9 ವರ್ಷದ ಪ್ರೀತಿಗೆ ಗುಡ್ ಬೈ ಹೇಳಿದ ನರ್ಗಿಸ್… ತನಗೆ ತಾನೆ ಸಿಗರೇಟ್’ನಿಂದ ಸುಟ್ಟು , ಕುಡಿತಕ್ಕೆ ದಾಸ ಆಗಿದ್ರಂತೆ ಸ್ಟಾರ್ ನಟ

First Published Sep 10, 2024, 8:36 AM IST

ಮದುವೆಯಾಗಿ ಮೂರು ಮಕ್ಕಳಿದ್ದರೂ ನರ್ಗಿಸ್ ಪ್ರೀತಿಯಲ್ಲಿ ಮುಳುಗಿದ ರಾಜ್ ಕಪೂರ್. ಒಂಭತ್ತು ವರ್ಷದ ಪ್ರೀತಿಗೆ ನರ್ಗಿಸ್ ಗುಡ್ ಬೈ ಹೇಳಿ, ಸುನಿಲ್ ದತ್ ಅವರನ್ನು ಮದುವೆಯಾದಾಗ, ದೇವದಾಸ್ ಆಗಿದ್ರಂತೆ ರಾಜ್ ಕಪೂರ್. 
 

ಬಾಲಿವುಡ್ ಸೂಪರ್ ಸ್ಟಾರ್ ರಾಜ್ ಕಪೂರ್ ಮದುವೆಯಾದ ನಂತರವೂ ನರ್ಗಿಸ್ ಪ್ರೀತಿಯಲ್ಲಿ ಬಿದ್ದಿದ್ದರು. ನರ್ಗಿಸ್ ಕೂಡ ಆರಂಭದಲ್ಲಿ ರಾಜ್ ಕಪೂರ್ (Raj Kapoor) ಅವರನ್ನು ಲವ್ ಮಾಡಿದ್ದೇನೋ ನಿಜಾ. ಆದರೆ ಸ್ವಲ್ಪ ಸಮಯದ ನಂತರ ಸುನಿಲ್ ದತ್ ಅವರನ್ನ ಮದುವೆಯಾದಾಗ, ರಾಜ್ ಕಪೂರ್ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. 
 

ಬಾಲಿವುಡ್ ಸೂಪರ್ ಸ್ಟಾರ್ ನಟ ರಾಜ್ ಕಪೂರ್ ಬಗ್ಗೆ ಹೇಳೊದಾದರೆ ಅವರ ಸಿನಿಮಾದ ಜೊತೆಗೆ ನರ್ಗಿಸ್ ಜೊತೆಗಿನ ಪ್ರೀತಿಯಿಂದಾಗಿಯೂ ಹೆಚ್ಚು ಮನೆಮಾತಾಗಿದ್ದರು.  ನರ್ಗಿಸ್ (Nargis)ಮತ್ತು ರಾಜ್ ಕಪೂರ್ ಒಬ್ಬರನ್ನೊಬ್ಬರು ತುಂಬಾನೆ ಲವ್ ಮಾಡುತ್ತಿದ್ದರು. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು ಎಂದು ಸಹ ಹೇಳಲಾಗುತ್ತೆ. ಆದರೆ ಇಬ್ಬರ ನಡುವೆ ಬ್ರೇಕಪ್ ಆದ ನಂತರ ರಾಜ್ ಕಪೂರ್ ತುಂಬಾನೆ ಕುಗ್ಗಿ ಹೋಗಿದ್ದರು. 
 

Latest Videos


1958 ರಲ್ಲಿ ನರ್ಗಿಸ್ ಸುನಿಲ್ ದತ್ (Sunil Dutt) ಅವರನ್ನು ಮದುವೆಯಾದಾಗ, ರಾಜ್ ಕಪೂರ್ ಆಘಾತಕ್ಕೊಳಗಾಗಿದ್ದರು. ಅವರು ಎಷ್ಟೊಂದು ಶಾಕ್ ಹಾಗೂ ಖಿನ್ನತೆಗೆ ಒಳಗಾಗಿದ್ದರು ಅಂದ್ರೆ ಬಾತ್ ರೂಮಿಗೆ ಹೋಗಿ ತುಂಬಾನೆ ಅಳುತ್ತಿದ್ದರಂತೆ, ಅಷ್ಟೇ ಅಲ್ಲ ಸಿಗರೇಟಿನಿಂದ ತನ್ನನ್ನು ತಾನು ಸುಟ್ಟುಕೊಳ್ಳುತ್ತಿದ್ದರಂತೆ. ರಾಜ್ ಕಪೂರ್  ಹೇಳುವಂತೆ ನರ್ಗೀಸ್ ರಾಜ್ ಕಪೂರ್ ಅವರಿಗೆ ಮೋಸ ಮಾಡಿದ್ರಂತೆ, ಈ ಘಟನೆಯನ್ನು ಮಧು ಜೈನ್ ಅವರ ಪುಸ್ತಕ ದಿ ಕಪೂರ್ಸ್: ದಿ ಫಸ್ಟ್ ಫ್ಯಾಮಿಲಿ ಆಫ್ ಇಂಡಿಯನ್ ಸಿನೆಮಾದಲ್ಲಿ ಉಲ್ಲೇಖಿಸಲಾಗಿದೆ.  
 

