ಖ್ಯಾತ ನಟಿಯ ಪರ್ಸನಲ್ ಮ್ಯಾಟರ್ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ ನಿಹಾರಿಕಾ

First Published Sep 24, 2024, 8:52 AM IST

ಅತ್ತಿಗೆ ಲಾವಣ್ಯ ತ್ರಿಪಾಠಿ ಪರ್ಸನಲ್ ಮ್ಯಾಟರ್ ಲೀಕ್ ಮಾಡಿದ್ದಾರೆ ನಿಹಾರಿಕಾ. ವರುಣ್ ತೇಜ್ ಪತ್ನಿ ಮನೇಲಿ ಏನ್ ಮಾಡ್ತಾರೆ ಅಂತ ಪಬ್ಲಿಕ್ ಆಗಿ ಹೇಳ್ಬಿಟ್ಟಿದ್ದಾರೆ. ಅವರ ಕಾಮೆಂಟ್ಸ್ ವೈರಲ್ ಆಗ್ತಿದೆ. 
 

ಲಾವಣ್ಯ ತ್ರಿಪಾಠಿ ಅತಿ ಕಡಿಮೆ ಸಮಯದಲ್ಲಿತೇ ಜನಪ್ರಿಯತೆ ಪಡೆದುಕೊಂಡ ನಟಿ. ಅಂದಾಲ ರಾಕ್ಷಸಿ, ಎ1 ಎಕ್ಸ್‌ಪ್ರೆಸ್,  ಶ್ರೀರಸ್ತು ಶುಭಮಸ್ತು ಸಿನಿಮಾಗಳಲ್ಲಿ ಲಾವಣ್ಯ ತ್ರಿಪಾಠಿ ನಟಿಸಿದ್ದಾರೆ.

ಲಾವಣ್ಯ ತ್ರಿಪಾಠಿ

ಈ ಯುವ ನಟಿ ಮೆಗಾ ಹೀರೋ ವರುಣ್ ತೇಜ್ ಜೊತೆ ಪ್ರೀತಿಸುತ್ತಿದ್ದರು. ಮಿಸ್ಟರ್ ಚಿತ್ರದಲ್ಲಿ ವರುಣ್-ಲಾವಣ್ಯ ಮೊದಲ ಬಾರಿಗೆ ಜೋಡಿಯಾದರು. ಆ ಸಿನಿಮಾ ಸೆಟ್ ನಲ್ಲಿ ಪರಿಚಯ ಪ್ರೀತಿಗೆ ತಿರುಗಿತು. ಐದು ವರ್ಷಗಳಿಗೂ ಹೆಚ್ಚು ಕಾಲ ಇಬ್ಬರೂ ರಹಸ್ಯವಾಗಿ ಪ್ರೀತಿಸುತ್ತಿದ್ದರು. ವರುಣ್-ಲಾವಣ್ಯ ರಿಲೇಷನ್ ನಲ್ಲಿದ್ದಾರೆ ಎಂಬ ವದಂತಿಗಳು ಬಂದರೂ ಅದನ್ನು ಅಲ್ಲಗಳೆಯಲಾಯಿತು. 

ಕಳೆದ ವರ್ಷ ನಿಶ್ಚಿತಾರ್ಥ ಎಂದು ಘೋಷಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. 2023 ನವೆಂಬರ್ 5 ರಂದು ಇಟಲಿಯಲ್ಲಿ ಲಾವಣ್ಯ-ವರುಣ್ ತೇಜ್ ವಿವಾಹವಾಯಿತು. ಈ ಮದುವೆಗೆ ಮೆಗಾ ಹೀರೋಗಳು, ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು. ಮದುವೆಯಾದ ನಂತರ ಲಾವಣ್ಯ ನಟನೆಯಿಂದ ದೂರವಿದ್ದಾರೆ. ಪ್ರಸ್ತುತ ಅವರು ಮನೆಗೇ ಸೀಮಿತರಾಗಿದ್ದಾರೆ. 

Latest Videos


ಲಾವಣ್ಯ ಏನ್ ಮಾಡ್ತಿದ್ದಾರೆ ಅಂತ ತಿಳ್ಕೊಳ್ಳೋಕೆ ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಸಂದರ್ಭದಲ್ಲಿ ಲಾವಣ್ಯ ನಾದಿನಿ ನಿಹಾರಿಕಾ ಅವರನ್ನು ಈ ಬಗ್ಗೆ ಕೇಳಿದ್ದಾರೆ. ಸೋಶಿಯಲ್ ಮೀಡಿಯಾ ಚಾಟ್ ನಲ್ಲಿ ಲಾವಣ್ಯ ಬಗ್ಗೆ ಹೇಳಿ ಅಂತ ಅಭಿಮಾನಿಗಳು ಕೇಳಿದಾಗ.. ಕೆಲವು ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಲಾವಣ್ಯ 24 ಗಂಟೆ ಮನೆಯಲ್ಲೇ ಇರ್ತಾರಂತೆ. ಏನಾದ್ರು ಕೆಲಸ ಇದ್ರೆ ಬಿಟ್ಟರೆ ಹೊರಗೆ ಬರಲ್ಲ ಅಂತೆ. 

