ಕರುಪ್ಪು ಸೂಪರ್​ಹಿಟ್ ಆದ್ರೂ ಸೂರ್ಯ ಫ್ಯಾನ್ಸ್ ಗರಂ; ಡೈರೆಕ್ಟರ್ ಬಾಲಾಜಿ ಮೇಲೆ ಸಿಟ್ಟಾಗಿ ಸಖತ್ ಕ್ಲಾಸ್!

Published : Jun 05, 2026, 05:41 PM IST

ಬಾಲಾಜಿ ಅವರು ಈ ಹಿಂದೆ ವೇದಿಕೆಯೊಂದರಲ್ಲಿ ಮಾತನಾಡುತ್ತಾ, "ಈ ಸಿನಿಮಾದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಿದ್ದೆ. ಅದು ಅವರ ಕೊನೆಯ ಸಿನಿಮಾವಾಗಬೇಕಿತ್ತು. ಆದರೆ ಅವರು ಎಚ್. ವಿನೋದ್ ಅವರ ಸಿನಿಮಾಗೆ ಓಕೆ ಅಂದರು. ನಂತರ ನಾನು ಸೂರ್ಯ ಅವರಿಗೆ ಈ ಕಥೆ ಹೇಳಿದೆ" ಎಂದಿದ್ದರು.

PREV
18

ಕರುಪ್ಪು' 300 ಕೋಟಿ ಕ್ಲಬ್ ಸೇರಿದ್ರೂ ಸೂರ್ಯ ಫ್ಯಾನ್ಸ್ ಸುಮ್ಮನಿಲ್ಲ! ಡೈರೆಕ್ಟರ್ ಆರ್‌ಜೆ ಬಾಲಾಜಿಗೆ ಕ್ಲಾಸ್ ತಗೊಂಡಿದ್ದೇಕೆ?

ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅವರ 'ಕರುಪ್ಪು' (Karuppu) ಸಿನಿಮಾ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಸೂರ್ಯ ಮತ್ತು ತ್ರಿಶಾ ಕಾಂಬಿನೇಷನ್‌ನ ಈ ಚಿತ್ರ ಈಗಾಗಲೇ 310 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ಸೂರ್ಯ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಎನಿಸಿಕೊಂಡಿದೆ. ಆದರೆ, ಇಷ್ಟೊಂದು ದೊಡ್ಡ ಯಶಸ್ಸು ಸಿಕ್ಕರೂ ಸೂರ್ಯ ಅಭಿಮಾನಿಗಳು ಮಾತ್ರ ಸಖತ್ ಆಕ್ರೋಶದಲ್ಲಿದ್ದಾರೆ. ಅವರ ಈ ಸಿಟ್ಟಿಗೆ ಗುರಿಯಾಗಿರುವುದು ಬೇರೆ ಯಾರೂ ಅಲ್ಲ, ಸ್ವತಃ ಚಿತ್ರದ ನಿರ್ದೇಶಕ ಆರ್‌ಜೆ ಬಾಲಾಜಿ!

28

ವಿವಾದಕ್ಕೆ ಕಿಡಿ ಹಚ್ಚಿದ ಆ ಒಂದು ಭೇಟಿ!

ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ನಿರ್ದೇಶಕ ಆರ್‌ಜೆ ಬಾಲಾಜಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ (Thalapathy Vijay) ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಾಲಾಜಿ, "ಅವರಿಂದಾಗಿಯೇ 'ಕರುಪ್ಪು' ಚಿತ್ರ ಪ್ರಾರಂಭವಾಯಿತು. ಈ ಭೇಟಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಕ್ಯಾಪ್ಶನ್ ನೀಡಿದ್ದಾರೆ. ಬಾಲಾಜಿ ಅವರ ಈ ಮಾತು ಸೂರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

38

ಸೆಕೆಂಡ್ ಚಾಯ್ಸ್ ಕಥೆ ನೆನಪಿಸಿದ ಅಭಿಮಾನಿಗಳು!

ಬಾಲಾಜಿ ಅವರು ಈ ಹಿಂದೆ ವೇದಿಕೆಯೊಂದರಲ್ಲಿ ಮಾತನಾಡುತ್ತಾ, "ಈ ಸಿನಿಮಾದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಿದ್ದೆ. ಅದು ಅವರ ಕೊನೆಯ ಸಿನಿಮಾವಾಗಬೇಕಿತ್ತು. ಆದರೆ ಅವರು ಎಚ್. ವಿನೋದ್ ಅವರ ಸಿನಿಮಾಗೆ ಓಕೆ ಅಂದರು. ನಂತರ ನಾನು ಸೂರ್ಯ ಅವರಿಗೆ ಈ ಕಥೆ ಹೇಳಿದೆ" ಎಂದು ಬಹಿರಂಗಪಡಿಸಿದ್ದರು.

