ಪ್ರಶಾಂತ್​ ಆಗಿದ್ದ ನಟ ರಿಷಬ್​ ಶೆಟ್ಟಿ ಆಗಿದ್ದು ಹೇಗೆ? 'R' ತಂದ ಅದೃಷ್ಟ- ಕಾಂತಾರಾ ಸ್ಟಾರ್​ ರೋಚಕ ಸ್ಟೋರಿ

Published : Oct 14, 2025, 10:40 PM IST

ಕಾಂತಾರ ಚಿತ್ರದ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಜ್ಯೋತಿಷ ಮತ್ತು ಸಂಖ್ಯಾಶಾಸ್ತ್ರದ ಸಲಹೆಯ ಮೇರೆಗೆ ತಮ್ಮ ಹೆಸರನ್ನು ಬದಲಿಸಿಕೊಂಡ ನಂತರ ಅವರ ವೃತ್ತಿಜೀವನದಲ್ಲಿ ಅದೃಷ್ಟ ಕೈಹಿಡಿಯಿತು. 'R' ಅಕ್ಷರದಿಂದ ಆರಂಭವಾದ  ಹೆಸರು ಯಶಸ್ಸಿಗೆ ಕಾರಣವಾಯಿತು. 

PREV
17
ಜ್ಯೋತಿಷ ಎಂಬ ಸೈನ್ಸ್​

ಜ್ಯೋತಿಷ, ಸಂಖ್ಯಾಶಾಸ್ತ್ರ, ಜಾತಕ... ಇವೆಲ್ಲವನ್ನೂ ನಂಬುವ ಎಷ್ಟು ದೊಡ್ಡ ವರ್ಗ ಇದೆಯೋ, ನಂಬದ ವರ್ಗವೂ ಇದೆ. ಆದರೆ, ಸಿನಿಮಾ, ರಾಜಕಾರಣ ಕ್ಷೇತ್ರದ ಸೆಲೆಬ್ರಿಟಿಗಳ ವಿಷಯಕ್ಕೆ ಬಂದಾಗ ಅದೊಂದು ಘಟ್ಟದಲ್ಲಿ ಎಂಥ ಸ್ಟಾರ್​ಗಳೇ ಆಗಿದ್ದರೂ ಇದನ್ನು ನಂಬಿಯೇ ನಂಬುತ್ತಾರೆ. ಇದೇ ಕಾರಣಕ್ಕೆ ಇಂಗ್ಲಿಷ್​ನಲ್ಲಿ ಎಷ್ಟೋ ನಟ-ನಟಿಯರ ಸ್ಪೆಲ್ಲಿಂಗ್​ಗಳು ವಿಚಿತ್ರ ಆಗಿ ಕಾಣುವುದು ಉಂಟು. ಅವರ ಇಂಗ್ಲಿಷ್​ ಹೆಸರುಗಳನ್ನು ಕನ್ನಡಕ್ಕೆ ಮಾಡಿದರೆ ಅದು ಬೇರೆಯದ್ದೇ ಹೆಸರು ಎನ್ನಿಸುವುದೂ ಉಂಟು. ಎಕ್ಸ್​ಟ್ರಾ ಯಾವುದೋ ಒಂದು ಆಲ್ಫಬೆಟ್​ ಸೇರಿಸಿಕೊಂಡಿವುದನ್ನು ನೋಡಬಹುದು. ಇನ್ನು ಕೆಲವರು ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿರುವುದು ಇದೆ. ಕೆಲವು ಚಿತ್ರನಟರು ಇನಿಷಿಯಲ್​ಗಳನ್ನು ಸೇರಿಸಿಕೊಳ್ಳುವುದನ್ನು ನೋಡಬಹುದು. ಕುತೂಹಲದ ವಿಷಯ ಏನೆಂದರೆ, ಹೀಗೆ ಅಕ್ಷರನೋ, ಹೆಸರೋ ಏನೋ ಒಂದು ಬದಲಾವಣೆ ಮಾಡಿದಾಗ ಅವರ ಸಂಪೂರ್ಣ ಜೀವನವೇ ಬದಲಾಗಿ ಅದೃಷ್ಟ ಅವರ ಕೈಹಿಡಿದಿರುವ ಸಾಕಷ್ಟು ಉದಾಹರಣೆಗಳು ಇವೆ. ಅದಕ್ಕೇ ತಾನೇ ಸರಿಯಾದ ಜ್ಯೋತಿಷ ಶಾಸ್ತ್ರ ಎನ್ನುವುದನ್ನು ಸೈನ್ಸ್​ ಎನ್ನುವುದು.

