ಮಹಾದೇವ್ ಬೆಟ್ಟಿಂಗ್ ಆಪ್ ಕೇಸ್: ಶಾಕಿಂಗ್‌ ವಿಷಯ ಬಹಿರಂಗ ಪಡಿಸಿ ಬಾಲಿವುಡ್‌ ಸೆಲಬ್ರೆಟಿಗಳಿಗೆ ಎಚ್ಚರಿಕೆ ನೀಡಿದ ಕಂಗನಾ!

First Published Oct 8, 2023, 5:29 PM IST

ಈ ದಿನಗಳಲ್ಲಿ ಮಹಾದೇವ್ ಬೆಟ್ಟಿಂಗ್ ಆಪ್ ಕೇಸ್‌ಗೆ (Mahadev Betting App Case) ಸಂಬಂಧಿಸಿದಂತೆ ಹಲವು ಬಾಲಿವುಡ್‌ ಗಣ್ಯರ ಹೆಸರು ಸುದ್ದಿಯಾಗಿದೆ. ಈ ನಡುವೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಇದರ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದರ ಜೊತೆ ಕಂಗನಾ  ಬಾಲಿವುಡ್ ಸೆಲೆಬ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಂಗನಾ ರಣಾವತ್  ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಿವಾದಾತ್ಮಕ ಮಹಾದೇವ್ ಅಪ್ಲಿಕೇಶನ್ ಅನುಮೋದನೆಗಾಗಿ ತನ್ನನ್ನು ಸಂಪರ್ಕಿಸಿದೆ ಎಂದು ಬಹಿರಂಗಪಡಿದ್ದಾರೆ.

ಅವರ ಪ್ರಕಾರ, ಈ ವಿವಾದಾತ್ಮಕ ಅಪ್ಲಿಕೇಶನ್‌ನಿಂದ ಜಾಹೀರಾತು ನೀಡುವ ಪ್ರಸ್ತಾಪ ಬಂದಿತ್ತು. ಆದರೆ ಅವರು ಹಾಗೆ ಮಾಡಲು ನಿರಾಕರಿಸಿದರು. ಅಷ್ಟೇ ಅಲ್ಲ, ಈ ಇಡೀ ವಿಚಾರದಲ್ಲಿ ಹೆಸರು ಕೇಳಿಬರುತ್ತಿರುವ ಸೆಲೆಬ್ರಿಟಿಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಕಂಗನಾ ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಮಹಾದೇವ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಲು ಏಕೆ ನಿರಾಕರಿಸಿದರು ಎಂದು ವಿವರಿಸಿದ್ದಾರೆ. 

ಕಂಗನಾ ರಣಾವತ್ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಲೇಖನವೊಂದರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಮಹದೇವ್ ಆಪ್ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಅಂದರೆ ಇಡಿಯ ರಾಡಾರ್‌ನಲ್ಲಿರುವ ಸೆಲೆಬ್ರಿಟಿಗಳ ಬಗ್ಗೆ ಮಾತನಾಡಿದ್ದಾರೆ.
 

'ಒಂದು ವರ್ಷದಲ್ಲಿ ಸುಮಾರು 6 ಬಾರಿ ನನಗೆ ಈ ಅನುಮೋದನೆಯ ಅಫರ್‌ ನೀಡಲಾಯಿತು. ನನ್ನನ್ನು ಖರೀದಿಸಲು ಅವರು   ಪ್ರತಿ ಬಾರಿಯು  ಹಲವಾರು ಕೋಟಿ ರೂಪಾಯಿಗಳನ್ನು ಹೆಚ್ಚಿಸುತ್ತಿದ್ದರು. ಆದರೆ ನಾನು ಪ್ರತಿ ಬಾರಿ ನಿರಾಕರಿಸಿದೆ. ನೋಡಿ, ಪ್ರಾಮಾಣಿಕತೆ ಈಗ ನಿಮ್ಮ ವಿವೇಚನೆಗೆ ಮಾತ್ರವಲ್ಲ. ಇದು ಹೊಸ ಭಾರತ, ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ, ಇಲ್ಲದಿದ್ದರೆ ನೀವು ಸುಧಾರಣೆ ಮಾಡಬೇಕಾಗುತ್ತದೆ' ಎಂದು ಕಂಗನಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.
 

ಈ ದಿನಗಳಲ್ಲಿ ಜಾರಿ ನಿರ್ದೇಶನಾಲಯವು ಮಹದೇವ್ ಆನ್‌ಲೈನ್ ಬೇಟಿಂಗ್ ಹಗರಣದ ತನಿಖೆ ನಡೆಸುತ್ತಿದೆ. ದುಬೈನಿಂದ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ನಡೆಸುತ್ತಿರುವ ಸೌರಭ್ ಚಂದ್ರಕರ್ ಮತ್ತು ಅವರ ವ್ಯಾಪಾರ ಪಾಲುದಾರ ರವಿ ಉಪ್ಪಲ್ 5,000 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿದ್ದಾರೆ. 

ಈ ಪ್ರಕರಣದಲ್ಲಿ ರಣಬೀರ್ ಕಪೂರ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು  ಬಾಲಿವುಡ್‌ ಸೆಲೆಬ್ರೆಟಿಗಳ  ಹೆಸರುಗಳು ಈ ಕೇಸ್‌ಗೆ ಸಂಬಂಧಿಸಿದೆ  ಎಂದು ಬೆಳಕಿಗೆ ಬಂದಿವೆ. 

ಈ ಸೆಲೆಬ್ರಿಟಿಗಳು ಆ್ಯಪ್ ಪ್ರಚಾರಕ್ಕಾಗಿ ಅಥವಾ ಆ್ಯಪ್ ಪ್ರವರ್ತಕರು ಮತ್ತು ಹಗರಣದಲ್ಲಿ ಭಾಗಿಯಾಗಿರುವ ಇತರ ಜನರು ಆಯೋಜಿಸುವ ಕಾರ್ಯಕ್ರಮಗಳಿಗೆ ಹಾಜರಾಗಲು ಕೋಟ್ಯಂತರ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ಇಡಿ ರಣಬೀರ್ ಕಪೂರ್‌ಗೆ ಸಮನ್ಸ್ ಕಳುಹಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದರೆ ವರದಿಗಳ ಪ್ರಕಾರ ಅವರು ತನಿಖಾ ಸಂಸ್ಥೆಯಿಂದ ಸ್ವಲ್ಪ ಸಮಯ ಕೇಳಿದ್ದಾರೆ. 
 

ಈ ಪಟ್ಟಿಯಲ್ಲಿ ರಣಬೀರ್ ಮತ್ತು ಸೋನಾಕ್ಷಿ ಹೊರತುಪಡಿಸಿ, ಸೋನು ಸೂದ್‌, ಮಲೈಕಾ ಅರೋರಾ, ಕಪಿಲ್ ಶರ್ಮಾ, ಇಶಿತಾ ದತ್ತಾ, ಸಾರಾ ಅಲಿ ಖಾನ್, ಸುನೀಲ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಶಮಿತಾ ಶೆಟ್ಟಿ ಮತ್ತು ಸಂಜಯ್ ದತ್ ಸೇರಿದಂತೆ ಸುಮಾರು 34 ಸೆಲೆಬ್ರಿಟಿಗಳಿದ್ದು, ಇಡಿ ಅವರನ್ನು ವಿಚಾರಣೆ ನಡೆಸಬಹುದು.

click me!