Chanakya Niti: ಪೋಷಕರು ಈ ತಪ್ಪು ಮಾಡಿದ್ರೆ ಮಗುವಿಗೆ ಶತ್ರುಗಳಾಗ್ತಾರೆ!

First Published Mar 31, 2023, 3:16 PM IST

ಆಚಾರ್ಯ ಚಾಣಕ್ಯನ ವಿಚಾರಗಳು ಆಧುನಿಕ ಕಾಲದಲ್ಲೂ ಪ್ರಸ್ತುತವಾಗಿವೆ. ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಇಡೀ ಸಮಾಜದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದಾರೆ. ಅವರು ತಮ್ಮ ಹೆತ್ತವರ ಬಗ್ಗೆ ವಿವರವಾಗಿ ವಿವರಿಸಿದ್ದಾರೆ.

ಆಚಾರ್ಯ ಚಾಣಕ್ಯನ (Acharya Chanakya) ಪ್ರಕಾರ, ಪೋಷಕರು ಅನೇಕ ತಪ್ಪುಗಳನ್ನು ಮಾಡುತ್ತಾರೆ, ಇದು ಮಗು ಮತ್ತು ಪೋಷಕರಿಗೆ ನೋವುಂಟು ಮಾಡುತ್ತೆ. ಅವುಗಳನ್ನು ಸುಧಾರಿಸಬೇಕು. ಹಾಗೆ ಮಾಡೋದ್ರಿಂದ ಮಗುವಿನ ಭವಿಷ್ಯವನ್ನು ಬಂಗಾರವಾಗಿಸಬಹುದು. ಹಾಗೆಯೇ, ಪೋಷಕರು ಸಹ ಸಂತೋಷದ ಜೀವನವನ್ನು ನಡೆಸಬಹುದು. ಇದಲ್ಲದೆ, ಸಂಪತ್ತು ಸಹ ಹೆಚ್ಚಾಗುತ್ತೆ ಎಂದು ತಿಳಿಸಿದ್ದಾರೆ. ಹಾಗಿದ್ರೆ ನಿಮ್ಮ ಮಗುವನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡಲು ಬಯಸೋದಾದ್ರೆ, ಈ ತಪ್ಪುಗಳನ್ನು ಮಾಡಬೇಡಿ. ಅವುಗಳ ಬಗ್ಗೆ ತಿಳಿಯೋಣ -

ಆಚಾರ್ಯ ಚಾಣಕ್ಯನ ಪ್ರಕಾರ, ತಮ್ಮ ಮಗುವಿಗೆ ಮೌಲ್ಯಗಳನ್ನು ನೀಡದ, ಮಗುವನ್ನು ಸುಸಂಸ್ಕೃತ ಮತ್ತು ಸಭ್ಯರನ್ನಾಗಿ ಮಾಡದ ಪೋಷಕರು ತಮ್ಮ ಸ್ವಂತ ಮಕ್ಕಳ ಶತ್ರುಗಳು(Enemy). ಇದು ಮಗುವಿನ ಭವಿಷ್ಯವನ್ನು ಹಾಳುಮಾಡೋದಲ್ಲದೆ ಪೋಷಕರ ಜೀವನವನ್ನು ಶೋಚನೀಯವಾಗಿಸುತ್ತೆ.
 

ಮಕ್ಕಳು ತಪ್ಪು ಹಾದಿಯಲ್ಲಿ ನಡೆಯಲು ಪ್ರಾರಂಭಿಸುತ್ತಾರೆ. ಇದು ಪೋಷಕರು ಸಾಮಾಜಿಕ ಅಪಹಾಸ್ಯಕ್ಕೆ ಒಳಗಾಗಲು ಕಾರಣವಾಗುತ್ತೆ. ಹಾಗೆಯೇ, ಮಕ್ಕಳು ಸಹ ತಪ್ಪು ಕಾರ್ಯಗಳಲ್ಲಿ ತೊಡಗಿದ್ದಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಾರೆ. ಆಗ, ಪೋಷಕರು(Parents) ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾರೆ.

ಮಕ್ಕಳಿಗೆ ಶಿಕ್ಷಣ(Education) ನೀಡೋದು ಪೋಷಕರ ಕರ್ತವ್ಯ. ಇದಕ್ಕಾಗಿ, ಮಗು ಶಿಕ್ಷಣ ಪಡೆಯಲು ಹಿಂಜರಿಯಬಾರದು. ಕೆಲವೊಂದು ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗಬಹುದು. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡದ ಪೋಷಕರು ಸಹ  ತಮ್ಮ ಮಕ್ಕಳ ಶತ್ರುಗಳು. ಉತ್ತಮ ಶಿಕ್ಷಣವನ್ನು ಪಡೆಯದ ಕಾರಣ, ಮಗು ಜೀವನೋಪಾಯಕ್ಕಾಗಿ ಕಷ್ಟಪಡಬೇಕಾಗುತ್ತೆ. ಆಗ, ಪೋಷಕರು ಸಹ ಆರಾಮಾಗಿರಲು ಸಾಧ್ಯವಿಲ್ಲ.

ಆಚಾರ್ಯ ಚಾಣಕ್ಯನು ಮಗುವನ್ನು ಹೆಚ್ಚು ಮುದ್ದಿಸುವುದು ಸಹ ಸರಿಯಲ್ಲ ಎಂದು ಹೇಳುತ್ತಾನೆ. ಇದು ಮಕ್ಕಳನ್ನು ಇನ್ನಷ್ಟು ಹದಗೆಡಿಸುತ್ತೆ. ಇದರಿಂದ, ಮಕ್ಕಳು ಸಹ ಹಠಮಾರಿಗಳಾಗುತ್ತಾರೆ. ಈ ಹಠಮಾರಿತನವು ಮಗು ಮತ್ತು ಅವರ ಪೋಷಕರಿಗೆ ಸೂಕ್ತವಲ್ಲ. ಇದು ಮಕ್ಕಳನ್ನು ಇನ್ನಷ್ಟು ಹಾಳುಮಾಡುತ್ತೆ. ಇದಕ್ಕಾಗಿ ಮಗುವಿಗೆ ಅತಿಯಾದ ಪ್ರೀತಿಯನ್ನು(Love) ನೀಡಬೇಡಿ.

ಮಗುವು ವಿಧೇಯವಾಗಿರಬೇಕು. ಹಾಗಾಗಿ, ತಂದೆ(Father) ಮಕ್ಕಳನ್ನು ಬೆಳೆಸೋದು ಅವಶ್ಯಕ. ತಂದೆಯು ತನ್ನ ಮಗುವಿನ ಪಾಲನೆಯಲ್ಲಿ ಕೊರತೆ ಹೊಂದಿದ್ದರೆ, ಮಗುವಿನ ಸರ್ವತೋಮುಖ ಬೆಳವಣಿಗೆ ಆಗೋದಿಲ್ಲ. ಅಂತಹ ಪೋಷಕರು ತಮ್ಮ ಮಗುವಿಗೆ ಶತ್ರುಗಳಾಗುತ್ತಾರೆ.
 

click me!