2028ರಿಂದ ಡಿಕೆಶಿಗೆ ಡೇಂಜರ್​: ವಿಜಯ್​ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ; ಗುರೂಜಿ ಭವಿಷ್ಯವಾಣಿ ಏನಿದೆ

Published : May 31, 2026, 11:51 AM IST

ಆರ್ಯವರ್ಧನ್ ಗುರೂಜಿ ಅವರು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದು, 2028 ರಿಂದ ಅವರಿಗೆ ಅಪಾಯದ ಅವಧಿ ಎಂದು ಹೇಳಿದ್ದಾರೆ. ಹಾಗೆಯೇ, ವಿಜಯ್ ಎರಡು ಬಾರಿ ಸಿಎಂ ಆಗಲಿದ್ದು, ನಂತರ ಜೈಲಿಗೆ ಹೋಗುವ ಸಾಧ್ಯತೆಯಿದ್ದು, ಆ ವೇಳೆ ತ್ರಿಷಾ ಸಿಎಂ ಆಗ್ರಾರೆ ಎಂದು ಭವಿಷ್ಯ ನುಡಿದಿದ್ದಾರೆ.

PREV
15
ಆರ್ಯವರ್ಧನ್​ ಗುರೂಜಿ ಭವಿಷ್ಯ

ಕೊನೆಗೂ ಡಿ.ಕೆ.ಶಿವಕುಮಾರ್​ ಅವರು ಮುಖ್ಯಮಂತ್ರಿಯಾಗುವ ಹಾದಿಯಲ್ಲಿ ಇದ್ದಾರೆ. ಇವರು ಸಿಎಂ ಆಗಲಿದ್ದಾರೆ ಎಂದು ಆರ್ಯವರ್ಧನ್​ ಗುರೂಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದೇ ರೀತಿ ತಮಿಳುನಾಡಿನಲ್ಲಿ ಜೋಸೆಫ್​ ವಿಜಯ್​ ಅವರ ಗೆಲುವಿನ ಬಗ್ಗೆಯೂ ಸೂಚನೆ ಕೊಟ್ಟಿದ್ದರು.

25
2028ರಿಂದ ಸಮಸ್ಯೆ

ಇದೀಗ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಬಾಸ್​ಟಿವಿಗೆ ನೀಡಿರುವ ಸಂದರ್ಶನದಲ್ಲಿ ಆರ್ಯವರ್ಧನ್​ ಗುರೂಜಿ, 2028ರಿಂದ ಸೆಪ್ಟೆಂಬರ್​ನಿಂದ ರಾಹುಭುಕ್ತಿ ಬರಲಿದೆ. 2031ರವರೆಗೆ ಡಿ.ಕೆ.ಶಿವಕುಮಾರ್​ ಅವರ ಜಾತಕದ ಪ್ರಕಾರ ಸ್ವಲ್ಪ ಅಪಾಯವಿದೆ. ಇದು ಅವರಿಗೆ ಡೇಂಜರಸ್​ ಅವಧಿಯಾಗಿದೆ. ಆದರೆ ಅದಕ್ಕೆ ಸರಿಯಾದ ಪರಿಹಾರ ಮಾಡಿಕೊಂಡರೆ ಮುಂದೆ ಅವರಿಗೆ ಯಾವುದೇ ಕಂಟಕ ಇರುವುದಿಲ್ಲ. ರಾಜಯೋಗವಿದ್ದು, ತುಂಬಾ ಒಳ್ಳೆಯದಾಗಲಿದೆ ಎಂದಿದ್ದಾರೆ.

35
ಒಡಕು ಬರಲ್ಲ

ಕಾಂಗ್ರೆಸ್​ನಲ್ಲಿ ಸದ್ಯ ಯಾವುದೇ ಒಡಕು ಬರುವುದಿಲ್ಲ. ಡಿ.ಕೆ.ಶಿವಕುಮಾರ್​ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ. 2028ರಲ್ಲಿ ಸ್ವಲ್ಪ ಜರಕ್​ ಹೊಡೆಯಲಿದೆ. ಅದನ್ನು ಸರಿ ಮಾಡಿಕೊಳ್ಳಬೇಕಿದೆ ಅಷ್ಟೇ ಎಂದಿದ್ದಾರೆ ಗುರೂಜಿ.

45
ಪ್ರಧಾನಿಯಾಗೋ ಯೋಗ

ಇದೇ ವೇಳೆ ತಮಿಳುನಾಡಿನ ಸಿಎಂ ದಳಪತಿ ಜೋಸೆಫ್​ ವಿಜಯ್​ ಅವರ ಭವಿಷ್ಯದ ಬಗ್ಗೆಯೂ ಮಾತನಾಡಿರುವ ಆರ್ಯವರ್ಧನ್​ ಗುರೂಜಿ, ಕಟಕ ರಾಶಿ, ಕಟಕ ಲಗ್ನದ ವಿಜಯ್​ ಅವರಿಗೆ ಪ್ರಧಾನಿಯಾಗುವ ಎಲ್ಲಾ ಯೋಗವೂ ಇದೆ. ಆದರೆ ಇನ್ನು 10 ವರ್ಷದಲ್ಲಿ ಅವರಿಗೆ ಒಂದು ಅಪಾಯವೂ ಇದೆ ಎಂದಿದ್ದಾರೆ.

55
ವಿಜಯ್​ ಜೈಲಿಗೆ

ವಿಜಯ್​ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ, ಇದೇ ವೇಳೆ ಅವರಿಗೆ ಜೈಲಿಗೆ ಹೋಗುವ ಯೋಗವಿದೆ. ಆ ಸಮಯದಲ್ಲಿ ತ್ರಿಷಾ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಗುರೂಜಿ ಹೇಳಿದ್ದಾರೆ.

Read more Photos on
click me!

Recommended Stories