ಅಡವಿಟ್ಟಿರುವ ಚಿನ್ನ ಜಸ್ಟ್ 1 ತಿಂಗಳಲ್ಲಿ ಬಿಡಿಸಿಕೊಳ್ಳೋಕೆ ಇಲ್ಲಿದೆ Astrologer ತಿಳಿಸಿದ ಸರಳ ಪರಿಹಾರ!

Published : Aug 11, 2026, 06:04 PM IST

Pledged Gold Remedy: ಸಂಕಷ್ಟದ ಸಮಯದಲ್ಲಿ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಹಣದ ಮುಗ್ಗಟ್ಟು ಎದುರಾಗುತ್ತಿದ್ದರೆ, ಜ್ಯೋತಿಷಿ ಅಮೃತಾ ಗೌಡ ಅವರು ತಿಳಿಸಿರುವ ಈ ಸರಳ ಉಪ್ಪಿನ ತಂತ್ರವು ನಿಮಗೆ ವರದಾನವಾಗಬಹುದು.

PREV
15
ಸರಳ ಹಾಗೂ ಪರಿಣಾಮಕಾರಿ ಪರಿಹಾರ

ಸರಳ ಹಾಗೂ ಪರಿಣಾಮಕಾರಿ ಪರಿಹಾರ
ಸಂಕಷ್ಟದ ಸಮಯದಲ್ಲಿ ಅಥವಾ ತುರ್ತು ಸಂದರ್ಭಗಳಲ್ಲಿ ನಾವು ಮನೆಯಲ್ಲಿರುವ ಬಂಗಾರವನ್ನು ಬ್ಯಾಂಕ್ ಅಥವಾ ಫೈನಾನ್ಸ್‌ನಲ್ಲಿ ಅಡವಿಡುವುದು ಸಾಮಾನ್ಯ. ಆದರೆ, ಅಡವಿಟ್ಟ ಚಿನ್ನವನ್ನು ಮರಳಿ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಬಡ್ಡಿಯ ಹೊರೆ ಮತ್ತು ಹಣಕಾಸಿನ ಸಮಸ್ಯೆಗಳಿಂದಾಗಿ ಅನೇಕರು ತಮ್ಮ ಒಡವೆಗಳನ್ನು ಮರಳಿ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಈ ಸಂಕಷ್ಟದಿಂದ ಹೊರಬರಲು ಮತ್ತು ಅಡವಿಟ್ಟ ಚಿನ್ನವನ್ನು ಶೀಘ್ರವಾಗಿ ಮರಳಿ ಪಡೆಯಲು Digital creator, ಜ್ಯೋತಿಷಿ ಅಮೃತಾ ಗೌಡ ಅವರು ಒಂದು ಸರಳ ಹಾಗೂ ಪರಿಣಾಮಕಾರಿ ಪರಿಹಾರ ಸೂಚಿಸಿದ್ದಾರೆ.

25
ಪರಿಹಾರ ಮಾಡುವುದು ಹೇಗೆ?

ಪರಿಹಾರ ಮಾಡುವುದು ಹೇಗೆ?
ಈ ವಿಶೇಷ ಪರಿಹಾರಕ್ಕಾಗಿ ನೀವು ಮನೆಯ ಉತ್ತರ ದಿಕ್ಕನ್ನು (North Direction) ಆರಿಸಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕು ಕುಬೇರನ ಸ್ಥಾನವಾಗಿದ್ದು, ಹಣಕಾಸಿನ ಹರಿವಿಗೆ ಇದು ಅತ್ಯಂತ ಸೂಕ್ತವಾಗಿದೆ.

35
ಮೊದಲು ಒಂದು ಸಣ್ಣ ಬೌಲ್‌ಗೆ ಕಲ್ಲುಪ್ಪನ್ನು (Rock Salt) ಹಾಕಿಕೊಳ್ಳಿ

ಮೊದಲು ಒಂದು ಸಣ್ಣ ಬೌಲ್‌ಗೆ ಕಲ್ಲುಪ್ಪನ್ನು (Rock Salt) ಹಾಕಿಕೊಳ್ಳಿ 

ಆ ಉಪ್ಪಿನ ಮೇಲೆ ಒಂದು ಪಚ್ಚೆ ಕರ್ಪೂರವನ್ನು ಇಡಬೇಕು.

