ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, 15,000 ಕೋಟಿ ರೂ ದಾನ ಘೋಷಿಸಿದ ವೇದಾಂತ ಮುಖ್ಯಸ್ಥ

Published : Feb 03, 2026, 04:18 PM IST

ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, ಮಹತ್ವದ ಮಾತುಕತೆ ನಡೆಸಿದ ವೇದಾಂತ ಮುಖ್ಯಸ್ಥ ಮೊದಲೇ ನಿರ್ಧರಿಸಿದಂತೆ 15,000 ಕೋಟಿ ರೂ ದಾನ ಮಾಡುವುದಾಗಿ ಪ್ರಧಾನಿ ಮೋದಿಗೆ ತಿಳಿಸಿದ್ದಾರೆ. ಯಾರಿಗೆಲ್ಲಾ ಆಸ್ತಿ ದಾನ?

PREV
16
ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ನೋವಿನಲ್ಲೂ ಮಹತ್ವದ ನಿರ್ಧಾರ

ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಪುತ್ರ 49ರ ಹರೆಯ ಅಗ್ನಿವೇಶ್ ಅಗರ್ವಾಲ್ ಸಾವಿನ ಬಳಿಕ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಜನವರಿ 7 ರಂದು ಅಗ್ನಿವೇಶ್ ಅಗರ್ವಾಲ್ ನಿಧನರಾಗಿದ್ದರು. ಇದೀಗ ಒಂದು ತಿಂಗಳಲ್ಲೇ ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಆಸ್ತಿ ದಾನ ಪ್ರಕ್ರಿಯೆ ಆರಂಭಿಸಿದ್ದಾರೆ. ಪ್ರಧಾನಿ ಮೋದಿಗೂ ತಮ್ಮ ಆಸ್ತಿ ದಾನದ ಕುರಿತು ಮಾಹಿತಿ ನೀಡಿದ್ದಾರೆ.

26
ಆಸ್ತಿಯ ಶೇಕಡಾ 75ರಷ್ಟು ದಾನ

ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ವಿಶ್ವದ ನಾಯಕರ ಜೊತೆಗಿನ ದುಂಡು ಮೇಜು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಹ್ವಾನದ ಮೇರೆಗೆ ಅನಿಲ್ ಅಗರ್ವಾಲ್ ಕೂಡ ಪಾಲ್ಗೊಂಡಿದ್ದರು. ವಿಶ್ವ ನಾಯಕರ ಜೊತೆ ಅನಿಲ್ ಅಗರ್ವಾಲ್ ಗ್ಲೋಬಲ್ ಎನರ್ಜಿ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಅಗರ್ವಾಲ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಪುತ್ರನ ನಿಧನದ ಬೆನ್ನಲ್ಲೇ ಘೋಷಿಸಿದಂತೆ ತಾವು ತಮ್ಮ ಆಸ್ತಿಯ ಶೇಕಡಾ 75ರಷ್ಟು ದಾನ ಮಾಡುವುದಾಗಿ ಮೋದಿಗೆ ತಿಳಿಸಿದ್ದಾರೆ.

36
ಮಗನ ಆಶಯದಂತೆ ಸಮಾಜಮುಖಿ ಕೆಲಸ

ನನ್ನ ಮಗನ ಆಶಯದಂತೆ ನಾನು ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುತ್ತೇನೆ. ನನ್ನ ದುಡಿದ ಹಣದಲ್ಲಿ 15,000 ಕೋಟಿ ರೂಪಾಯಿ ಹಣವನ್ನು ದಾನ ಮಾಡುತ್ತೇನೆ. ಶಿಕ್ಷಣ, ಆರೋಗ್ಯ ಸೇರಿದಂತೆ ಸಮಾಜಕ್ಕೆ ಒಳಿತಾಗುವ ಕ್ಷೇತ್ರಕ್ಕೆ 15,000 ಕೋಟಿ ರೂಪಾಯಿ ದಾನದ ಮೂಲಕ ನೀಡುತ್ತೇನೆ ಎಂದು ಅನಿಲ್ ಅಗರ್ವಾಲ್ , ಮೋದಿ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

46
ನೀವು ಎದೆಗುಂದಬೇಡಿ, ನಿಮ್ಮ ಸೇವೆ ಮುಂದುವರಿಯಬೇಕು

ಮಾತುಕತೆ ವೇಳೆ ಪ್ರಧಾನಿ ಮೋದಿ, ಅಗ್ನಿವೇಶ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅನಿಲ್ ಅಗರ್ವಾಲ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅನಿಲ್ ಅಗರ್ವಾಲ್ ಹಾಗೂ ನಿಮ್ಮ ಪತ್ನಿ ಇಬ್ಬರು ಎದೆಗಂದಬಾರದು. ನಿಮ್ಮ ಕೊಡುಗೆ ಸಮಾಜಕ್ಕೆ ಅತ್ಯವಶ್ಯಕ. ನಿಮ್ಮ ಜೊತೆ ನಾವಿದ್ದೇವೆ. ಇಡೀ ದೇಶದವಿದೆ. ಹೀಗಾಗಿ ನೀವು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

56
ಪ್ರಧಾನಿ ಮೋದಿ ಪಡೆದ ನಾವು ಲಕ್ಕಿ

ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಪಡೆದ ನಾವು ಲಕ್ಕಿ. ದೇಶದ ಜನರ ಮಾತುಗಳನ್ನು, ನಾಡಿ ಮಿಡಿತವನ್ನು ಮೋದಿ ಕೇಳುತ್ತಾರೆ ಎಂದಿದ್ದಾರೆ. ಪ್ರಧಾನಿ ಮೋದಿ ಸಹಾನುಭೂತಿ, ಜನರೊಂದಿಗೆ ಬಲವಾದ ಸಂಪರ್ಕ ಹೊಂದಿರುವ ನಾಯಕ ಎಂದು ಬಣ್ಣಿಸಿದ್ದಾರೆ. ಮೋದಿ ನೀಡಿದ ಬೆಂಬಲ ನಮಗೆ ಮತ್ತಷ್ಟು ಶಕ್ತಿ ನೀಡಿದೆ ಎಂದು ಅನಿಲ್ ಅಗರ್ವಾಲ್ ಹೇಳಿದ್ದಾರೆ.

66
ಅಗ್ನಿವೇಶ್ ದುರಂತ ಸಾವು

ಜನವರಿ 7 ರಂದು ಅನಿಲ್ ಅಗರ್ವಾಲ್ ಅವರ ಏಕೈಕ ಪುತ್ರ ಅಗ್ನಿವೇಶ್ ಅಗರ್ವಾಲ್, ಅಮೆರಿಕದಲ್ಲಿ ಸ್ಕೀಯಿಂಗ್ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದರು. ಈ ದುಃಖದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಸಂತಾಪ ಸೂಚಿಸಿ, ಬೆಂಬಲ ನೀಡಿದ್ದಕ್ಕೆ ಅಗರ್ವಾಲ್ ಧನ್ಯವಾದ ತಿಳಿಸಿದ್ದಾರೆ.

ಅಗ್ನಿವೇಶ್ ದುರಂತ ಸಾವು

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories