ಮಾವ ಚಿರಂಜೀವಿ ಮೇಲಿನ ಅಂಧಾಭಿಮಾನಕ್ಕೆ ಹಣ ಕಳೆದುಕೊಂಡ ಸ್ಟಾರ್ ನಟ ಅಲ್ಲು ಅರ್ಜುನ್!

Published : Dec 04, 2024, 01:09 PM IST

ನಮ್ಮ ದೇಶದಲ್ಲಿ ಇದೀಗ ಎಲ್ಲ ಸಿನಿಪ್ರಿಯರಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ನಟನೆಯ ಪುಷ್ಪ-2 ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ, ಇದೇ ಅಲ್ಲು ಅರ್ಜುನ್ ಅವರು ತಮ್ಮ ಮಾವ ಚಿರಂಜೀವಿ ಅವರಿಂದಲೇ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಅಲ್ಲು ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗುಸುಗುಸು ಕೂಡ ಆರಂಭವಾಗಿದೆ.

PREV
15
ಮಾವ ಚಿರಂಜೀವಿ ಮೇಲಿನ ಅಂಧಾಭಿಮಾನಕ್ಕೆ ಹಣ ಕಳೆದುಕೊಂಡ ಸ್ಟಾರ್ ನಟ ಅಲ್ಲು ಅರ್ಜುನ್!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಿರೋ ಪುಷ್ಪ 2 ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿವೆ. ಸಿನಿಮಾ ಪ್ರಿಯರು ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ಓಪನಿಂಗ್ಸ್‌ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡೋದು ಪಕ್ಕಾ ಅಂತ ಟ್ರೇಡ್ ಪಂಡಿತರು ಹೇಳುತ್ತಿದ್ದಾರೆ. ಇನ್ನು ಅಡ್ವಾನ್ಸ್ ಬುಕಿಂಗ್ಸ್‌ನಲ್ಲೇ ದಾಖಲೆ ಶುರುವಾಗಿದೆ. ಸಿನಿಮಾ ಹಿಟ್ ಆದರೆ ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗುತ್ತದೆ ಅಂತ ಅಂದಾಜಿಸಲಾಗಿದೆ.

25

ಒಟ್ಟಾರೆ, ಪುಚ್ಪ-2 ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಕ್ರೇಜ್ ಸೃಷ್ಟಿಸಿದೆ. ಇನ್ನು ಇದೇ ವೇಳೆ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಬಗ್ಗೆ ಹೇಳಿದ ಮಾತುಗಳು ಇದೀಗ ವೈರಲ್ ಆಗುತ್ತಿವೆ. ಇನ್ನು ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಕುಟುಂಬದ ನಡುವೆ ವೈಮನಸ್ಸು ಶುರುವಾಗಿದೆ ಎಂಬ ಗುಸುಗುಸು ಆರಂಭವಾಗಿದೆ. ಆದರೆ, ಈಗಲೂ ಅಲ್ಲು ಅರ್ಜುನ್ ಮಾತ್ರ ಮಾವ ಚಿರಂಜೀವಿ ಬಗ್ಗೆ ಭಾರೀ ಅಭಿಮಾನ ಇಟ್ಟುಕೊಂಡಿದ್ದಾರೆ.

35

ಅಲ್ಲು ಅರ್ಜುನ್ ಅವರು ತಮ್ಮ ಮಾವ ಚಿರಂಜೀವಿ ಬಗ್ಗೆ ಹೇಳಿದ್ದ ಮಾತುಗಳನ್ನು ಅಭಿಮಾನಿಗಳು ಭಾರೀ ವೈರಲ್ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ಸಿನಿಮಾ ಮಂದಿರದಲ್ಲಿ ಅತಿಹೆಚ್ಚು ಬಾರಿ ನೋಡಿದ ಸಿನಿಮಾ ಯಾವುದೆಂದರೆ ಅದು ಮಾವ ಚಿರಂಜೀವಿ ನಟನೆಯ ಇಂದ್ರ ಸಿನಿಮಾವಾಗಿದೆ. ಇಂದ್ರ ಚಿತ್ರವನ್ನು ಬರೋಬ್ಬರಿ 17 ಸಲ ನೋಡಿದ್ದಾರೆ.

