ಈ ಫೋಟೋದಲ್ಲಿರೋ ಪುಟ್ಟ ಹುಡುಗ ಯಾರು ಗೊತ್ತಾ? ಮಾಜಿ ಉಪರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಈ ಹುಡುಗ ಈಗ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ. ಯಾರಿದು? ಕನ್ನಡ ಭಾಷೆಗೆ ಅವಮಾನಿಸಿ ಪೇಚಿಗೆ ಸಿಲುಕಿದ್ದ.!
ಸೆಲೆಬ್ರಿಟಿಗಳ ಹಳೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸುತ್ತವೆ. ಈಗ ವೈರಲ್ ಆಗ್ತಿರೋ ಫೋಟೋದಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಜೊತೆ ಒಬ್ಬ ಪುಟ್ಟ ಹುಡುಗ ಇದ್ದಾನೆ. ಈ ಹುಡುಗ ಈಗ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ.
25
ಫೋಟೋದಲ್ಲಿರೋ ಹುಡುಗ ಲೋಕನಾಯಕ ಕಮಲ್ ಹಾಸನ್. ಬಾಲನಟನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಕಮಲ್, 'ಕಲತ್ತೂರ್ ಕಣ್ಣಮ್ಮ' ಚಿತ್ರದಲ್ಲಿ ಸಾವಿತ್ರಿಯವರ ಮಗನಾಗಿ ನಟಿಸಿದ್ದರು.
35
'ಕಲತ್ತೂರ್ ಕಣ್ಣಮ್ಮ' ಚಿತ್ರದ ಅಭಿನಯಕ್ಕಾಗಿ ಕಮಲ್ಗೆ ರಾಷ್ಟ್ರಪತಿ ಪದಕ ಲಭಿಸಿತು. ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬಾಲನಟನಾಗಿ ಪ್ರಶಸ್ತಿ ಪಡೆದ ಕಮಲ್, ಈಗ ಭಾರತೀಯ ಚಿತ್ರರಂಗದ ದಿಗ್ಗಜ ನಟರಾಗಿದ್ದಾರೆ. ಆದರೆ, ಇತ್ತೀಚೆಗೆ ಥಗ್ಲೈಫ್ ಸಿನಿಮಾ ಬಿಡುಗಡೆ ವೇಳೆ ಕನ್ನಡ ಭಾಷೆಗೆ ಅವಮಾನ (Insult to Kannada language) ಮಾಡಿ ಪೇಚಿಗೆ ಸಿಲುಕಿದ್ದರು. ಈ ಕೇಸ್ ಸುಪ್ರೀಂ ಕೋರ್ಟ್ವರೆಗೂ ಹೋಗಿತ್ತು.
55
ಕಮಲ್ ಹಾಸನ್ 60 ವರ್ಷಗಳ ಸಿನಿಮಾ ಜೀವನವನ್ನು ಪೂರ್ಣಗೊಳಿಸಿದ್ದಾರೆ. ಇದೀದ ಇಂಡಿಯನ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.