ತಿದ್ದುಪಡಿ ಮಾಡುವ ಅಗತ್ಯವಿದೆ
ಶಾರ್ಜಾದ ಭಾರತೀಯ ಸಂಘದ ಅಧ್ಯಕ್ಷ ನಿಸ್ಸಾರ್ ತಲಂಗರ ಅವರು, “ಪ್ರಸ್ತುತ ಮಾರುಕಟ್ಟೆ ಬೆಲೆಯ ಏರಿಳಿತಗಳನ್ನು ಲೆಕ್ಕಿಸದೆ, ನಿರ್ದಿಷ್ಟ ತೂಕದ ಚಿನ್ನಾಭರಣಗಳನ್ನು ಸಾಗಿಸಲು ಅನುಮತಿಸುವ ರೀತಿಯ ನಿಯಮ ಜಾರಿಗೆ ಬರಬೇಕು. ಹೀಗೆ ಮಾಡಿದರೆ ಪ್ರಯಾಣಿಕರಿಗೆ ಕಿರುಕುಳ, ತೊಂದರೆ ಕಡಿಮೆಯಾಗುತ್ತದೆ ಮತ್ತು ಕಸ್ಟಮ್ಸ್ ಅಧಿಕಾರಿಗಳ ಮೇಲಿನ ಅನಗತ್ಯ ಹೊರೆ ಕೂಡ ತಗ್ಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರು ಮುಂದುವರಿದು, “ಹಳೆಯ ನಿಯಮ ಮತ್ತು ಇಂದಿನ ಮಾರುಕಟ್ಟೆ ವಾಸ್ತವಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಅನಗತ್ಯ ವಿವಾದಗಳು, ಭ್ರಷ್ಟಾಚಾರದ ಸಂದರ್ಭಗಳು ಉಂಟಾಗುತ್ತಿವೆ. ಚಿನ್ನಾಭರಣ ಸಾಗಣೆಗಾಗಿ ತೂಕ ಆಧಾರಿತ ವ್ಯವಸ್ಥೆ ಪರಿಹಾರವಾಗಬಹುದು” ಎಂದು ತಿಳಿಸಿದ್ದಾರೆ.