ಭನ್ಸಾಲಿಯ 'ಗಂಗುಬಾಯಿ ಕಥಿಯಾವಾಡಿ' ಸಿನಿಮಾಕ್ಕೆ ಹೈಕೋರ್ಟ್‌ ಹಸಿರು ನಿಶಾನೆ!

First Published Feb 21, 2021, 10:07 AM IST

ಸಂಜಯ್ ಲೀಲಾ ಭನ್ಸಾಲಿ ಬಾಲಿವುಡ್‌ನ ಮೊಸ್ಟ್‌ ಫೇಮಸ್‌ ಹಾಗೂ ಪ್ರತಿಭಾನ್ವಿತ‌ ಡೈರೆಕ್ಟರ್‌. ಇವರ ಸಿನಿಮಾಗಳು ಅದ್ಧೂರಿತನ, ಶ್ರೀಮಂತಿಕೆ, ಕ್ರಿಯೆಟೀವಿಟಿಗೆ ಹೆಸರುವಾಸಿ. ಅದರ ಜೊತೆ ಇವರ ಸಿನಿಮಾಗಳು ವಿವಾದಗಳಿಂದಲೂ ಹೊರತಾಗಿಲ್ಲ. ಇವರ ಮುಂದಿನ ಚಿತ್ರ ಗಂಗುಬಾಯಿ ಕಥಿಯಾವಾಡಿ ಸಿನಿಮಾ ಕೂಡ ಇದರಲ್ಲೊಂದು. ಈಗ ಬಾಂಬೆ ಹೈಕೋರ್ಟ್‌ ಈ ಸಿನಿಮಾಕ್ಕೆ ಹಸಿರು ನಿಶಾನೆ ಕೊಟ್ಟಿದೆ. ವಿವರಕ್ಕೆ ಓದಿ.
 

ಸಂಜಯ್ ಲೀಲಾ ಭನ್ಸಾಲಿ ಅವರ 'ಗಂಗುಬಾಯಿ ಕಥಿಯಾವಾಡಿ' ಚಿತ್ರದ ವಿರುದ್ಧ ಮನವಿಯನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ.
undefined
ಬಾಂಬೆ ಹೈಕೋರ್ಟ್ ಮನವಿಯನ್ನು ವಜಾಗೊಳಿಸಿದ್ದರಿಂದಭನ್ಸಾಲಿ ಅವರ ಗಂಗುಬಾಯಿ ಕಥಿಯಾವಾಡಿ ಸಿನಿಮಾ ತಂಡನಿರಾಳವಾಗಿದೆ.
undefined
ನಿಜವಾದ ಗಂಗುಬಾಯಿಯ ದತ್ತು ಪುತ್ರ ಈ ಚಿತ್ರವು ಗಾಯಕಿಗೆ ಅವಮಾನ ಮಾಡುವಂತಿದೆ ಎಂಬಕಾರಣದಿಂದ ಅದನ್ನು ನಿಲ್ಲಿಸಬೇಕೆಂದು ಬಯಸಿದರು.
undefined
ಗಂಗುಬಾಯಿಯ ದತ್ತುಪುತ್ರ ಬಾಬುಜಿ ಷಾ, ಸಂಜಯ್ ಲೀಲಾ ಭನ್ಸಾಲಿ ವಿರುದ್ಧ ಶಾಶ್ವತ ತಡೆಯಾಜ್ಞೆ ಆದೇಶವನ್ನು ಕೋರಿ ಮೊಕದ್ದಮೆ ಹೂಡಿದ ಕಾರಣದಿಂದ ಸಿನಿಮಾ ಕಾನೂನು ತೊಂದರೆಗೆ ಸಿಕ್ಕಿತು.
undefined
ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಗಂಗುಬಾಯಿ ಕಥಿಯಾವಾಡಿ ಸಿನಿಮಾದ ವಿರುದ್ಧ ಮನವಿ ಸಲ್ಲಿಸಿದ್ದರಿಂದ ಭನ್ಸಾಲಿ ಕಾನೂನು ವಿವಾದದಲ್ಲಿ ಸಿಲುಕಿದ್ದರು.
undefined
ಚಿತ್ರದಲ್ಲಿನ ವಿಷಯವು ಮೃತ ಅಥವಾ ಜೀವಂತ ಇರೋ ವ್ಯಕ್ತಿಯೊಂದಿಗೆಹೋಲುವುದಿಲ್ಲ,ಎಂದು ಡಿಸ್‌ಕ್ಲೈಮರ್‌ ಸೇರಿಸಬೇಕೆಂದು ಮನವಿಯೊಂದಿಗೆ ಚಿತ್ರಕ್ಕಿದ್ದ ಅಡೆತಡೆಗಳು ನಿವಾರಣೆಯಾಗಿವೆ.
undefined
ನಿಜ ಜೀವನದ ಪಾತ್ರವನ್ನು ಚಿತ್ರಿಸಲು ಪ್ರಯತ್ನಿಸಿದಾಗಲೆಲ್ಲ ಯಾವಾಗಲೂ ಕಷ್ಟವಾಗುತ್ತದೆ. ಆದ್ದರಿಂದ ಕಾಲ್ಪನಿಕ ಕಥೆಗೆ ಅಂಟಿಕೊಳ್ಳುವುದು ಉತ್ತಮ ಎಂದು ಭನ್ಸಾಲಿ ಭಾವಿಸುತ್ತಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
undefined
ಆದರೆ ಚಿತ್ರದ ವಿರುದ್ಧ ತಡೆಯಾಜ್ಞೆ ಅರ್ಜಿಯನ್ನು ಗೌರವಾನ್ವಿತ ನ್ಯಾಯಾಲಯ ವಜಾಗೊಳಿಸಿರುವುದು ಚಿತ್ರ ನಿರ್ಮಾಪಕರಿಗೆ ಒಳ್ಳೆಯ ಸುದ್ದಿಯಾಗಿದೆ.
undefined
ಭನ್ಸಾಲಿಯವರ ಬಹುನಿರೀಕ್ಷಿತ ಚಿತ್ರಕ್ಕೆ ಈಗ ಹೈಕೋರ್ಟ್‌ ಗ್ರೀನ್‌ ಫ್ಲಾಗ್‌ ತೋರಿಸಿದೆ.
undefined
click me!