48

ಈಗ ಸಿನಿಮಾ ಇಷ್ಟೊಂದು ದೊಡ್ಡ ಹಿಟ್ ಆದಾಗ, ಚಿತ್ರದ ಯಶಸ್ಸಿನ ಕ್ರೆಡಿಟ್ ಅನ್ನು ಸೂರ್ಯ ಅವರಿಗೆ ನೀಡುವ ಬದಲು, ವಿಜಯ್ ಅವರನ್ನು ಭೇಟಿ ಮಾಡಿ "ಅವರಿಂದ ಸಿನಿಮಾ ಶುರುವಾಯಿತು" ಎನ್ನುತ್ತಿರುವುದು ಸೂರ್ಯ ಅಭಿಮಾನಿಗಳನ್ನು ಕೆರಳಿಸಿದೆ. "ನಮ್ಮ ಹೀರೋ ಈ ಚಿತ್ರಕ್ಕೆ ಸೆಕೆಂಡ್ ಚಾಯ್ಸ್ ಅಂದುಕೊಂಡರೂ ಪರವಾಗಿಲ್ಲ, ಆದರೆ ಯಶಸ್ಸಿನ ಕ್ರೆಡಿಟ್ ಕೊಡುವಾಗ ಹೀಗೆ ಮಾಡುವುದು ಸರಿಯಲ್ಲ" ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

58

ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ದಾಖಲೆ ಮುರಿದ 'ಕರುಪ್ಪು'!

ಸೂರ್ಯ ಫ್ಯಾನ್ಸ್ ಸಿಟ್ಟಾಗಲು ಮತ್ತೊಂದು ಮುಖ್ಯ ಕಾರಣ ಬಾಕ್ಸ್ ಆಫೀಸ್ ಲೆಕ್ಕಾಚಾರ. ಸದ್ಯದ ವರದಿಗಳ ಪ್ರಕಾರ, 'ಕರುಪ್ಪು' ಚಿತ್ರವು ವಿಜಯ್ ಅಭಿನಯದ 'ಬಿಗಿಲ್' (300 ಕೋಟಿ) ಮತ್ತು 'ವಾರಿಸು' (310 ಕೋಟಿ) ಚಿತ್ರಗಳ ದಾಖಲೆಯನ್ನು ಮೀರಿಸಿದೆ. ವಿಜಯ್ ಅವರ ದಾಖಲೆಯನ್ನೇ ಮುರಿದ ಸಿನಿಮಾವನ್ನು ಹಿಡಿದುಕೊಂಡು, ನಿರ್ದೇಶಕರು ಮತ್ತೆ ವಿಜಯ್ ಅವರನ್ನೇ ಹೊಗಳುತ್ತಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. "ಸೂರ್ಯ ಇಲ್ಲದಿದ್ದರೆ ಈ ಸಿನಿಮಾ ಇಷ್ಟೊಂದು ಕಲೆಕ್ಷನ್ ಮಾಡುತ್ತಿರಲಿಲ್ಲ" ಎಂಬುದು ಅಭಿಮಾನಿಗಳ ವಾದ.

68

ಸೂರ್ಯ ಅವರ 'ಕ್ಲಾಸಿ' ಪೋಸ್ಟ್!

ವಿವಾದದ ಬೆಂಕಿ ಹೊತ್ತಿ ಉರಿಯುತ್ತಿರುವಾಗಲೇ ನಟ ಸೂರ್ಯ ಅವರು ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. "ಪ್ರೀತಿಯಿಂದ ಮುಂದುವರಿಯಿರಿ. ವಿನಮ್ರ ಮತ್ತು ಉದಾರರಾಗಿರಿ" ಎಂದು ಅವರು ಬರೆದುಕೊಂಡಿದ್ದಾರೆ.

78

ಈ ಪೋಸ್ಟ್ ಅನ್ನು ಅಭಿಮಾನಿಗಳು ತಮ್ಮ ನಟನ ಘನತೆಯ ಸಂಕೇತ ಎಂದು ಕೊಂಡಾಡುತ್ತಿದ್ದಾರೆ. ಗಲಾಟೆ ಮಾಡುವ ಅಭಿಮಾನಿಗಳಿಗೆ ಸೂರ್ಯ ಪರೋಕ್ಷವಾಗಿ ಶಾಂತವಾಗಿರಲು ಸಲಹೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

88

ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಈ ಚಿತ್ರವು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ. ಏನೇ ವಿವಾದಗಳಿದ್ದರೂ, 'ಕರುಪ್ಪು' ಸದ್ಯಕ್ಕೆ ಕಾಲಿವುಡ್‌ನ ಸುನಾಮಿಯಾಗಿ ಮಾರ್ಪಟ್ಟಿರುವುದಂತೂ ಸತ್ಯ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories