ವಡಿವೇಲುರನ್ನ ಸಿನಿಮಾದಿಂದ ಹೊರಹಾಕಿದ ಭಾರತಿರಾಜಾ: ಅಸಲಿಗೆ ಹಾಸ್ಯನಟ ಕಣ್ಣೀರು ಹಾಕಿದ್ದು ಯಾಕೆ?

ಸೌತ್ ಸ್ಟಾರ್ ಡೈರೆಕ್ಟರ್ ಭಾರತಿರಾಜಾ ತಮ್ಮ ಸಿನಿಮಾದಿಂದ ಸ್ಟಾರ್ ಕಾಮಿಡಿಯನ್ ವಡಿವೇಲುರನ್ನು ಹೊರಗೆ ಹಾಕಿದರಂತೆ. ಅವರು ಯಾಕೆ ಹಾಗೆ ಮಾಡಿದರು? ಕಾರಣ ಏನು?

Vadivelu and Bharathiraja Controversy in Kizhakku Cheemayile Movie gvd

ತಮಿಳು, ತೆಲುಗು ಸಿನಿಮಾ ಅಭಿಮಾನಿಗಳನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ ಹಾಸ್ಯನಟರಲ್ಲಿ ವಡಿವೇಲು ಒಬ್ಬರು. ತಮ್ಮ ಬಾಡಿ ಲ್ಯಾಂಗ್ವೇಜ್‌ನಿಂದ ಅಭಿಮಾನಿಗಳನ್ನು ಆಕರ್ಷಿಸಿದ ವಡಿವೇಲು, ತಮಿಳು ಸಿನಿಮಾದಲ್ಲಿ ತಮಗೊಂದು ವಿಶೇಷ ಶೈಲಿಯನ್ನು ರೂಪಿಸಿಕೊಂಡರು. ಈ ದಿನಗಳಲ್ಲಿ ಮೀಮ್ ಕ್ರಿಯೇಟರ್ಸ್‌ಗೆ ದೇವರು ಅಂದರೆ ಅದು ವಡಿವೇಲುನೇ. ಅವರ ಕಾಮಿಡಿ ಸೀನ್ಸ್‌ಗಳೇ ಈ ದಿನಗಳಲ್ಲಿ ಮೀಮ್ ಟೆಂಪ್ಲೇಟ್ಸ್‌ಗಳಾಗಿ ಸೋಶಿಯಲ್ ಮೀಡಿಯಾವನ್ನು ಆಕ್ರಮಿಸಿವೆ. ಆ ಮಟ್ಟಿಗೆ ಜನರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯನ್ನು ಒತ್ತಿದ್ದಾರೆ ವಡಿವೇಲು. ತೆಲುಗಿನಲ್ಲಿ ಬ್ರಹ್ಮಾನಂದಂ ಮಾದರಿ ತಮಿಳಿನಲ್ಲಿ ವಡಿವೇಲುಗೆ ಸ್ಟಾರ್ ಡಮ್ ಇದೆ.

Vadivelu and Bharathiraja Controversy in Kizhakku Cheemayile Movie gvd

ವಡಿವೇಲು ಸಿನಿಮಾದಲ್ಲಿ ಕಾಮಿಡಿಯನ್ ಆಗಿ ನಟಿಸಿ ಜನರನ್ನು ನಗಿಸಿದರೂ, ನಿಜ ಜೀವನದಲ್ಲಿ ಅವರು ಸ್ವಲ್ಪ ಕಠಿಣ ವ್ಯಕ್ತಿ ಅಂತಾರೆ. ಅವರ ಜೊತೆ ಸಹಾಯ ಪಾತ್ರಗಳಲ್ಲಿ ನಟಿಸಿದ ಬಹಳಷ್ಟು ಕಾಮಿಡಿಯನ್‌ಗಳು ವಡಿವೇಲು ನಿಜ ಸ್ವರೂಪ ಬೇರೆ ಎಂದು ಯೂಟ್ಯೂಬ್ ಇಂಟರ್ವ್ಯೂಗಳಲ್ಲಿ ಹೇಳುತ್ತಿದ್ದಾರೆ. ಆದರೆ ಅವುಗಳನ್ನು ತಲೆಕೆಡಿಸಿಕೊಳ್ಳದ ವಡಿವೇಲು ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಗ್ಯಾಂಗ್‌ಸ್ಟರ್ಸ್, ಮಾರಿಸನ್ ಮುಂತಾದ ಸಿನಿಮಾಗಳಿವೆ.