ಪಚ್ಚೆ ಕರ್ಪೂರದ ಮೇಲೆ ನೀವು ಅಡವಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಲು ಅಥವಾ ಅಸಲು ಪಾವತಿಸಲು ಎಷ್ಟು ಹಣ ಮೀಸಲಿಟ್ಟಿದ್ದೀರೋ, ಆ ಅಮೌಂಟ್ ಅನ್ನು ಅದರ ಮೇಲೆ ಇಡಬೇಕು.

ಹಣವನ್ನು ಇಟ್ಟ ನಂತರ, "ನನ್ನ ಅಡವಿಟ್ಟ ಚಿನ್ನವು ಶೀಘ್ರವಾಗಿ ಮರಳಿ ಬರಲಿ, ಹಣಕಾಸಿನ ಅಡೆತಡೆಗಳು ನಿವಾರಣೆಯಾಗಲಿ" ಎಂದು ಮನಸಾರೆ ಪ್ರಾರ್ಥಿಸಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಮಂಗಳವಾರ ಅಥವಾ ವಾರದ ಯಾವುದೇ ದಿನದಂದು ಮಾಡಬಹುದು. ಕನಿಷ್ಠ ಒಂದು ದಿನ (24 ಗಂಟೆಗಳು) ಆ ಹಣವನ್ನು ಉಪ್ಪಿನ ಮೇಲೆಯೇ ಇರಲು ಬಿಡಬೇಕು.

45
ಹಣ ಪಾವತಿಸುವ ವಿಧಾನ

ಹಣ ಪಾವತಿಸುವ ವಿಧಾನ
ಮರುದಿನ ಆ ಹಣವನ್ನು ತೆಗೆದುಕೊಂಡು ಹೋಗಿ ಬ್ಯಾಂಕಿಗೆ ಅಥವಾ ಫೈನಾನ್ಸ್‌ಗೆ ಪಾವತಿಸಬೇಕು. ಜ್ಯೋತಿಷಿಗಳ ಪ್ರಕಾರ, ಈ ರೀತಿ ಮಾಡುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗಿ, ಪ್ರತಿ ತಿಂಗಳೂ ಒಂದೊಂದೇ ಒಡವೆಗಳು ನಿಮ್ಮ ಮನೆಗೆ ಮರಳಿ ಬರಲು ಆರಂಭವಾಗುತ್ತವೆ. ಒಂದು ವೇಳೆ ನೀವು ಆನ್‌ಲೈನ್ ಮೂಲಕ (Google Pay ಅಥವಾ UPI) ಹಣ ಪಾವತಿಸುವುದಾದರೆ, ಪಾವತಿಸುವ ಮೊತ್ತವನ್ನು ಒಂದು ಟೈಂ ಈ ಟ್ರಿಕ್ ಉಪಯೋಗಿಸಿ ನಂತರ ಪಾವತಿ ಮಾಡಬಹುದು.

55
ಗಮನಿಸಬೇಕಾದ ಅಂಶ

ಗಮನಿಸಬೇಕಾದ ಅಂಶ
ಈ ಕೆಲಸ ಮುಗಿದ ನಂತರ ಬೌಲ್‌ನಲ್ಲಿರುವ ಉಪ್ಪನ್ನು ಯಾವುದೇ ಕಾರಣಕ್ಕೂ ಅಡುಗೆಗೆ ಅಥವಾ ಇತರ ಕೆಲಸಕ್ಕೆ ಬಳಸಬಾರದು. ಅದನ್ನು ನೀರಿನಲ್ಲಿ ಅಥವಾ ಸಿಂಕ್‌ಗೆ ಹಾಕಿ ಕರಗಿಸಿಬಿಡಬೇಕು. ಈ ಸರಳ ತಂತ್ರವು ನಂಬಿಕೆಯಿಂದ ಮಾಡಿದರೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅಮೃತಾ ಗೌಡ ಅವರು ತಿಳಿಸಿದ್ದಾರೆ.

Read more Photos on
click me!

Recommended Stories