ನಾನು ಮನೇಲಿ ಒಂದು ಗಂಟೆ ಕೂಡ ಇರೋಕೆ ಆಗಲ್ಲ. ಹುಚ್ಚು ಹಿಡಿಯುತ್ತೆ. ನಮ್ ಅತ್ತಿಗೆ ಲಾವಣ್ಯ ಮನೆಗೇ ಹೇಗೆ ಸೀಮಿತರಾಗ್ತಾರೋ ಅರ್ಥ ಆಗಲ್ಲ ಅಂತ ನಿಹಾರಿಕಾ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರ ಮನೆಯಲ್ಲಿ ಅಡುಗೆ ಮಾಡೋ ಜವಾಬ್ದಾರಿ ಲಾವಣ್ಯ ಅವರದ್ದಂತೆ. ಕುಟುಂಬ ಸದಸ್ಯರಿಗಾಗಿ ರುಚಿಕರವಾದ ಊಟವನ್ನು ಪ್ರತಿದಿನ ಲಾವಣ್ಯ ತಯಾರಿಸುತ್ತಾರಂತೆ. ನಿಹಾರಿಕಾ ಮಾತು ಕೇಳಿ.. ಲಾವಣ್ಯ ಅವರನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. 

ನಿಹಾರಿಕಾ ಕೊಣಿದೆಲ

ಇತ್ತೀಚೆಗೆ ಲಾವಣ್ಯ ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬಗ್ಗೆ ನಾಗಬಾಬು ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾಗಿ ಲಾವಣ್ಯ ಗರ್ಭಿಣಿ ಎಂಬ ಸುದ್ದಿಯಲ್ಲಿ ಸತ್ಯಾಂಶ ಎಷ್ಟಿದೆ ಎಂಬುದು ತಿಳಿದಿಲ್ಲ. ಲಾವಣ್ಯ ಕೊನೆಯದಾಗಿ ಮಿಸ್ ಪರ್ಫೆಕ್ಟ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಖ್ಯಾತಿಯ ಅಭಿಜಿತ್ ನಾಯಕನಾಗಿ ನಟಿಸಿದ್ದರು. ಮದುವೆಯ ನಂತರ ಲಾವಣ್ಯ ಮಾಡಿದ ಏಕೈಕ ಪ್ರಾಜೆಕ್ಟ್ ಇದು. 

ಇನ್ನೊಂದೆಡೆ ನಿಹಾರಿಕಾ ನಿರ್ಮಾಪಕಿಯಾಗಿ, ನಟಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾದ ಕಮಿಟಿ ಕುರ್ರಳ್ ಉತ್ತಮ ಯಶಸ್ಸು ಗಳಿಸಿತು. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ, ಭಾರೀ ಲಾಭ ಗಳಿಸಿತು. ಹೈದರಾಬಾದ್ ನಲ್ಲಿ ಕಚೇರಿ ತೆರೆದಿರುವ ನಿಹಾರಿಕಾ.. ಯುವ ನಿರ್ದೇಶಕರು, ಬರಹಗಾರರು, ನಟರೊಂದಿಗೆ ಹೊಸ ಪ್ರಾಜೆಕ್ಟ್ ಗಳನ್ನು ಪ್ಲಾನ್ ಮಾಡುತ್ತಿದ್ದಾರೆ. 

ನಿಹಾರಿಕಾ ಕೊಣಿದೆಲ

ನಿಹಾರಿಕಾ ಪತಿ ವೆಂಕಟ ಚೈತನ್ಯ ಅವರೊಂದಿಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ. 2020ರಲ್ಲಿ ವಿವಾಹವಾದ ಈ ಜೋಡಿ, ಗಲಾಟೆಗಳಿಂದಾಗಿ ವಿಚ್ಛೇದನ ಪಡೆದರು. ಮತ್ತೆ ಬಂದ ನಿಹಾರಿಕಾ carrer ಮೇಲೆ ಗಮನ ಹರಿಸಿದ್ದಾರೆ. ಈ ಹಿಂದೆ ನಿಹಾರಿಕಾ ಒಕ ಮನಸು, ಹ್ಯಾಪಿ ವೆಡ್ಡಿಂಗ್, ಸೂರ್ಯಕಾಂತಂ ಇತ್ಯಾದಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಿಹಾರಿಕಾ ಕೊಣಿದೆಲ

ಮೆಗಾ ಕುಟುಂಬದಿಂದ ನಾಯಕಿಯಾದ ಏಕೈಕ ನಟಿ ನಿಹಾರಿಕಾ. ಚಿರಂಜೀವಿ ಅವರ ಪುತ್ರಿ ಸುಸ್ಮಿತಾ ಕೂಡ ಇಂಡಸ್ಟ್ರಿಯಲ್ಲಿ ಕಾಲಿಟ್ಟಿದ್ದರು. ಅವರು ನಿರ್ಮಾಪಕಿಯಾಗಿ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಚಿರಂಜೀವಿ-ಕಲ್ಯಾಣ್ ಕೃಷ್ಣ ಕಾಂಬಿನೇಷನ್ ನಲ್ಲಿ ಸುಸ್ಮಿತಾ ನಿರ್ಮಿಸಬೇಕಿದ್ದ ಪ್ರಾಜೆಕ್ಟ್ ಡ್ರಾಪ್ ಆಯ್ತು. ಇದು ರೀಮೇಕ್ ಆಗಿರುವುದರಿಂದ ಚಿರಂಜೀವಿ ಈ ಚಿತ್ರವನ್ನು ಬಿಟ್ಟುಬಿಟ್ಟರು.
 

click me!