ಚಿತ್ರವು ಈಗಾಗಲೇ ಮೂರು ಶೆಡ್ಯೂಲ್ಗಳನ್ನು ಪೂರ್ಣಗೊಳಿಸಿದೆ. ಶೀಘ್ರವೇ ಚಿತ್ರ ಥಿಯೇಟರ್ಗಳಲ್ಲಿ ಬಿಡುಗಡೆಯಾಗಬಹುದು. ಸದ್ಯ, ಚಿತ್ರದ ಕೊನೆಯ ಶೆಡ್ಯೂಲ್ನ ಚಿತ್ರೀಕರಣ ಹೈದರಾಬಾದ್ನಲ್ಲಿ (Hyderabad) ನಡೆಯುತ್ತಿದೆ. ಭೋಲಾ ಶಂಕರ್ ಸಿನಿಮಾಕ್ಕೆ ಸಂಗೀತವನ್ನು ಮಹತಿ ಸ್ವರ ಸಾಗರ್ ನೀಡಿದರೆ, ದಡ್ಲಿ ಛಾಯಾಗ್ರಹಣವಿದೆ. ಸತ್ಯಾನಂದ್ ಸಹ ಬರಹಗಾರರಾಗಿದ್ದರೆ, ಮಾರ್ತಾಂಡ್ ಕೆ ವೆಂಕಟೇಶ್, ಎಎಸ್ ಪ್ರಕಾಶ್ ಮತ್ತು ಇತರರು ಚಿತ್ರದೊಂದಿಗೆ ಸಂಬಂಧ ಹೊಂದಿದ್ದಾರೆ. ಚಿತ್ರದ ಸಂಭಾಷಣೆ ತಿರುಪತಿ ಮಾಮಿದಾಳ ಅವರದ್ದು.