ಚಿರಂಜೀವಿಗೆ ಯುಕೆ ಸಂಸತ್ತಿನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ! ಬ್ರಿಟೀಷ್ ಗೌರವ ಪಡೆದ ಮೊದಲ ಭಾರತೀಯ ನಟ!

ದಕ್ಷಿಣದ ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ಯುಕೆ ಸಂಸತ್ತಿನಲ್ಲಿ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬ್ರಿಟಿಷ್ ಸರ್ಕಾರದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಈ ಗೌರವವು ತಮ್ಮ ಕೆಲಸವನ್ನು ಹುರುಪಿನಿಂದ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ಚಿರಂಜೀವಿ ಹೇಳಿದ್ದಾರೆ.

actor Chiranjeevi made history as the first Indian celebrity  receives UK Lifetime Achievement Award gow

ದಕ್ಷಿಣದ ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ಯುಕೆ ಸಂಸತ್ತಿನಲ್ಲಿ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರ ಜೊತೆಗೆ ಬ್ರಿಟಿಷ್ ಸರ್ಕಾರದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಚಿರಂಜೀವಿ ಪಾಲಾಗಿದೆ.

ಮೆಗಾಸ್ಟಾರ ಚಿರಂಜೀವಿ-ಮಂಚು ಫ್ಯಾಮಿಲಿ ವಿವಾದ ಬಗ್ಗೆ ವಿಷ್ಣು ಕಾಮೆಂಟ್ ಇದು!

actor Chiranjeevi made history as the first Indian celebrity  receives UK Lifetime Achievement Award gow

ಮಾರ್ಚ್ 19 ರಂದು ಲಂಡನ್‌ನ ಯುಕೆ ಸಂಸತ್ತಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಗಮನಾರ್ಹ ಸಾಧನೆಗೆ ಚಿರಂಜೀವಿ ಅವರ ಸಹೋದರ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮೆಗಾಸ್ಟಾರ್ ಸ್ಥಾನಕ್ಕೆ ಇಬ್ಬರು ಹೀರೋಗಳಿಂದ ಭಾರೀ ಪೈಪೋಟಿ; ರಾಮ್‌ಚರಣ್‌ಗೆ ಅರ್ಹತೆ ಇಲ್ವಾ?


ಸಮಾರಂಭದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪವನ್‌ , ವಾಲ್ಟೇರ್ ವೀರಯ್ಯ ಅವರ ಕಿರಿಯ ಸಹೋದರನಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. "ನಾನು ಚಿರಂಜೀವಿ ಅವರನ್ನು ಅಣ್ಣನಿಗಿಂತ ತಂದೆಯಂತೆ ಪರಿಗಣಿಸುತ್ತೇನೆ. ಜೀವನದಲ್ಲಿ ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾದಾಗ ಅವರು ನನಗೆ ದಾರಿ ತೋರಿಸಿದ ವ್ಯಕ್ತಿ. ನನ್ನ ಅಣ್ಣ ಚಿರಂಜೀವಿ ನನ್ನ ಜೀವನದ ನಾಯಕ" ಎಂದು ಬರೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ಮೆಚ್ಚಿದ ಚಿರಂಜೀವಿಯ ಆ ಸಿನಿಮಾ: ರೀಮೇಕ್‌ಗೆ ಸಿದ್ಧತೆ.. ಆದರೆ ಆ ಚಿತ್ರ ಆರಂಭದಲ್ಲೇ?

ಯುಕೆಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಮೆಗಾಸ್ಟಾರ್,  ಈ ಗೌರವಕ್ಕೆ  ಕೃತಜ್ಞತೆ ಸಲ್ಲಿಸಿದ್ದು,  ಇದು ತಮ್ಮ ಕೆಲಸವನ್ನು  ಹುರುಪಿನಿಂದ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ಹೇಳಿದರು.  ಯುಕೆ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಹಲವಾರು ಗೌರವಾನ್ವಿತ ಸದಸ್ಯರು, ಸಚಿವರು ಮತ್ತು ಅಧೀನ ಕಾರ್ಯದರ್ಶಿಗಳು, ರಾಜತಾಂತ್ರಿಕರು ನೀಡಿದ ಗೌರವಕ್ಕಾಗಿ ಹೃದಯ ತುಂಬಿ ಬಂದಿದೆ. ಟೀಮ್ ಬ್ರಿಡ್ಜ್ ಇಂಡಿಯಾದಿಂದ ಜೀವಮಾನ ಸಾಧನೆ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಟ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಧನ್ಯವಾದ ಸಂದೇಶ ಬರೆದುಕೊಂಡಿದ್ದಾರೆ.

ಸಿಲ್ಕ್ ಸ್ಮಿತಾ ಸಾವಿಗೂ ಮುನ್ನ ಚಿರಂಜೀವಿ, ಬಾಲಯ್ಯ, ರಜನಿಕಾಂತ್ ಬಿಟ್ಟು ರವಿಚಂದ್ರನ್‌ಗೆ ಫೋನ್ ಮಾಡಿದ್ದೇಕೆ?

ಮಾತುಗಳು ಬರುತ್ತಿಲ್ಲ. ಆದರೆ ನನ್ನ ಪ್ರೀತಿಯ ಅಭಿಮಾನಿಗಳು, ಒಡಹುಟ್ಟಿದ ಸಹೋದರರು, ಒಡಹುಟ್ಟಿದ   ಸಹೋದರಿಯರು, ನನ್ನ ಚಲನಚಿತ್ರ ಕುಟುಂಬದ ಹಿತೈಷಿಗಳು, ಸ್ನೇಹಿತರು ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರು ಮತ್ತು ನನ್ನ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಕೊಡುಗೆ ನೀಡಿದ ಮತ್ತು ನಾನು ಪ್ರತಿಪಾದಿಸುತ್ತಿರುವ ಮಾನವೀಯ ಕಾರ್ಯಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಈ ಗೌರವವು  ಮತ್ತಷ್ಟು ಹುರುಪಿನಿಂದ  ನನ್ನ ಕೆಲಸವನ್ನು ಮುಂದುವರಿಸಲು ನನ್ನನ್ನು ಪ್ರೇರೇಪಿಸುತ್ತದೆ. ಮತ್ತು ನಿಮ್ಮ ಸುಂದರ ಅಭಿನಂದನಾ ಸಂದೇಶಗಳಿಗಾಗಿ ಪ್ರತಿಯೊಬ್ಬರಿಗೂ ಪ್ರೀತಿ ಕಳಿಸುತ್ತೇನೆ ಎಂದಿದ್ದಾರೆ.

ಚಿರಂಜೀವಿ, ಬಾಲಯ್ಯ ಬಂದ್ರೂ ಕಾಲ್ ಮೇಲೆ ಕಾಲ್ ತೆಗೀಲಿಲ್ಲ, ಆದ್ರೆ ಆ ನಟ ಬಂದರೆ ಸ್ಮಿತಾ ಎದ್ದು ನಿಲ್ಲುತ್ತಿದ್ದರು!

Latest Videos

vuukle one pixel image
click me!