ಮಧು ಜೈನ್ ಪುಸ್ತಕದ ಪ್ರಕಾರ, ನರ್ಗಿಸ್ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡ ನಂತರ ರಾಜ್ ಕಪೂರ್ ಪತ್ರಕರ್ತ ಸುರೇಶ್ ಕೊಹ್ಲಿಗೆ ಹೀಗೆ ಹೇಳಿದ್ದರಂತೆ, 'ನಾನು ನರ್ಗಿಸ್ ಗೆ ನಿರಾಸೆಯನ್ನುಂಟು ಮಾಡಿದೆ ಎಂದು ಜಗತ್ತು ನನಗೆ ಹೇಳುತ್ತದೆ. ಆದರೆ ನಿಜವಾಗಿ ನನಗೆ ಮೋಸ ಮಾಡಿದ್ದು ನರ್ಗೀಸ್ ಎಂದು ಹೇಳಿದ್ದರು. 
 

ಪುಸ್ತಕದ ಪ್ರಕಾರ, ಯಾವಾಗ ನರ್ಗಿಸ್,  ಸುನಿಲ್ ದತ್ ಅವರನ್ನು ಮದುವೆಯಾಗಿದ್ದಾರೆ ಎಂದು ರಾಜ್ ಕಪೂರ್ ಗೆ ತಿಳಿಯಿತೋ, ಆವಾಗ ಅವರು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಮುಂದೆ ಜೋರಾಗಿ ಅಳಲು ಪ್ರಾರಂಭಿಸಿದ್ದರಂತೆ. ತನ್ನ ನೋವನ್ನು ಸಹಿಸಿಕೊಳ್ಳೋದಕ್ಕಾಗಿ ರಾಜ್ ಕಪೂರ್ ರಾಜ್ ಕಪೂರ್ ತಮಗೆ ತಾವೇ ಸಿಗರೇಟ್ ನಿಂದ ಸುಟ್ಟಿಡುತ್ತಿದ್ದರಂತೆ.  ನರ್ಗೀಸ್ ತನಗೆ ಮೋಸ ಮಾಡೋದಕ್ಕೆ ಸಾಧ್ಯಾನೆ ಇಲ್ಲ ಎನ್ನುವ ಹುಚ್ಚು ನಂಬಿಕೆ ರಾಜ್ ಕಪೂರ್ ಅವರದ್ದು, ಹಾಗಾಗಿ ಹಾಗಾಗಿ ತಮಗೆ ತಾವೇ ಸುಡೋ ಮ‌ೂಲಕ, ನರ್ಗಿಸ್ ತಮ್ಮಿಂದ ದೂರ ಆಗಿರೋದನ್ನ ಖಚಿತ ಪಡಿಸುತ್ತಿದ್ದರಂತೆ.
 

