'ಏಕೆ ಮೊದಲೇ ಹೇಳಲಿಲ್ಲ?' ಎಂದು ಕೇಳುವಾಗ, ನಾವು ಅವರ ಪರಿಸ್ಥಿತಿಯನ್ನು ಪರಿಗಣಿಸಬೇಕು. ಎಲ್ಲರಿಗೂ ಮಾತನಾಡಲು ಆಗೋಲ್ಲ. ಇಂಥ ನಡವಳಿಕೆಯಿಂದಾಗುವ ಗಾಯ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಆಳವಾಗಿ ಚುಚ್ಚಿರುತ್ತದೆ. ಈ ಕೃತ್ಯಗಳು ನಮ್ಮ ನಂಬಿಕೆ, ಪ್ರೀತಿ ಮತ್ತು ಶಕ್ತಿಯನ್ನೇ ಅಲ್ಲಾಡಿಸುತ್ತದೆ. ಪ್ರತಿಯೊಬ್ಬ ತಾಯಿಯ ಹಿಂದೆಯೂ ಪೋಷಿಸುವ ಮತ್ತು ರಕ್ಷಿಸುವ ಬಯಕೆ ಇರುತ್ತದೆ, ಆ ಪಾವಿತ್ರ್ಯತೆಗೆ ಧಕ್ಕೆಯಾದಾಗ, ಅದು ನಮ್ಮೆಲ್ಲರ ಮೇಲೂ ಪರಿಣಾಮ ಬೀರುತ್ತದೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.