ನನ್ನ ಹತ್ರ ತೆಂಗಿನಕಾಯಿ ಒಡೆಯೋಕೂ ದುಡ್ಡಿಲ್ಲ ಅಂತ ನಿರ್ದೇಶಕ ಅಂದ್ರೆ. ದುಡ್ಡು ಯಾರು ಕೇಳಿದ್ರು, ಮೊದಲು ನೀ ಸಿನಿಮಾ ಶುರು ಮಾಡೆಂದು ನಿರ್ದೇಶಕರನ್ನು ಧೈರ್ಯ ತುಂಬುತ್ತಿದ್ದರು. ವಿಷಯವನ್ನು ಅವರೇ ಸ್ವತಃ ಆಯ್ಕೆ ಮಾಡ್ತಿದ್ರು. ವಿತರಕರ ಜೊತೆ ಮಾತನಾಡಿ, ಈ ಸಿನಿಮಾ ವಿತರಿಸಿ ಅಂತ ಹೇಳ್ತಿದ್ರಂತೆ. ಹೂಡಿಕೆದಾರರಿಗೆ ಸಿನಿಮಾ ಬಿಡುಗಡೆಗೆ ಮುಂಚೆಯೇ ದುಡ್ಡು ಕೊಟ್ಟು ಬಿಡ್ತಿದ್ರಂತೆ. ಅವರಿಗೆ ಇವರು ಅದೇ ರೀತಿ ಭರವಸೆ ನೀಡ್ತಿದ್ರಂತೆ. ಇದರಿಂದ ನಷ್ಟ ಆದ ಸಂದರ್ಭಗಳೂ ಇದ್ದವಂತೆ.
ಪರೋಕ್ಷವಾಗಿ ಹೇಳುವುದಾದರೆ ಎನ್ಟಿಆರ್, ಎಎನ್ಆರ್ಗಿಂತಲೂ ದೊಡ್ಡ ಗುಣ ಕೃಷ್ಣನದ್ದು. ಅವರು ನಿರ್ಮಾಪಕರ ಹೀರೋ ಅಂತ ಮುರಳಿ ಮೋಹನ್ ಹೇಳಿದ್ದಾರೆ. ಮುರಳಿ ಮೋಹನ್ ನಟನಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ನೆಲೆ ಕಂಡವರು ಎಂಬುವುದು ಎಲ್ಲರಿಗೂ ಗೊತ್ತು. ರಾಜಕಾರಣದಲ್ಲೂ ಮುರಳಿ ಮೋಹನ್ ತಮ್ಮದೇ ಛಾಪು ಮೂಡಿಸಿದ್ದಾರೆ.