ನರ್ಗಿಸ್ ಮಾಡಿದ ಮೋಸದ ಪರಿಣಾಮ ರಾಜ್ ಕಪೂರ್ ಕೂಡ ಮದ್ಯಪಾನ (alcohol) ಮಾಡೋದಕ್ಕೆ  ಪ್ರಾರಂಭಿಸಿದರು, ಇದರಿಂದಾಗಿ ಅವರ ಪತ್ನಿ ಕೃಷ್ಣ ಮತ್ತು ಕುಟುಂಬವು ತುಂಬಾ ಅಸಮಾಧಾನಗೊಂಡಿದ್ದರಂತೆ. ಕೃಷ್ಣ ಅವರು ಬರಹಗಾರ ಬನ್ನಿ ರೂಬೆನ್ ಅವರಿಗೆ ಹೇಳಿದ್ದಂತೆ ರಾಜ್ ಕಪೂರ್ ರಾತ್ರಿ ಮತ್ತು ಹಗಲು ಕುಡಿದು ಮನೆಗೆ ಬರುತ್ತಿದ್ದರು. ಅವರು ಜೋರಾಗಿ ಅಳುತ್ತಾ ಬಾತ್ ಟಬ್ ನಲ್ಲಿ ಪ್ರಜ್ಞಾಹೀನನಾಗಿ ಬಂದು ಬೀಳುತ್ತಿದ್ದರು . ಪ್ರತಿ ರಾತ್ರಿಯೂ ಇದೇ ನಡೆಯುತ್ತಿತ್ತಂತೆ. ರಾಜ್ ನನಗಾಗಿ ಅಲ್ಲ ನರ್ಗಿಸ್ ಗಾಗಿ ಅಳುತ್ರಿದ್ದರು ಅನ್ನೋದು ಪತ್ನಿ ಕೃಷ್ಣಗೆ ಗೊತ್ತಿತ್ತು.

ಅದೇ ಸಮಯದಲ್ಲಿ, ರಾಜ್ ಕಪೂರ್ ತಮ್ಮ ಸ್ನೇಹಿತರೊಬ್ಬರ ಬಳಿ ನರ್ಗಿಸ್ ತನ್ನ ನಿಜವಾದ ಪ್ರೀತಿ ಎಂದು ಹೇಳಿದ್ದರಂತೆ. ರಾಜ್ ಕಪೂರ್ ಎಂದಿಗೂ ನರ್ಗಿಸ್ ವಿರುದ್ಧ ಸಾರ್ವಜನಿಕವಾಗಿ ಮಾತನಾಡಲಿಲ್ಲ. ನರ್ಗಿಸ್ ಸಹೋದರರು ತಮ್ಮ ನಡುವೆ ಬಿರುಕು ಸೃಷ್ಟಿಸುತ್ತಿದ್ದಾರೆ ಎಂದು ರಾಜ್ ಕಪೂರ್ ಆರೋಪಿಸಿದರು. ರಾಜ್ ಕಪೂರ್ ಇದನ್ನು ಅತಿದೊಡ್ಡ ದ್ರೋಹ ಎಂದು ಕರೆದರು.
 

ರಾಜ್ ಕಪೂರ್ ಅವರು  ನರ್ಗಿಸ್ ಅವರನ್ನು ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದು ದಿನ ಖಂಡಿತವಾಗಿಯೂ ಮದುವೆಯಾಗುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದರೇ ವಿನಃ ತುಂಬಾ ಸಮಯದವರೆಗೆ ಮದುವೆ ಆಗಲೇ ಇಲ್ಲ. ನರ್ಗಿಸ್ ಪತ್ನಿ ಮತ್ತು ತಾಯಿಯಾಗಲು ಕಾತುರರಾಗಿದ್ದರು, ಆದರೆ ರಾಜ್ ಕಪೂರ್ ಕೇವಲ ಭರವಸೆ ಮಾತ್ರ ನೀಡುತ್ತಿದ್ದದ್ದು ತುಂಬಾನೆ ನೋವನ್ನುಂಟು ಮಾಡಿತ್ತು.

ಮದುವೆ ಅನ್ನೋದು ನರ್ಗಿಸ್ಗೆ ಎಷ್ಟು ಮುಖ್ಯವಾಗಿತ್ತು ಎಂದರೆ ಅವರು ಬಾಂಬೆಯಲ್ಲಿ ಆಗಿನ ಗೃಹ ಸಚಿವ ಮೊರಾರ್ಜಿ ದೇಸಾಯಿ ಅವರಿಂದ ಸಲಹೆಯನ್ನು ಸಹ ಪಡೆದಿದ್ದರು ಅನ್ನೋದನ್ನ ಪುಸ್ತಕದಲ್ಲಿ ಸಹ ಉಲ್ಲೇಖಿಸಲಾಗಿದೆ. ರಾಜ್ ಕಪೂರ್ ಹಿಂದೂ ಆಗಿದ್ದು ಈಗಾಗಲೇ ಮದುವೆ ಕೂಡ ಆಗಿರೋದ್ರಿಂದ ಅವರನ್ನು ಕಾನೂನುಬದ್ಧವಾಗಿ ಹೇಗೆ ಮದುವೆಯಾಗಲು ಸಾಧ್ಯ ಅನ್ನೋದಕ್ಕೆ ಸಲಹೆ ಕೇಳಿದ್ರಂತೆ ನರ್ಗಿಸ್.
 

click me!