ಕರ್ಪೂರ ಪ್ರತಿ ಮನೆಯಲ್ಲೂ ಇರುವ ಒಂದು ಮುಖ್ಯ ವಸ್ತು. ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಸ್ಥಾನಮಾನವಿದೆ. ಹೆಚ್ಚಾಗಿ ಪೂಜೆ ಮತ್ತು ಆರಾಧನೆಗಳಲ್ಲಿ ಬಳಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಕರ್ಪೂರದಿಂದ ಆರತಿ ಮಾಡುತ್ತಾರೆ. ದೇವರುಗಳನ್ನು ಸಂತೋಷಪಡಿಸುತ್ತದೆ ಎಂದು ನಂಬಲಾಗಿದೆ. ಕರ್ಪೂರ ಆರತಿಗೆ ಮಾತ್ರವಲ್ಲ, ದುಷ್ಟ ಶಕ್ತಿಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
26
ದೂರವಾಗುತ್ತದೆ ನಕಾರಾತ್ಮಕ ಶಕ್ತಿ
ಕರ್ಪೂರವು ಅತ್ಯಂತ ಶಕ್ತಿಶಾಲಿ ಪವಿತ್ರ ವಸ್ತುವಾಗಿದ್ದು, ಇದು ನಕಾರಾತ್ಮಕ ಶಕ್ತಿ, ದುಷ್ಟ ಶಕ್ತಿಗಳು, ಕಣ್ಣಿನ ದೃಷ್ಟಿ ಇತ್ಯಾದಿಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿ ಪೂಜಾ ವಿಧಿಗಳ ನಂತರ ಕರ್ಪೂರದೊಂದಿಗೆ 2-3 ಲವಂಗವನ್ನು ಹಾಕಿ ದೀಪ ಹಚ್ಚಬೇಕು. ಅದರಿಂದ ಬರುವ ಬಲವಾದ ಪರಿಮಳವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.
36
ಗ್ರಹ ದೋಷ ನಿವಾರಣೆ
ಗ್ರಹ ದೋಷಗಳ ವಿರುದ್ಧ ಹೋರಾಡುವ ಶಕ್ತಿ ಕರ್ಪೂರಕ್ಕಿದೆ. ಸಾಮಾನ್ಯವಾಗಿ ರಾಹು, ಕೇತು, ಶುಕ್ರ, ಶನಿ ಮುಂತಾದ ಗ್ರಹಗಳ ಆಶೀರ್ವಾದ ಪಡೆಯಲು ಕರ್ಪೂರವನ್ನು ಪ್ರತಿದಿನ ಬಳಸುತ್ತಾರೆ. ಈಗ ಗ್ರಹಗಳ ದೋಷ ನಿವಾರಣೆಗೆ ಹಸುವಿನ ಸಗಣಿಯಲ್ಲಿ 4-5 ಕರ್ಪೂರವನ್ನು ಹಚ್ಚಿಡಬೇಕು.
ಕರ್ಪೂರವು ಅದೃಷ್ಟದ ಸಂಕೇತವಾಗಿರುವುದರಿಂದ ನಿಮ್ಮ ಪರ್ಸ್ನಲ್ಲಿ ಕರ್ಪೂರವನ್ನು ಇಟ್ಟುಕೊಂಡರೆ ದೊಡ್ಡ ಬದಲಾವಣೆಯನ್ನು ಕಾಣುವಿರಿ. ನೀವು ಒಳ್ಳೆಯ ಕೆಲಸಕ್ಕೆ ಹೋದರೆ ಅಥವಾ ಮೊದಲ ದಿನ ಕೆಲಸಕ್ಕೆ ಹೋಗುತ್ತಿದ್ದರೆ ಕರ್ಪೂರವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ.
56
ಸಂಪತ್ತು, ಸಮೃದ್ಧಿಯನ್ನು ಆಕರ್ಷಿಸಲು
ಕರ್ಪೂರವು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ, ಆದ್ದರಿಂದ ಇದು ನಿಮ್ಮ ಜೀವನದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಆಕರ್ಷಿಸಲು ಬಹಳ ಸಹಾಯ ಮಾಡುತ್ತದೆ.
66
ಮನೆಯ ವಾತಾವರಣ ಆಹ್ಲಾದಕರವಾಗಿಸಲು
ಆದ್ದರಿಂದ ನೀವು ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಇಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಗಳು ದೂರವಾಗಿ, ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.