ಮುಖೇಶ್ ಪರಸ್ಪರರ ಭೇಟಿಯಾಗುವಂತೆ ಮಾಡಿತು ಎಂದು ಪ್ರಶಸ್ತಿ ವಿಜೇತ ಪತ್ರಕರ್ತ ಯಸೀರ್ ಉಸ್ಮಾನ್ ಬರೆದ ರೇಖಾರ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
undefined
ರೇಖಾ ಪ್ರಾಮಾಣಿಕ, ಸರಳ ಬ್ಯುಸಿನೆಸ್ ಮ್ಯಾನ್ ಅನ್ನು ಪ್ರೀತಿಸುತ್ತಿದ್ದರೆ, ಮತ್ತೊಂದೆಡೆ, ಮುಖೇಶ್ ಆಕೆಯ ಸ್ಟಾರ್ಡಮ್ , ಗ್ರೇಸ್ ಹಾಗೂ ಬ್ಯೂಟಿಗೆ ಬಿದ್ದಿದ್ದರು. ಕೆಲವು ಮೀಟಿಂಗ್ ಮತ್ತು ಫೋನ್ ಕಾಲ್ಗಳ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
undefined
ರೇಖಾ ಮತ್ತು ಮುಖೇಶ್ ತಮ್ಮ ಹನಿಮೂನ್ಗೆ ಹೋದಾಗ, ಆತನ ಹಿಂದಿನ ಹೆಂಡತಿ ಮತ್ತು ಮಕ್ಕಳ ಬಗ್ಗೆ ತಿಳಿದುಕೊಂಡರು ರೇಖಾ. ಶೀಘ್ರದಲ್ಲೇ, ಅವರಿಬ್ಬರು ಬಹಳಷ್ಟು ವ್ಯತ್ಯಾಸಗಳನ್ನು ಹೊಂದಿದ್ದಾರೆಂದು ಅವಳು ಅರ್ಥಮಾಡಿಕೊಂಡಳು ಮತ್ತು ಅವನಿಂದ ಬೇರೆಯಾದರು ನಟಿ.
undefined
ಅವಳು ಸರಳವಾದ, ಸಂತೋಷ ದಾಂಪತ್ಯ ಜೀವನವನ್ನು ಬಯಸುತ್ತಿದ್ದರೂ, ತನ್ನ ವ್ಯವಹಾರದಲ್ಲಿ ಭಾರಿ ಪ್ರಮಾಣದ ಶೇರ್ ಕಳೆದುಕೊಂಡರೂ ಸಹ ಆತ ಸೆಲೆಬ್ರಿಟಿ ಪಾರ್ಟಿಗಳನ್ನು ಬಯಸುತ್ತಿದ್ದ.
undefined
ಸ್ವಲ್ಪ ಸಮಯದ ನಂತರ, ಅವರು ಪರಸ್ಪರ ವಿಚ್ಛೇದನವನ್ನು ಸಲ್ಲಿಸಲು ನಿರ್ಧರಿಸಿದರು. ಮುಖೇಶ್ ವ್ಯವಹಾರ ಮತ್ತು ವಿವಾಹ ಜೀವನದಲ್ಲಿ ತಮ್ಮ ನಷ್ಟವನ್ನು ಸಹಿಸಲು ಸಾಧ್ಯವಾಗಲಿಲ್ಲ ಮತ್ತು ಹೀಗಾಗಿ ಆತ್ಮಹತ್ಯೆ ಮಾಡಿಕೊಂಡರು.
undefined
ಪತಿಯ ನಿಧನಕ್ಕೆ ರೇಖಾ ಬಹಳಷ್ಟು ದೂಷಿಸಲ್ಪಟ್ಟರು. ಆದರೂ ಅವರು ಹೋರಾಡಿ ಬಾಲಿವುಡ್ ಅನ್ನು ರಾಣಿಯಂತೆ ಆಳಿದರು.
undefined