ಈ ರೀತಿ ಹಣ ಗಳಿಸಿದ್ರೆ ಬಡತನ ನಿಮ್ಮ ಬಳಿ ಓಡೋಡಿ ಬರುತ್ತೆ ಎಚ್ಚರ !

First Published Oct 7, 2022, 4:02 PM IST

ಆಚಾರ್ಯ ಚಾಣಕ್ಯನನ್ನು ವಿಶ್ವದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಅನೇಕ ಯುವಕರಿಗೆ ಶಿಕ್ಷಕರಾಗಿ ಮತ್ತು ಮಾರ್ಗದರ್ಶಕರಾಗಿ ಸಲಹೆಗಳನ್ನು ನೀಡಿದರು. ಆಚಾರ್ಯ ಚಾಣಕ್ಯನು ಸಂಪತ್ತಿನ ಬಗ್ಗೆ ಮತ್ತು ಶಿಕ್ಷಣದ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ. ಅವರು ಹೇಳಿದ ಮಾಹಿತಿ ಏನು? ಅದರಿಂದ ಏನು ಸಾಧ್ಯವಾಗುತ್ತೆ ಅನ್ನೋದನ್ನು ನೋಡೋಣ. 

ಆಚಾರ್ಯ ಚಾಣಕ್ಯನನ್ನು ವಿಶ್ವದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಾಣಕ್ಯ ನೀತಿಯ ಮೂಲಕ ಅವರು ಅಸಂಖ್ಯಾತ ಯುವಕರಿಗೆ ಮಾರ್ಗದರ್ಶನ ನೀಡಿದ್ದರು. ರಾಜಕೀಯ, ರಾಜತಾಂತ್ರಿಕತೆ ಮತ್ತು ಯುದ್ಧಗಳಲ್ಲಿ ನಿಪುಣರಾಗಿರುವ ಆಚಾರ್ಯ ಚಾಣಕ್ಯನು (Acharya CHanakya) ಈ ಎಲ್ಲಾ ವಿಷಯಗಳ ಬಗ್ಗೆ ನೀತಿಗಳನ್ನು ರೂಪಿಸಿದ್ದಷ್ಟೇ ಅಲ್ಲ. ಜೊತೆಗೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಅವರ ಜ್ಞಾನವು ಪ್ರಶಂಸನೀಯವಾಗಿತ್ತು. ಆಚಾರ್ಯರ ನೀತಿಗಳನ್ನು ಓದುವ ಮತ್ತು ಜೀವನದಲ್ಲಿ ಅವುಗಳನ್ನು ಅನುಸರಿಸುವ ವ್ಯಕ್ತಿಯು ಎಂದಿಗೂ ಸೋಲನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ. ಅವನು ಯಾವಾಗಲೂ ಯಶಸ್ಸಿನ ಏಣಿಯನ್ನು ಏರುತ್ತಾನೆ.

ಆಚಾರ್ಯ ಚಾಣಕ್ಯನು ಸಂಪತ್ತಿಗೆ ಸಂಬಂಧಿಸಿದಂತೆ ಅನೇಕ ನೀತಿಗಳನ್ನು ರೂಪಿಸಿದ್ದನು. ಈ ನೀತಿಗಳನ್ನು ಅರ್ಥಮಾಡಿಕೊಂಡ ನಂತರ, ವ್ಯಕ್ತಿಯು ಯಾವುದೇ ರೀತಿಯ ವೈಫಲ್ಯವನ್ನು ಎದುರಿಸುವುದಿಲ್ಲ. ಚಾಣಕ್ಯ ನೀತಿಯ ಈ ಭಾಗದಲ್ಲಿ, ತಾಯಿ ಲಕ್ಷ್ಮಿಯನ್ನು (Goddess Lakshmi) ಹೇಗೆ ಸಂತೋಷವಾಗಿಡಲಾಗುತ್ತದೆ ಮತ್ತು ಯಾವ ರೀತಿಯ ಸಂಪತ್ತು ಶೀಘ್ರವಾಗಿ ನಾಶವಾಗುತ್ತೆ ಎಂಬುದನ್ನು ತಿಳಿದುಕೊಳ್ಳೋಣ.

Latest Videos


ಚಾಣಕ್ಯ ನೀತಿ: ಈ ರೀತಿಯ ಹಣ ನಾಶವಾಗುತ್ತದೆ

ಚಾಣಕ್ಯ ನೀತಿಯ ಒಂದು ಶ್ಲೋಕದಲ್ಲಿ, ಲಕ್ಷ್ಮಿ ಚಂಚಲ ಸ್ವಭಾವದವಳು ಎಂದು ಹೇಳಲಾಗಿದೆ. ಆದರೆ ಇದರ ಹೊರತಾಗಿಯೂ, ಒಬ್ಬ ವ್ಯಕ್ತಿಯು ಕಳ್ಳತನ, ಜೂಜಾಟ, ಅನ್ಯಾಯ ಮತ್ತು ಮೋಸದ ಮೂಲಕ ಹಣ ಗಳಿಸಿದರೆ, ಆ ಹಣವು ಶೀಘ್ರದಲ್ಲೇ ನಾಶವಾಗುತ್ತದೆ. ಆದ್ದರಿಂದ, ಅನ್ಯಾಯ ಅಥವಾ ಸುಳ್ಳು ಹೇಳುವ ಮೂಲಕ ಎಂದಿಗೂ ಹಣವನ್ನು ಗಳಿಸಬಾರದು. 

ಮೋಸದ ಮೂಲಕ ಗಳಿಸಿದ ಸಂಪತ್ತನ್ನು ಪಾಪ ಎಂದು ಹೇಳಲಾಗುತ್ತೆ. ಈ ಹಣವು ಕೆಲವು ದಿನಗಳವರೆಗೆ ನಿಮ್ಮ ದುರಾಸೆಯನ್ನು ಕಡಿಮೆ ಮಾಡಬಹುದು, ಆದರೆ ಅದಕ್ಕಿಂತ ಹೆಚ್ಚು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಒಬ್ಬರು ಈ ರೀತಿಯ ಹಣವನ್ನು ಗಳಿಸುವುದನ್ನು ತಪ್ಪಿಸಬೇಕು.

ಬೀಜವನ್ನು ಬಿತ್ತುವವನು ಅದೇ ಫಲವನ್ನು ಪಡೆಯುತ್ತಾನೆ
ಆಚಾರ್ಯ ಚಾಣಕ್ಯನು ಮತ್ತೊಂದು ಶ್ಲೋಕದ ಮೂಲಕ ಒಂದು ಪ್ರಮುಖ ಶಿಕ್ಷಣವನ್ನು ನೀಡುತ್ತಿದ್ದಾನೆ. ಬಡತನ, ರೋಗ, ದುಃಖ, ಬಂಧನ ಮತ್ತು ದುಶ್ಚಟಗಳೆಲ್ಲವೂ ಮಾನವನ ಕರ್ಮಗಳ ಫಲ ಎಂದು ಅವರು ಹೇಳಿದ್ದಾರೆ. ಅದೇ ಬೀಜವನ್ನು ಬಿತ್ತಿದವನು ಅದೇ ಫಲವನ್ನು ಪಡೆಯುತ್ತಾನೆ. ಆದ್ದರಿಂದ, ಒಬ್ಬರು ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡಬೇಕು.

chanakya

ಆಚಾರ್ಯ ಚಾಣಕ್ಯನು ಒಬ್ಬ ವ್ಯಕ್ತಿಯು ಯಾವಾಗಲೂ ದಾನವನ್ನು ಮಾಡಬೇಕು ಮತ್ತು ಇನ್ನೊಬ್ಬರಿಗೆ ನೋವು ಮಾಡುವ ಅಥವಾ ಸುಳ್ಳು ಹೇಳುವಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು ಎಂದು ಹೇಳುತ್ತಿದ್ದಾನೆ. ಈ ಎಲ್ಲಾ ಕ್ರಿಯೆಗಳು ವ್ಯಕ್ತಿಯ ಭವಿಷ್ಯವನ್ನು (future) ನಿರ್ಧರಿಸುತ್ತವೆ.

ಯಾರೂ ಶ್ರೀಮಂತರಲ್ಲ ಎನ್ನಬಾರದು
ಆಚಾರ್ಯ ಚಾಣಕ್ಯನು ಒಬ್ಬ ವ್ಯಕ್ತಿಯು ಎಂದಿಗೂ ತಾನು ಶ್ರೀಮಂತರಲ್ಲ ಎಂದು ಪರಿಗಣಿಸಬಾರದು ಆದರೆ ನಮ್ಮನ್ನು ನಾವು ಶ್ರೀಮಂತನೆಂದು ಪರಿಗಣಿಸಬೇಕು ಎಂದು ಹೇಳುತ್ತಿದ್ದಾನೆ. ಜ್ಞಾನವು ಎಲ್ಲಾಕ್ಕಿಂತ ಶ್ರೇಷ್ಟವಾದ ಶ್ರೀಮಂತಿಕೆ ಎನ್ನುತ್ತಾರೆ. ಆದ್ದರಿಂದ, ಜ್ಞಾನವನ್ನು ಸಂಪಾದಿಸಲು ಯಾವಾಗಲೂ ಹಿಂಜರಿಯಬಾರದು. ಬದಲಾಗಿ, ವಯಸ್ಸಿನೊಂದಿಗೆ, ಕಲಿಕೆಯ ವ್ಯಾಪ್ತಿ ಸಹ ಹೆಚ್ಚಾಗಬೇಕು. ಇದು ಸಮಾಜದಲ್ಲಿ ವ್ಯಕ್ತಿಗೆ ಗೌರವವನ್ನು ಹೆಚ್ಚಿಸುವುದಲ್ಲದೇ, ಅವನಿಗೆ ಹಣದ ಕೊರತೆ ಬಾರದಂತೆ ನೋಡಿಕೊಳ್ಳುತ್ತೆ.

click me!