27
ಕಾಂತಾರದ ಆಕರ್ಷಣೆ

ಇದೀಗ ಕಾಂತಾರ ಚಿತ್ರದ ಮೂಲಕ ಭಾರತದ ಆಚೆಯೂ ಫೇಮಸ್​ ಆಗಿರೋ, ಘಟಾನುಘಟಿ ನಟರು ಕೂಡ ಕಾಂತಾರ ಎಂದು ಹೇಳುವ ಹಾಗೆ ಮಾಡಿದ, ಸ್ಯಾಂಡಲ್​ವುಡ್​ ಕೂಡ ಯಾರೂ ಊಹಿಸದ ರೀತಿಯಲ್ಲಿ ಬ್ಲಾಕ್​ಬಸ್ಟರ್​ ಆಗಬಹುದು ಎಂದು ತೋರಿಸಿಕೊಟ್ಟಿರೋ ರಿಷಬ್​ ಶೆಟ್ಟಿ ಅವರದ್ದೂ ಇದೇ ಸ್ಟೋರಿ. ಅಸಲಿಗೆ ಇವರ ಹೆಸರು ರಿಷಬ್​ ಅಲ್ಲವೇ ಅಲ್ಲ.

37
ಪ್ರಶಾಂತ್​ ಆಗಿದ್ದ ರಿಷಬ್​

ರಿಷಬ್​ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್​ ಶೆಟ್ಟಿ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಆದರೆ ಇವರು ಕೆಲವರ ಸಲಹೆಯ ಮೇರೆಗೆ ಹೆಸರು ಬದಲಿಸಿಕೊಂಡದ್ದೇ ಅದೃಷ್ಟ ದೇವತೆ ಇವರ ಬಳಿ ಬಂದಿದ್ದಾಳೆ. ನಟನೇ ಮೊನ್ನೆ ತಾನೇ ಹೇಳಿಕೊಂಡಂತೆ ಒಂದು ಷೋಗಾಗಿ ಪರದಾಡುವ ಕಾಲವಿತ್ತು. ಆದರೆ ಈಗ ಒಂದೇ ಬಾರಿ ಸಹಸ್ರಾರು ಷೋಗಳು ಹೌಸ್​ಫುಲ್​ ಆಗುತ್ತಿವೆ ಎಂದಿದ್ದಾರೆ.

47
ಅದೃಷ್ಟ ಬೇಕೇ ಬೇಕು

ಇಂಥದ್ದೊಂದು ಸಕ್ಸಸ್​ ಕಾಣಬೇಕಾದರೆ ಅದರ ಹಿಂದೆ ಅಷ್ಟೇ ಮಟ್ಟಿಗಿನ ಶ್ರಮ ಬೇಕೇ ಬೇಕು ಎನ್ನುವುದಾದರೆ, ಇಷ್ಟೊಂದು ಶ್ರಮ ವಹಿಸಿದಾಗಲೂ ಅದೃಷ್ಟ ಒಂದು ಇಲ್ಲ ಎಂದರೆ, ಎಲ್ಲವೂ ನೀರಿನಲ್ಲಿ ಹುಣಸೇ ಹಣ್ಣು ತೋಯ್ದಂತೆಯೇ ಆಗುತ್ತದೆ. ಆದರೆ ರಿಷಬ್​ ಶೆಟ್ಟಿ ಅವರಿಗೆ ಅವರ ಹೆಸರಿನಲ್ಲಿ ಇರುವ R ಕೈಹಿಡಿದಿದೆ ಎನ್ನುವ ನಂಬಿಕೆ ಇದೆ.

57
ಬಾಲ್ಯದಲ್ಲಿಯೇ ಸಿನಿಮಾ ಆಸೆ

ಕುಂದಾಪುರದ ಕಿರಾದಿಯಲ್ಲಿ ಹುಟ್ಟಿದ ರಿಷಬ್​ ಶೆಟ್ಟಿ ಅವರು, ಓದಿನಲ್ಲಿ ಅಷ್ಟಕಷ್ಟೇ. ಚಿಕ್ಕ ವಯಸ್ಸಿನಲ್ಲೇ ಸಿನಿಮಾದಲ್ಲಿ ಮಿಂಚುವ ಆಸೆ, ಹೀರೋ ಆಗುವ ಕನಸು. ನಾಟಕಗಳ ಬಗ್ಗೆ ಆಸಕ್ತಿ ಹೊಂದಿದ್ದ ಅವರಿಗೆ ತುಂಬಾ ಇಷ್ಟವಾಗ್ತಿದ್ದದ್ದು . ಉಪೇಂದ್ರ ಅವರ ಸಿನಿಮಾ ಅಂತೆ. ಅವರ ಸಿನಿಮಾ ನೋಡಿದ ಮೇಲೆ ಚಿತ್ರರಂಗದ ಮೇಲಿನ ಆಸಕ್ತಿ ಹೆಚ್ಚಿತ್ತು. ಆದರೆ ಇವರಿಗೆ ಅದೃಷ್ಟ ಅಷ್ಟು ಸುಲಭವಾಗಿ ದಕ್ಕಿರಲಿಲ್ಲ. ಆರಂಭದಲ್ಲಿ ಹಲವು ಕೆಲಸಗಳನ್ನು ಮಾಡಿದ್ದರೂ ಯಾವುದೂ ಕೈಗೂಡಿರಲಿಲ್ಲ.

67
ಹೆಸರು ಬದಲಿಗೆ ಸೂಚನೆ

ರಿಷಬ್ ಶೆಟ್ಟಿ ಅವರ ತಂದೆ ವೃತ್ತಿಯಲ್ಲಿ ಜ್ಯೋತಿಷಿ ಕೂಡ. ಮಗನಿಗೆ ಹೀಗೇಕೆ ಎಂದು ಅಂದುಕೊಂಡರು ಅವರು. ಆದರೆ ರಿಷಬ್ ಅವರ ಗೆಳೆಯ ಪ್ರಸಾದ್ ಎಂಬುವವರು ಕೊಟ್ಟ ಐಡಿಯಾದಿಂದ ಅದೃಷ್ಟ ಬದಲಾಗಿದೆ. ರಿಷಬ್ ಶೆಟ್ಟಿ ಹುಟ್ಟಿದ್ದು ಜುಲೈ 7ರಂದು. ಮುಂಜಾನೆ ಏಳು ಗಂಟೆಗೆ. ಇಲ್ಲಿ ಎಲ್ಲವೂ ಏಳೇ ಇದೆ. ಅದರ ಪ್ರಕಾರ ಹೆಸರು ಬದಲಿಸಿಕೊಳ್ಳುವಂತೆ ಗೆಳೆಯ ಸೂಚನೆ ನೀಡಿದ್ದರಂತೆ. ಸಂಖ್ಯಾಶಾಸ್ತ್ರದ ಪ್ರಕಾರ 7 ಅದೃಷ್ಟ ತರುವ ಸಂಖ್ಯೆಯಂತೆ ಹೆಸರು ಬದಲಾಯಿಸಲು ಅವರು ಸೂಚಿಸಿದ್ದರು.

77
ಅದೃಷ್ಟ ಬದಲಿಸಿದ 'R'

ಬಳಿಕ ಈ ವಿಷಯವನ್ನು ತಂದೆಯ ಬಳಿ ಪ್ರಶಾಂತ್​ ಕೇಳಿದಾಗ, ತಂದೆ ಎಲ್ಲವನ್ನೂ ಅಳೆದು ತೂಗಿ R ಇಂದ ಬರುವ ಹೆಸರನ್ನು ಇಟ್ಟುಕೊಳ್ಳುವಂತೆ ಹೇಳಿದ್ದರು. ಆರ್ ಎಂದರೆ ರಾಜ್​ಕುಮಾರ್, ರಜನಿಕಾಂತ್ ಎಂದೆಲ್ಲ ವಿವರಿಸಿದ್ದರು. ಇದನ್ನು ಕೇಳಿ ಪ್ರಶಾಂತ್​ ಶೆಟ್ಟಿ, ರಿಷಬ್​ ಶೆಟ್ಟಿ ಆದರು. ಆರಂಭದಲ್ಲಿ ಅಷ್ಟೊಂದು ಸಕ್ಸಸ್​ ಕಾಣಲಿಲ್ಲ್. ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ರಿಕ್ಕಿ’ ಕೂಡ ಸಾಧಾರಣ ಗೆಲುವು ಕಂಡಿತು. ಕೊನೆಗೆ ‘ಕಿರಿಕ್ ಪಾರ್ಟಿ’ ಮೆಚ್ಚುಗೆ ಪಡೆಯಿತು. 2018ರಲ್ಲಿ ರಿಲೀಸ್ ಆದ ಅವರ ನಿರ್ದೇಶನದ ‘ಸಹಿಪ್ರಾ ಶಾಲೆ ಕಸಾರಗೋಡು’ ಸಿನಿಮಾ ಭಾರಿ ಪ್ರಶಂಸೆ ಪಡೆಯಿತು. ಆಮೇಲೆ ಕಾಂತಾರ-2 ಈಗ ಕಾಂತಾರ-01. ಇದರ ಬಗ್ಗೆ ಹೇಳುವುದೇ ಬೇಡ ಅಲ್ಲವೆ?

Read more Photos on
click me!

Recommended Stories