ಧನುಷ್ ತಮ್ಮ ಮೇಲೆ ದಾವೆ ಹೂಡಿರುವುದರಿಂದ, ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ತಮ್ಮ ಇನ್ಸ್ಟಾ ಪುಟದಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. “ನೀವು ಸುಳ್ಳು ಹೇಳಿ ಯಾರೊಬ್ಬರ ಜೀವನವನ್ನು ಹಾಳುಮಾಡಿದರೆ, ಅದನ್ನು ಸಾಲವಾಗಿ ಪರಿಗಣಿಸಲಾಗುತ್ತದೆ. ಅದು ನಿಮಗೆ ಬಡ್ಡಿಯೊಂದಿಗೆ ವಾಪಸ್ ಬರುತ್ತದೆ” ಎಂದು ಕರ್ಮ ಹೇಳಿದಂತೆ ಉಲ್ಲೇಖಿಸಿ, ಅದಕ್ಕೆ ಅಂಡರ್ಲೈನ್ ಕೂಡ ಮಾಡಿದ್ದಾರೆ ನಯನತಾರ. ನೇರವಾಗಿ ಧನುಷ್ರನ್ನೇ ಉದ್ದೇಶಿಸಿ ಈ ಪೋಸ್ಟ್ ಹಾಕಿಲ್ಲದಿದ್ದರೂ, ಅದು ಧನುಷ್ಗೆ ಟಾಂಗ್ ಎಂದು ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ.