ಮನೆಯಿಂದ ಹೊರಹೋಗುವಾಗ ಈ ಮಂತ್ರ ಪಠಿಸಿದ್ರೆ ಅದೃಷ್ಟ ನಿಮ್ಮದಾಗುತ್ತೆ!

First Published Oct 8, 2022, 1:48 PM IST

ಧರ್ಮಗ್ರಂಥಗಳ ಪ್ರಕಾರ, ಮಂತ್ರ ಪಠಿಸೋದು ನಮ್ಮ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತೆ. ಈ ಮಂತ್ರಗಳನ್ನು ಪಠಿಸೋದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ದೂರ ಮಾಡಬಹುದು ಮತ್ತು ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತೆ ಎಂದು ನಂಬಲಾಗಿದೆ. ಅಂತಹ ಮಂತ್ರಗಳು ಯಾವುವು? ಅವುಗಳನ್ನು ಪಠಿಸೋದ್ರಿಂದ ಏನಾಗುತ್ತೆ? ಇವುಗಳ ಬಗ್ಗೆ ನೀವು ತಿಳಿಯಬೇಕು ಅನ್ನೋದಾದ್ರೆ ಮುಂದೆ ಓದಿ.

ಜೀವನದಲ್ಲಿ ಸಕಾರಾತ್ಮಕತೆಯನ್ನು(Positivity) ಹೆಚ್ಚಿಸುವ ಅನೇಕ ಮಂತ್ರಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ, ಅವುಗಳ ಶುದ್ಧ ಉಚ್ಚಾರಣೆಯು ಸಂಪತ್ತು, ವೈಭವ, ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತೆ. ಇದರೊಂದಿಗೆ, ಅಂತಹ ಅನೇಕ ಮಂತ್ರಗಳನ್ನು ಸಹ ವಿವರಿಸಲಾಗಿದೆ, ಅವು ಯಾವುದೇ ಕೆಲಸದಲ್ಲಿ ಯಶಸ್ಸನ್ನು ತರುತ್ತೆ. ಹಾಗಾಗಿ, ಮನೆಯಿಂದ ಹೊರಹೋಗುವಾಗ ಯಾವ ಮಂತ್ರಗಳನ್ನು ಪಠಿಸುವ ಮೂಲಕ ವ್ಯಕ್ತಿ ಯಶಸ್ಸನ್ನು ಪಡೆಯಬಹುದು ಎಂದು ಇಲ್ಲಿ  ತಿಳಿದುಕೊಳ್ಳಿ.

ಮಂತ್ರವನ್ನು(Mantra) ಪಠಿಸಿದರೆ ಏನಾಗುತ್ತೆ ಅನ್ನೋದನ್ನು ತಿಳಿಯೋಣ
ಪ್ರಬಿಸಿ ನಗರ ಕಿಜೆ ಸಾಬ್ ಕಾಜಾ, ಹೃದಯ್ ರಾಖಿ ಕೋಸಲ್ಪುರ್ ರಾಜಾ..
ಗರಲ್ ಸುಧಾ ರಿಪು ಕರ್ಹಿನ್ ಮಿತಾಯ್, ಗೋಪಡ್ ಸಿಂಧು ಸಿತ್ಲೈ..

ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಅಥವಾ ಮನೆಯಿಂದ ಹೊರಹೋಗೋ ಮೊದಲು ಈ ಮಂತ್ರ ಪಠಿಸೋದ್ರಿಂದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಈ ಮಂತ್ರವನ್ನು ಪಠಿಸುವಾಗ, ಭಗವಾನ್ ಶ್ರೀ ರಾಮನನ್ನು(Lord Sri Ram) ನೆನಪಿಸಿಕೊಳ್ಳಿ ಮತ್ತು ಈ ಮಂತ್ರವನ್ನು ಎರಡರಿಂದ ಮೂರು ಬಾರಿ ಪುನರಾವರ್ತಿಸಿ. ಇದರಿಂದ ಸಕಾರಾತ್ಮಕತೆ ಹರಡುತ್ತೆ.
 

ಭಗವಾನ್ ಶ್ರೀ ರಾಮನಿಗೆ ಸಮರ್ಪಿತವಾದ ಈ ಮಂತ್ರವನ್ನು ಪಠಿಸಿ
ರಾಮ ಲಕ್ಷ್ಮಣೌ ಸೀತಾ ಚ ಸುಗ್ರೀವಾನ್ ಹನುಮಾನ್ ಕಾಪಿ(Hanuman)
ಪಂಚೈತನ್ ಸ್ಮಾರ್ತೌ ನಿತ್ಯಂ ಮಹಾಬಧ ಪ್ರಮುಚ್ಯತೇ ।

ಭಗವಾನ್ ಶ್ರೀ ರಾಮನಿಗೆ ಸಮರ್ಪಿತವಾದ ಈ ಮಂತ್ರವನ್ನು ಪಠಿಸುವ ಮೂಲಕ, ಅನೇಕ ಕಾರ್ಯಗಳು ಯಶಸ್ವಿಯಾಗುತ್ತವೆ(Success) ಮತ್ತು ಕೆಲಸದಲ್ಲಿ ಉದ್ಭವಿಸುವ ಅಡೆತಡೆಗಳ ಭಯವನ್ನು ತೊಡೆದುಹಾಕಲಾಗುತ್ತೆ. ಆದ್ದರಿಂದ, ಮನೆಯಿಂದ ಹೊರಡುವಾಗ ಅಥವಾ ಮೊದಲು, ಈ ಮಂತ್ರವನ್ನು ಕೈಮುಗಿದು ಪಠಿಸಿ. ಎಲ್ಲಾ ಕೆಲಸದಲ್ಲೂ ಹೆಚ್ಚು ವಿಫಲರಾಗುವವರು ಸಹ ಈ ಮಂತ್ರವನ್ನು ಪಠಿಸಬೇಕು. 

ಈ ಮಂತ್ರ ಪರಿಣಾಮಕಾರಿ
ಶ್ರೀ ಗಣೇಶಾಯ ನಮಃ.

ಹಿಂದೂ ಧರ್ಮದಲ್ಲಿ, ಗಣೇಶನನ್ನು(Lord Ganesh) ಎಲ್ಲಾ ದೇವತೆಗಳಲ್ಲಿ ಮೊದಲು ಪೂಜಿಸಲಾಗುತ್ತೆ. ಆದ್ದರಿಂದ, ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಅವನನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ, ಮನೆಯಿಂದ ಹೊರಹೋಗುವ ಮೊದಲು ಭಗವಾನ್ ಶ್ರೀ ಗಣೇಶನನ್ನು ಪೂಜಿಸುವ ಮೂಲಕ ಮತ್ತು ಈ ಮಂತ್ರವನ್ನು ಕನಿಷ್ಠ ಹನ್ನೊಂದು ಬಾರಿ ಜಪಿಸೋದರಿಂದ, ಎಲ್ಲಾ ಬಿಕ್ಕಟ್ಟು ನಿವಾರಣೆಯಾಗುತ್ತೆ ಮತ್ತು ಯಶಸ್ಸನ್ನು ಸಾಧಿಸಲಾಗುತ್ತೆ  ಎಂದು ನಂಬಲಾಗಿದೆ.
 

click me!