ಇಂತಹ ಪರಿಸ್ಥಿತಿಯಲ್ಲಿ ಕಿಜಕ್ಕು ಚೀಮಯಿಲೇ ಸಿನಿಮಾದಲ್ಲಿ ನಟಿಸುವುದಕ್ಕೆ ಹೆಚ್ಚು ಸಂಬಳ ಕೇಳಿ ಪಟ್ಟು ಹಿಡಿದ ವಡಿವೇಲುರನ್ನು ನಿರ್ದೇಶಕ ಭಾರತಿರಾಜಾ ಹೊರಗೆ ಹಾಕಿದ ಘಟನೆ ನಡೆಯಿತು. ನಿರ್ದೇಶಕ ಭಾರತಿರಾಜಾ ಕೊಟ್ಟ ಮಾಸ್ಟರ್ ಪೀಸ್ ಸಿನಿಮಾಗಳಲ್ಲಿ ಕಿಜಕ್ಕು ಚೀಮಯಿಲೇ ಸಿನಿಮಾ ಒಂದು. ಈ ಸಿನಿಮಾವನ್ನು ತೆಲುಗಿನಲ್ಲಿ ಪಲ್ನಾಟಿ ಪೌರುಷಂ ಹೆಸರಿನಲ್ಲಿ ರಿಮೇಕ್ ಮಾಡಿದರು. ತಮಿಳಿನಲ್ಲಿ ಈ ಮೂವಿಯನ್ನು ಕಲೈಪುಲಿ ಎಸ್. ಥಾನು ನಿರ್ಮಿಸಿದರು. ಆ ಕಾಲದಲ್ಲೇ ಈ ಸಿನಿಮಾವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಿದರು.

ಸಿನಿಮಾ ಬಜೆಟ್ ಜಾಸ್ತಿ ಇದೆ ಅಂತ ತಿಳಿದುಕೊಂಡ ವಡಿವೇಲು, ಸರಿ ನಾವು ಕೂಡ ನಮ್ಮ ಸಂಬಳವನ್ನು ಹೆಚ್ಚಿಸಿ ಕೇಳೋಣ ಅಂತ ನಿರ್ಧರಿಸಿ, ಇದರಲ್ಲಿ ನಟಿಸುವುದಕ್ಕೆ 25 ಸಾವಿರ ರೂಪಾಯಿ ಬೇಕೆಂದು ಕೇಳಿದರಂತೆ. ಇದರಿಂದ ಕೋಪಗೊಂಡ ಭಾರತಿರಾಜಾ, ನೀನು ನಟಿಸಬೇಕಾಗಿಲ್ಲ ಹೋಗು ಎಂದು ಹೇಳಿ ಹೊರಗೆ ಹಾಕಿದ್ದರಿಂದ ಅಲ್ಲಿಂದ ಕಣ್ಣೀರು ಹಾಕುತ್ತಾ ಹೊರಟು ಹೋದರಂತೆ ವಡಿವೇಲು. ಇದನ್ನು ನೋಡಿದ ನಿರ್ಮಾಪಕ ಥಾನು, ಏನಾಯಿತು ಎಂದು ವಡಿವೇಲುರನ್ನು ಕೇಳಿದರು. ಆಗ ಅವರು ಏನು ನಡೆಯಿತು ಎಂದು ಹೇಳಿದರು.

ಆ ನಂತರ ವಡಿವೇಲು ಕೇಳಿದ 25 ಸಾವಿರ ರೂಪಾಯಿ ಸಂಬಳವನ್ನು ಕೊಟ್ಟು ಅವರನ್ನು ಸಮಾಧಾನ ಪಡಿಸಿದ ಥಾನು, ರೆಮ್ಯುನರೇಷನ್ ವಿಷಯ ನನ್ನನ್ನು ಕೇಳದೆ ಅವರನ್ನು ಯಾಕೆ ಕೇಳಿದೆ, ಇನ್ಮುಂದೆ ನನ್ನನ್ನೇ ಕೇಳು ಎಂದು ಹೇಳಿ ಕಳುಹಿಸಿದರಂತೆ. ಈ ವಿಷಯವನ್ನು ಥಾನು ಒಂದು ಇಂಟರ್ವ್ಯೂನಲ್ಲಿ ಹೇಳಿದರು. ಈ ಸಿನಿಮಾ ವಡಿವೇಲುಗೆ ಒಂದು ಟರ್ನಿಂಗ್ ಪಾಯಿಂಟ್ ಆಗಿ ನಿಂತಿತು.

Latest Videos

vuukle one pixel image
click me!