45

ನಂತರ, ಫ್ರೆಂಡ್ಸ್ ಜೊತೆ ಇಂದ್ರ ಸಿನಿಮಾದಲ್ಲಿ ಚಿರಂಜೀವಿ ಅವರು ಡ್ಯಾನ್ಸ್ ಮಾಡಿದ್ದ ಬಗ್ಗೆ ಬೆಟ್ಟಿಂಗ್ ಕಟ್ಟಿದ್ದಾರೆ. ಇಂದ್ರ ಚಿತ್ರದ ವೀಣ ಹಾಡಿನ ಸ್ಟೆಪ್‌ನಲ್ಲಿ ಚಿರು ಒಬ್ಬರೇ ಡ್ಯಾನ್ಸ್ ಮಾಡಿದ್ದಾರೆ ಎಂದು ಅಲ್ಲು ಅರ್ಜುನ್ ಹೇಳಿದರೆ, ಅವರ ಗೆಳೆಯರು ಇಲ್ಲ ಚಿರಂಜೀವಿ ಅವರೊಂದಿಗೆ ಸೋನಾಲಿ ಬೇಂದ್ರೆ ಅವರೂ ಡ್ಯಾನ್ಸ್ ಮಾಡಿದ್ದಾರೆ ಎಂದು  25 ಸಾವಿರ ರೂ. ಬೆಟ್ಟಿಂಗ್ ಕಟ್ಟಿದ್ದಾರೆ..

55

ಬೆಟ್ಟಿಂಗ್ ಕಟ್ಟಿದ ನಂತರ ಅಲ್ಲು ಅರ್ಜುನ್ ಅವರು ಗೆಳೆಯರರೊಂದಿಗೆ 18ನೇ ಸಲ ಸಿನಿಮಾ ನೋಡಿದಾಗ ಪಕ್ಕದಲ್ಲಿ ಸೋನಾಲಿ ಬೇಂದ್ರೆ ಡ್ಯಾನ್ಸ್ ಮಾಡುತ್ತಿರುವುದು ಗೊತ್ತಾಗಿದೆ. ಅಂದರೆ, 17 ಸಲ ನನಗೆ ಇಂದ್ರ ಸಿನಿಮಾದಲ್ಲಿ ಮಾವ ಚಿರಂಜೀವಿ ಮಾತ್ರ ಡ್ಯಾನ್ಸ್ ಮಾಡುತ್ತಿದ್ದುದು ಗಮನಕ್ಕೆ ಬಂದಿದೆ. ಅವರು ಸೋಲೋ ಡ್ಯಾನ್ಸ್ ಮಾಡಿದ್ದನ್ನೇ ನೋಡಿದ್ದು, ಪಕ್ಕದಲ್ಲಿ ಇನ್ನೊಬ್ಬರು ಡ್ಯಾನ್ಸ್ ಮಾಡಿರುವುದನ್ನು ನಾನು ಗಮನಿಸಿರಲಿಲ್ಲ. ಹೀಗಾಗಿ, ನನಗೆ ಫ್ರೆಂಡ್ಸ್ ಜೊತೆಗೆ ಬೆಟ್ಟಿಂಗ್ ಕಟ್ಟಿದ 25 ಸಾವಿರ ರೂ. ನಷ್ಟ ಆಗಿದೆ ಎಂದು ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಹೀಗೆ ಅಲ್ಲು ಅರ್ಜುನ್ ಅವರು ಮಾವ ಚಿರಂಜೀವಿ ಮೇಲಿನ ಅಂದಾಭಿಮಾನ ತೋರಿಸಿ ಹಣವನ್ನು ಕಳೆದುಕೊಂಡಿದ್ದಾರೆ. ಗಂಗೋತ್ರಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಈಗ ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪುಷ್ಪ-2 ರಿಸಲ್ಟ್ ಹೇಗಿದೆ ಎಂಬುದರ ಮೇಲೆ ಸಿನಿಪ್ರಿಯರ ಚಿತ್ತ ನೆಟ್ಟಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories